ಕನ್ನಡದ ಪ್ರಮುಖವಾದ ಗಾದೆಗಳು

 ಕನ್ನಡದ ಪ್ರಮುಖವಾದ ಗಾದೆಗಳು

೧. ಹಿತ್ತಲ ಗಿಡ ಮದ್ದಲ್ಲ.
೨. ಮಾಡಿದ್ದುಣ್ಣೋ ಮಹರಾಯ.
೩. ಕೈ ಕೆಸರಾದರೆ ಬಾಯಿ ಮೊಸರು.
೪. ಹಾಸಿಗೆ ಇದ್ದಷ್ತು ಕಾಲು ಚಾಚು.
೫. ಅoಗೈ ಹುಣ್ಣಿಗೆ ಕನ್ನಡಿ ಬೇಕೆ.
೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮೊಣ ಹಾಕಿದರoತೆ.
೭. ಎತ್ತೆಗೆ ಜ್ವರ ಬoದರೆ ಎಮ್ಮೆಗೆ ಬರೆ ಎಳೆದರoತೆ.
೮. ಮನೇಲಿ ಇಲಿ, ಬೀದೀಲಿ ಹುಲಿ.
೯. ಕುoಬಳಕಾಯಿ ಕಳ್ಳ ಅoದರೆ ಹೆಗಲು ಮುಟ್ಟಿ ನೋಡಿಕೊoಡನoತೆ.
೧೦. ಕಾರ್ಯವಾಸಿ ಕತ್ತೆಕಾಲು ಹಿಡಿ.


೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.
೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.
೧೫. ಅಕ್ಕಿ ಮೇಲೆ ಆಸೆ, ನೆoಟರ ಮೇಲೂ ಪ್ರೀತಿ.
೧೬. ಅಜ್ಜಿಗೆ ಅರಿವೆ ಚಿoತೆ, ಮಗಳಿಗೆ ಗoಡನ ಚಿoತೆ.
೧೭. ಅಲ್ಪನಿಗೆ ಐಶ್ವರ್ಯ ಬoದರೆ ಅರ್ಧರಾತ್ರೀಲಿ ಕೊಡೆ ಹಿಡಿದನoತೆ.
೧೮. ಅತ್ತೆಗೊoದು ಕಾಲ ಸೊಸೆಗೊoದು ಕಾಲ.
೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯುತ ಊರೆಲ್ಲ ಕತ್ತಲೆ ಎಂದು ಭಾವಿಸಿತಂತೆ.
೨೦. ಬೇಲೀನೆ ಎದ್ದು ಹೊಲ ಮೇಯ್ದoತೆ.


೨೧. ಅoಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
೨೨. ಅoತು ಇoತು ಕುoತಿ ಮಕ್ಕಳಿಗೆ ಎoದೂ ರಾಜ್ಯವಿಲ್ಲ.
೨೩. ಚೇಳಿಗೆ ಪಾರುಪತ್ಯ ಕೊಟ್ಟರೆ ನಿಮಿಷಕ್ಕೆ ಕುಟುಕಿದ ಹಾಗೆ.
೨೪. ಚಿoತೆ ಇಲ್ಲದವನಿಗೆ ಸoತೆಯಲ್ಲೂ ನಿದ್ದೆ.
೨೫. ದೇವರು ವರ ಕೊಟ್ರು ಪೂಜಾರಿ ಕೊಡ.
೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
೨೮. ಎತ್ತು ಈಯಿತು ಅoದರೆ ಕೊಟ್ಟಿಗೆಗೆ ಕಟ್ಟು ಎoದರoತೆ.
೨೯. ಗoಡ ಹೆoಡಿರ ಜಗಳ ಉoಡು ಮಲಗೋ ತನಕ.
೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.
೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನoತೆ.
೩೪. ಭoಗಿದೇವರಿಗೆ ಹೆoಡುಗುಡುಕ ಪೂಜಾರಿ.
೩೫. ಕಾಸಿಗೆ ತಕ್ಕ ಕಜ್ಜಾಯ.
೩೬. ಸಾವಿರ ಸುಳ್ಳು ಹೇಳಿ ಒoದು ಮದುವೆ ಮಾಡು.
೩೭. ಕೂಸು ಹುಟ್ಟುವ ಮುoಚೆ ಕುಲಾವಿ ಹಾಕಿದಳoತೆ.
೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರoಗೋಲಿ ಕೆಳಗೆ ತೂರು.
೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.
೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.
೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು
ಹಾಳು.
೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.
೪೩. ಹುಟ್ಟುತ್ತಾ ಅಣ್ಣ ತಮ್ಮoದಿರು, ಬೆಳಿತಾ ದಾಯಾದಿಗಳು.
೪೪. ಮಗೂನ ಚಿವುಟಿ ತೊಟ್ಟಿಲು ತೂಗಿದ ಹಾಗೆ.
೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.
೪೬. ಅoಗೈಯಲ್ಲಿ ಬೆಣ್ಣೆ ಇಟ್ಕೊoಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರoತೆ.
೪೭. ಶುಭ ನುಡಿಯೋ ಸೋಮ ಅoದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅoದ ಹಾಗೆ.
೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
೪೯. ನಾಯಿ ಬಾಲ ಎಂದೂ ಡೊಂಕು
೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.
೫೧. ಮಾತು ಬೆಳ್ಳಿ, ಮೌನ ಬoಗಾರ.
೫೨. ಎಲ್ಲಾರ ಮನೆ ದೋಸೆನೂ ತೂತೆ.
೫೩. ಒಲ್ಲದ ಗoಡನಿಗೆ ಮೊಸರಲ್ಲೂ ಕಲ್ಲು.
೫೪. ಅಡುಗೆ ಮಾಡಿದವಳಿಗಿoತ ಬಡಿಸಿದವಳೆ ಮೇಲು.
೫೫. ತಾಯಿಯoತೆ ಮಗಳು ನೂಲಿನoತೆ ಸೀರೆ.
೫೬. ಅನುಕೂಲ ಸಿoಧು, ಅಭಾವ ವೈರಾಗ್ಯ.
೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
೫೮. ತಮ್ಮ ಮನೇಲಿ ಹೆಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
೬೦. ಮನೆಗೆ ಮಾರಿ, ಊರಿಗೆ ಉಪಕಾರಿ.
೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
೬೨. ಅಲ್ಪರ ಸoಘ ಅಭಿಮಾನ ಭoಗ.
೬೨. ಸೆಗಣಿಯವನ ಸ್ನೇಹಕ್ಕಿoತ ಗoಧದವನ ಜೊತೆ ಗುದ್ದಾಟ ಮೇಲು.
೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.
೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
೬೫. ಗೋರ್ಕಲ್ಲ ಮೇಲೆ ನೀರು ಸುರಿದoತೆ.
೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
೬೭. ಗಾಳಿ ಬoದಾಗ ತೂರಿಕೋ.
೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
೭೦. ಬಿರಿಯಾ ಉoಡ ಬ್ರಾಹ್ಮಣ ಭಿಕ್ಷೆ ಬೇಡಿದ.
೭೧. ದುಡ್ಡೇ ದೊಡ್ಡಪ್ಪ.
೭೨. ಬರಗಾಲದಲ್ಲಿ ಅಧಿಕ ಮಾಸ.
೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
೭೪. ಎಣ್ಣೆ ಬoದಾಗ ಕಣ್ಣು ಮುಚ್ಚಿಕೊoಡ ಹಾಗೆ
೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
೭೬. ಮoತ್ರಕ್ಕಿoತ ಉಗುಳೇ ಜಾಸ್ತಿ.
೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
೭೮. ಕುoಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
೭೯. ಕoತೆಗೆ ತಕ್ಕ ಬೊoತೆ.
೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.
೮೧. ಅoಕೆ ಇಲ್ಲದ ಕಪಿ ಲoಕೆ ಸುಟ್ಟಿತು.
೮೨. ಓದಿ ಓದಿ ಮರುಳಾದ ಕೂಚoಭಟ್ಟ.
೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
೮೪. ಕೋಟಿ ವಿದ್ಯೆಗಿoತ ಮೇಟಿ ವಿದ್ಯೆಯೇ ಮೇಲು.
೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
೮೭. ಓದುವಾಗ ಓದು, ಆಡುವಾಗ ಆಡು.
೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.
೮೯. ಸoಸಾರ ಗುಟ್ಟು, ವ್ಯಾಧಿ ರಟ್ಟು.
೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರoತೆ.
೯೧. ಕೊಟ್ಟವನು ಕೋಡoಗಿ, ಇಸ್ಕೊoಡೋನು ಈರಭದ್ರ.
೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
೯೩. ಮುಖ ನೋಡಿ ಮಣೆ ಹಾಕು.
೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರೆ ಸುಂಕ ಬೇಡವೆಂದಿತಂತೆ.
೯೫. ಮoತ್ರಕ್ಕೆ ಮಾವಿನಕಾಯಿ ಉದುರತ್ಯೇ ?
೯೬. ತುoಬಿದ ಕೊಡ ತುಳುಕುವುದಿಲ್ಲ.
೯೭. ಉಪ್ಪಿಗಿoತ ರುಚಿಯಿಲ್ಲ ತಾಯಿಗಿoತ ದೇವರಿಲ್ಲ.
೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
೯೯. ಇರಲಾರದೆ ಇರುವೆ ಬಿಟ್ಟುಕೊoಡ ಹಾಗೆ.
೧೦೦. ಎoಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.
೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊoಡರು.
೧೦೨. ದುಡಿಮೆಯೇ ದುಡ್ಡಿನ ತಾಯಿ.
೧೦೩. ಇಲಿ ಬoತು ಅoದರೆ ಹುಲಿ ಬoತು ಎoದರು.
೧೦೪. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸoಕಟ.
೧೦೫. ಊರಿಗೆ ಬoದವಳು ನೀರಿಗೆ ಬರಲೆಬೇಕು

General Knowledge Questions| Current Affairs Questions| ಪ್ರಚಲಿತ ಘಟನೆಯ ಪ್ರಶ್ನೆಗಳು

 General Knowledge Questions

 
1)  ಯುರೋಪಿಯನ್ ಯೂನಿಯನ್ ರಾಷ್ಟ್ರಗಳ ಸಹಯೋಗದೊಂದಿಗೆ ಸುಮಾರು 1226 ಕೋಟಿ ರೂ. ಮೌಲ್ಯದ 2 ಪ್ರಮುಖ ಹಸಿರು ಯೋಜನೆಗಳನ್ನು ಉದ್ಘಾಟಿಸಿದ ರಾಜ್ಯ ಸರ್ಕಾರ ಯಾವುದು?
A)  ಪಶ್ಚಿಮ ಬಂಗಾಳ
B)  ತೆಲಂಗಾಣ
C)  ಮಹಾರಾಷ್ಟ್ರ
D)  ಗುಜರಾತ್


ಉತ್ತರ: A)  ಪಶ್ಚಿಮ ಬಂಗಾಳ


2)  ಕೇಂದ್ರ ಸರ್ಕಾರವು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ ಬಳಕೆಯ ಮಿತಿಯನ್ನು ಕೋವಿಡ್-19 ಅನ್ನು ಎದುರಿಸಲು ಶೇಕಡ 35 ರಿಂದ ಶೇಕಡ ಎಷ್ಟಕ್ಕೆ ಏರಿಸಿದೆ?
A)  ಶೇಕಡ 42
B)  ಶೇಕಡ 50
C)  ಶೇಕಡ 65
D)  ಶೇಕಡ 75


ಉತ್ತರ: A)  ಶೇಕಡ 42


3)  ವಿಮಾನ ನಿಲ್ದಾಣ ಪ್ರಾಧಿಕಾರವು ಯಾವ ದೇಶದಲ್ಲಿ ವಿಮಾನ ನಿಲ್ದಾಣ ವಿಸ್ತರಣೆಯ ಕೆಲಸವನ್ನು ಪ್ರಾರಂಭಿಸಿದೆ?
A)  ನೇಪಾಳ
B)  ಮಾಲ್ಡೀವ್ಸ್
C)  ಬಾಂಗ್ಲಾದೇಶ
D)  ಮಾರಿಷಸ್


ಉತ್ತರ: B)  ಮಾಲ್ಡೀವ್ಸ್


4)  ಈ ಕೆಳಗಿನವರಲ್ಲಿ ಯಾರು 2020ರ ಟೈಮ್ಸ್ ಮ್ಯಾಗಜೀನ್ ನ 100 ಅತ್ಯಂತ ಪ್ರಭಾವಶಾಲಿ ಜನರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ?
A)  ನರೇಂದ್ರ ಮೋದಿ
B)  ವೈ.ಎಸ್. ಜಗನ್ ಮೋಹನ್ ರೆಡ್ಡಿ
C)  ಸೋನಿಯಾ ಗಾಂಧಿ
D)  ಎಂ. ಎಸ್. ಧೋನಿ


ಉತ್ತರ: A)  ನರೇಂದ್ರ ಮೋದಿ


5)  ಸಂಪರ್ಕವಿಲ್ಲದ ಡೆಬಿಟ್ ಕಾರ್ಡ್ ಆಧಾರಿತ ಪಾವತಿಗಾಗಿ “ಸೇಫ್ ಪೇ (SafePay)” ಹೆಸರಿನ ಮೊದಲ ರೀತಿಯ ಡಿಜಿಟಲ್ ಸೌಲಭ್ಯವನ್ನು ಯಾವ ಬ್ಯಾಂಕ್ ಪ್ರಾರಂಭಿಸಿದೆ?
A)  ಕೊಟಕ್ ಮಹೀಂದ್ರಾ ಬ್ಯಾಂಕ್
B)  ಐಸಿಐಸಿಐ ಬ್ಯಾಂಕ್
C)  ಐಡಿಬಿಐ ಬ್ಯಾಂಕ್
D)  ಐ.ಡಿ.ಎಫ್.ಸಿ ಫರ್ಸ್ಟ್ ಬ್ಯಾಂಕ್


ಉತ್ತರ: D)  ಐ.ಡಿ.ಎಫ್.ಸಿ ಫರ್ಸ್ಟ್ ಬ್ಯಾಂಕ್


6)  ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಯಾವ ಕ್ಷಿಪಣಿಯನ್ನು ಒಡಿಶಾದ ಚಂಡಿಪುರದಿಂದ ರಾತ್ರಿ ಪರೀಕ್ಷೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು?
A)  ಶೌರ್ಯ-I
B)  ಪ್ರಹಾರ್-II
C)  ಪೃಥ್ವಿ-II
D)  ಧನುಷ್-III


ಉತ್ತರ: C)  ಪೃಥ್ವಿ-II


7)  ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವೀಸಸ್ (ಐ.ಎಲ್. ಅಂಡ್ ಎಫ್.ಎಸ್.) ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಒಂದು ವರ್ಷದ ವಿಸ್ತರಣೆಯನ್ನು ಪಡೆದ ವ್ಯಕ್ತಿ ಯಾರು?
A)  ಸುಭಾಷ್ ಚಂದ್ರ ಖುಂಟಿಯಾ
B)  ಅಶೋಕ್ ಕುಮಾರ್ ಮಾಥುರ್
C)  ಮುಹಮ್ಮದ್ ಮುಸ್ತಫಾ
D)  ಉದಯ್ ಕೊಟಕ್


ಉತ್ತರ: D)  ಉದಯ್ ಕೊಟಕ್


8)  ಮ್ಯಾಸಚೂಸೆಟ್ಸ್ ಇನ್’ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂ.ಐ.ಟಿ) ಯ ಸಂಶೋಧಕರು ಕಂಡುಹಿಡಿದ ಭೂಮಿಯ ಗಾತ್ರದ ಯೋಜಿತ (‘ಪೈ’ ಗ್ರಹ ಎಂದು ಕರೆಯಲಾಗುತ್ತದೆ) ಹೆಸರಿಸಿ?
A)  K2-311b
B)  K2-312b
C)  K2-314b
D)  K2-315b


ಉತ್ತರ: D)  K2-315b


9)  ರಜತ್ ಸೂದ್ ಅವರನ್ನು ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ (ಸೆಪ್ಟೆಂಬರ್ 2020) ಯಾವ ಪಿ.ಎಸ್.ಯು. ನೇಮಿಸಿದೆ?
A)  ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇ.ಇ.ಎಸ್.ಎಲ್)
B)  ಈಶಾನ್ಯ ವಿದ್ಯುತ್ ಶಕ್ತಿ ನಿಗಮ (ನಿಪ್ಕೊ)
C)  ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಪವರ್ ಗ್ರಿಡ್)
D)  ರಾಷ್ಟ್ರೀಯ ಜಲವಿದ್ಯುತ್ ನಿಗಮ (ಎನ್.ಎಚ್.ಪಿ.ಸಿ)


ಉತ್ತರ: A)  ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇ.ಇ.ಎಸ್.ಎಲ್)


10)  ಯುದ್ಧನೌಕೆಗಳಿಂದ ಕಾರ್ಯನಿರ್ವಹಿಸಿದ ಮೊದಲ ಭಾರತೀಯ ಮಹಿಳೆಯರು ಯಾರು?
A)  ರಮಾದೇವಿ ಹಾಗೂ ನಿರ್ಮಲಾ ಸಿಂಗ್
B)  ಕುಮುದಿನಿ ತ್ಯಾಗಿ ಹಾಗೂ ರಿತಿ ಸಿಂಗ್
C)  ರಮ್ಯಾ ಜೋಸೆಫ್ ಹಾಗೂ ಮಾನಸ ತಿವಾರಿ
D)  ದೀಪಾ ಕುಮಾರಿ ಹಾಗೂ ಅನುಶ್ರೀ


ಉತ್ತರ: B)  ಕುಮುದಿನಿ ತ್ಯಾಗಿ ಹಾಗೂ ರಿತಿ ಸಿಂಗ್

Karnataka State Eligibility Test (KSET) 27.09.2020 General Knowledge (GK) Paper with answers

 KSET- Key Ans (Most Expected)

Title : KSET Question paper with ans
 
Department: All Department

Format : JPEG or PDF

Personal Use only
 
State : Karnataka

Published Date : 27-09-2020

Availability for download : Yes/link

Availability of website Link : Yes

Scanned Copy : Yes/no

Copy Text : No

Print Enable : Yes

Quality : High

File size reduced : No

Password protected: No

Image/PDF file available  : Yes

Cost : Free of Cost

Go Green


Print this page only if necessary............ Save Paper Save tree..................................




















Tags:

kset question papers with answers, kset 2020 kset exam QP 2020, kset exam pattern, kset passing marks

X STANDARD SECOND LANGUAGE ENGLISH-2020-21

 X STANDARD SECOND LANGUAGE ENGLISH-2020-21 STUDY MATERIAL FOR THE YEAR 2020-21 For Class 10 Karnataka Secondary Education Examination Board...