ಗದ್ಯ-1 ಯುದ್ಧ
ಗದ್ಯ-1. ಯುದ್ಧ
I ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ರಾಹಿಲನು ಯಾರು?
ಉತ್ತರ: ರಾಹಿಲನು ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಬ್ಬ ಡಾಕ್ಟರ್ (ವೈದ್ಯ).
I ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ರಾಹಿಲನು ಯಾರು?
ಉತ್ತರ: ರಾಹಿಲನು ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಬ್ಬ ಡಾಕ್ಟರ್ (ವೈದ್ಯ).
2. ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು?
ಉತ್ತರ: ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಬೇಕಾದ ಶಸ್ತ್ರ ಚಿಕಿತ್ಸಾ ಸಾಮಾನುಗಳ ಪಟ್ಟಿಯನ್ನು ಭದ್ರವಾಗಿ ಹಿಡಿದುಕೊಂಡನು.
3. ಗಡಿ ಪ್ರದೇಶಗಳಲ್ಲಿ ಬ್ಲಾಕ್ ಔಟ್ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ?
ಉತ್ತರ: ಗಡಿಪ್ರದೇಶಗಳಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ಬ್ಲಾಕ್ ಔಟ್’ ನಿಯಮವನ್ನು ಪಾಲಿಸಲಾಗುತ್ತದೆ.
4. ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು?
ಉತ್ತರ: “ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ. ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು’ ಎಂದು ರಾಹಿಲನು ಮುದುಕಿಯ ಎದುರಿಗೆ ಗಂಭೀರವಾಗಿ ನುಡಿದನು.
5. ಯುದ್ಧದ ಬಗೆಗೆ ಮುದುಕಿಯ ಅಭಿಪ್ರಾಯವೇನು?
ಉತ್ತರ: ಯುದ್ಧವು ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಎನ್ನುವುದು ಯುದ್ಧದ ಕುರಿತ ಮುದುಕಿಯ ಅಭಿಪ್ರಾಯವಾಗಿದೆ.
II ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಡಾಕ್ಟರ್ಗೆ ವಿಮಾನದ ಪೈಲಟ್ ಏನು ಹೇಳಿದನು?
ಉತ್ತರ: ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗ್ರೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ. ಎಲ್ಲಾದರೂ ಹೇಗಾದರು ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸುತ್ತಾ ಇಲ್ಲವಲ್ಲ ಎಂದು ವಿಮಾನದ ಪೈಲಟ್ ಡಾಕ್ಟರ್ ಗೆ ಹೇಳಿದನು.
2. ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳು ಯಾವುವು?
ಉತ್ತರ: ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದಾಳೆ? ಆ ಮನೆಯೊಳಗೆ ಏನು ಸಂಭವಿಸುತ್ತದೆ? ತಾನೀಗ ಈ ಕದವನ್ನು ತಟ್ಟಿದರೆ ಪರಿಣಾಮವೇನಾಗಬಹುದು? ಆ ಮನೆಯಿಂದ ಒಂದು ಬೆಳಕಿನ ಕಿರಣವೂ ಹೊರಗಡೆಗೆ ಹಾಯುತ್ತಿರಲಿಲ್ಲ. ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಬ್ಲಾಕ್ ಔಟ್ ನಿಯಮ ಪಲಿಸಲಾಗುತ್ತಿದೆ. ಇಂತಹ ಈ ಸಮಯದಲ್ಲಿ ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ? ಎಂದು ಪಹಿಳೆಯ ಆರ್ತನಾದ ಕೇಳಿದ ರಾಹಿಲನು ಯೋಚಿಸಿದನು.
3. ಮುದುಕಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳೇನು?
ಉತ್ತರ: ಮುದುಕಿಯು ತಾನು ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು. ಮದುವೆಯಾಗಿ ನವ ವಧುವಾಗಿ ಈ ಊರನ್ನು ಪ್ರವೇಶಿಸಿದೆ. ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು. ಜಮೀನು ಆಸ್ತಿ ನಮಗೆ ಸಾಕಾಗುವಷ್ಟಿತ್ತು. ಈಗಲೂ ಇದೆ. ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ ಯುದ್ಧವಂತೆ, ಯುದ್ಧ ! ಎಂದು ಯುದ್ಧದ ಕುರಿತು ರಾಹಿಲನ ಬಳಿ ತಿರಸ್ಕಾರದಿಂದ ನುಡಿದಳು.
4. ನಿರ್ಜೀವವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?
ಉತ್ತರ: ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ ? ಈ ಯುದ್ಧವಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ ? ಈ ಮನುಷ್ಯರಿಗೆ ಎಂತಹ ಬುದ್ಧಿ ಕೊಡುತ್ತಿಯಾ ? ಎಂದು ನಿರ್ಜೀವವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದಳು.
III ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಮುದುಕಿಯು ತನ್ನ ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ಹೇಗೆ ವಿವರಿಸಿದಳು ?
ಉತ್ತರ: ಶತ್ರು ಪಡೆಯ ವೈಮಾನಿಕ ದಾಳಿಯಿಂದ ವಿಮಾನವು ಚೂರಾಗಿ ಸಮುದ್ರದಲ್ಲಿ ಬಿದ್ದ ವೈಧ್ಯ ರಾಹಿಲನು ಈಜಿ ದಡ ಸೇರುತ್ತಾನೆ. ಕಾಲಿಗೆ ತೀವ್ರ ಪೆಟ್ಟಾಗಿದ್ದರಿಂದ ಹೆಚ್ಚು ದೂರ ನಡೆಯಲಾರದೆ ಅಲ್ಲಿಯೇ ಸಮೀಪದಲ್ಲಿದ್ದ ಶತ್ರು ದೇಶದ ಮುದುಕಿಯ ಮನೆಯಲ್ಲಿ ಆಶ್ರಯ ಪಡೆದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಸೊಸೆಯ ಜೀವವನ್ನು ಉಳಿಸುತ್ತಾನೆ. ಶತ್ರು ಸೈನಿಕರನ್ನು ಹುಡುಕುತ್ತ ಬಂದ ತನ್ನ ದೇಶದ ಸೈನಿಕರಿಂದ ಮದುಕಿಯೂ ಅವನನ್ನು ರಕ್ಷಿಸುತ್ತಾಳೆ.
ಒಂದೆರಡು ದಿನಗಳಲ್ಲಿ ಪರಸ್ಪರ ವಿಶ್ವಾಸ ಬೆಳೆದು ರಾಹಿಲ ಮತ್ತು ಮುದುಕಿ ಪರಸಪರ ಮಾತನಾಡುತ್ತಿದ್ದಾಗ ರಾಹಿಲನು ನಿಮ್ಮ ಮಗನೆಲ್ಲಿದ್ದಾನೆ ಎಂದು ವಿಚಾರಿಸುತ್ತಾನೆ. ಆಗ ಮುದುಕಿಯು “ಯುದ್ಧಕ್ಕೆ ಹೋಗಿದ್ದಾನೆ ! ನನ್ನ ಮಗನಿನ್ನೂ ಚಿಕ್ಕವನಿದ್ದಾಗ ಯುದ್ಧಕ್ಕೆ ಹೋದ ಅವನ ತಂದೆ ಹಿಂತಿರುಗಲಿಲ್ಲ. ಎದೆ ತುಂಬಿ ಬೂದಿ ಮುಚ್ಚಿದ ಕೆಂಡ, ಎದೆಯ ಗಾಯ ಇಂದಿಗೂ ಇದೆ. ನೋಡು ಎಲ್ಲ ದು:ಖ ನುಂಗಿಕೊಂಡು ಮಗನನ್ನು ಸಾಕಿ ಸಲುಹಿದೆ, ಮದುವೆಯನ್ನೂ ಮಾಡಿದೆ. ಈಗ ಐದಾರು ವರ್ಷಗಳ ಬಳಿಕ ಸೊಸೆ ಗರ್ಭಿಣಿಯಾದಳು ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ಮಗನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು. ಅಷ್ಟರಲ್ಲಿ ಬಂತು ಯುದ್ಧ ! ಅವನೊಮ್ಮೆ ಹಿಂತಿರುಗಿ ಬಂದಿದ್ದರೆ ಸಾಕಾಗಿತ್ತು. ಈ ವಿಷಯ ತಿಳಿದು ಅವನೆಷ್ಟು ಸಂಕಟ ಪಡುತ್ತಾನೋ. .” ಎಂದು ರಾಹಿಲನಿಗೆ ವಿವರಿಸಿದಳು.
2. ರಾಹಿಲನು ಮುದುಕಿಯ ಕುಟುಂಬಕ್ಕೂ, ಮುದುಕಿಯು ರಾಹಿಲನಿಗೂ ಮಾಡಿದ ಸಹಾಯವನ್ನು ಸಂಕ್ಷಿಪ್ತವಾಗಿ ವಿವರಿಸಿ.
ಉತ್ತರ: ದೇಶದ ಗಡಿ ಭಾಗದಲ್ಲಿ ಸಮುದ್ರದ ಮೇಲಿನ ಆಕಾಶದಲ್ಲಿ ಹಾರುತ್ತಿದ್ದ ಯುದ್ಧವಿಮಾನದ ಮೇಲೆ ವೈರಿಗಳ ವೈಮಾನಿಕ ದಾಳಿಯಿಂದಾಗಿ ವಿಮಾನವು ನುಚ್ಚುನೂರಾಗಿ ಸಮುದ್ರದ ಮೇಲೆ ಬಿದ್ದಿತು. ಅದರಲ್ಲಿದ್ದ ವೈದ್ಯ ರಾಹಿಲನು ಕಾಲಿಗೆ ತೀವ್ರ ಪಟ್ಟಾಗಿದ್ದರೂ ಈಜಿ ದಡ ಸೇರುತ್ತಾನೆ. ಅಲ್ಲಿಯೇ ಇದ್ದ ಅನ್ಯ ದೇಶದವರ ಮನೆಗೆ ಬಂದು ಬಾಗಿಲು ತಟ್ಟುತ್ತಾನೆ. ಬಾಗಿಲು ತೆಗೆದ ಮುದುಕಿಯ ಸೊಸೆಯು ಹೆರಿಗೆಯ ಬೇನೆಯಿಂದ ಬಳಲುತ್ತಿರುತ್ತಾಳೆ. ಆ ವೇಳೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿಯಲ್ಲಿ ಅವಳಿರಲಿಲ್ಲ. ವೈದ್ಯಾನಾಗಿದ್ದ ರಾಹಿಲನು ತನ್ನ ಕಾಲಿನ ನೋವನ್ನು ಮರೆತು ಮಗುವನ್ನು ರಕ್ಷಿಸಲು ಸಾಧ್ಯವಾಗದಿದ್ದರೂ ತಾಯಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾನೆ. ಹೀಗೆ ರಾಹಿಲನು ಮುದುಕಿಯ ಕುಟುಂಬಕ್ಕೆ ನೆರವಾಗುತ್ತಾನೆ. ಅದೇ ವೇಳೆಯಲ್ಲಿ ಅವನನ್ನು ಹುಡುಕುತ್ತ ತನ್ನದೇ ದೇಶದ ಸೈನಿಕರು ಮುದುಕಿಯ ಮನೆಗೆ ಬರುತ್ತಾರೆ. ಬಾಗಿಲು ತೆಗೆಯಬೇಡಿ ಎಂದು ರಾಹಿಲನು ಅಸಹಾಯಕತೆಯ ದಯನೀಯ ನೋಟದಿಂದ ಕೈ ಸನ್ನೆ ಮಾಡಿದಾಗ ಮುದುಕಿಯು ಆ ನೋಟದಲ್ಲಿ ತನ್ನ ಮಗನನ್ನು ಕಾಣುತ್ತಾಳೆ.
ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ ಎಂದು ಕೇಳುತ್ತಾ ಒಳ ನುಗ್ಗಿದಾಗ ಬಂದವರಿಗೆ ಅವಳು ಯಾರೂ ಬಂದಿಲ್ಲ ಎಂದು ಉತ್ತರಿಸಿ ರಾಹಿಲನನ್ನು ರಕ್ಷಿಸುತ್ತಾಳೆ. ಹೀಗೆ ತನಗೆ ಸಹಾಯ ಮಾಡಿದ ರಾಹಿಲನಿಗೆ ಮುದುಕಿಯು ಪ್ರತಿಯಾಗಿ ಅವನನ್ನು ಸೈನಿಕರ ದಾಳಿಗೆ ತುತ್ತಾಗುವುದರಿಂದ ರಕ್ಷಿಸಿ ಪ್ರತ್ಯುಪಕಾರ ಮಾಡುತ್ತಾಳೆ.
3. ಯುದ್ಧದಿಂದ ಆಗುವ ಅನಾಹುತಗಳ ಬಗ್ಗೆ ನಿಮ್ಮ ಅಭಿಪ್ರಯವನ್ನು ಬರೆಯಿರಿ
ಉತ್ತರ: ಯುದ್ಧದ ಪರಿಣಾಮ ಯಾವಾಗಲೂ ಸರ್ವನಾಶವೇ. ಯುದ್ಧಕ್ಕೆ ಕಾರಣ ಯಾರೇ ಆಗಿದ್ದರೂ ಅದರ ಪರಿಣಾಮವನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ. ಯುದ್ಧದ ಭೀಕರತೆಯು ಧರ್ಮ, ದೇಶಗಳ ಭೇದವಿಲ್ಲದೆ ಭಾಗಿಯಾದ ಸೈನಿಕರಿಗೂ ಅವರ ಕುಟುಂಬ ವರ್ಗದವರಿಗೂ ಹಾಗೂ ದೇಶಕ್ಕೂ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಯುದ್ಧ ಒಂದು ಪೀಳಿಗೆಯ ಸುಖೀ ಜೀವನವನ್ನು ಕಸಿಯಬಲ್ಲದು.
ದುಡಿಯುವ ತಂದೆ, ಮಗ ಅಥವಾ ಗಂಡನನ್ನು ಆಶ್ರಯಿಸಿದವರ ಬದುಕನ್ನೇ ಯುದ್ಧ ಕಸಿದುಕೊಂಡು ಬಿಡುತ್ತದೆ. ಭೌತ ಸ್ವರೂಪದ ಹಾನಿ ಉಂಟಾಗಿ ಗತಿಚಕ್ರ ಹಿಂದಕ್ಕೆ ಓಡುತ್ತದೆ. ಯುದ್ಧವೆನ್ನುವುದು ಮಾನವ ನಿರ್ಮಿತ ಕೆಡುಕಿನ ಕಾರ್ಯ. ಯುದ್ಧದಲ್ಲಿ ಬಳಕೆಯಾಗುವ ಬಾಂಬ್ಗಳಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳುಂಟಾಗಿ ಮಾನವ ಮತ್ತು ಪ್ರಾಣಿ, ಸಸ್ಯವರ್ಗಗಳ ಮೇಲೆ ಅದು ದುಷ್ಪರಿಣಾಮವನ್ನು ಉಂಟು ಮಾಡುವುದು. ಒಟ್ಟಾರೆಯಾಗಿ ಯುದ್ಧದಿಂದ ಯಾರಿಗೂ ನೆಮ್ಮದಿ ಉಂಟಾಗಲು ಸಾಧ್ಯವಿಲ್ಲ.
ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. “ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಗಾಯಗೊಂಡಿದ್ದೇನೆ?”
ಉತ್ತರ: ಈ ಮೇಲಿನ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರು ಬರೆದಿರುವ ‘ಚಪ್ಪಲಿಗಳು’ ಕಥಾ ಸಂಕಲನದಿಂದ ಆಯ್ದುಕೊಳ್ಳಾದ ‘ಯುದ್ಧ’ ಎನ್ನುವ ಗದ್ಯ ಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ರಾಹಿಲನು ಹೇಳಿದ್ದಾನೆ.
ಸಂದರ್ಭ: ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಶತ್ರು ಸೈನಿಕರ ವೈಮಾನಿಕ ದಾಳಿಯಿಂದ ವಿಮಾನವು ನುಚ್ಚುನೂರಾಗಿ ಸಮುದ್ರ ಪಾಲಾದಾಗ ಅದರಲ್ಲಿದ್ದ ವೈದ್ಯ ರಾಹಿಲನು ಕಾಲಿಗೆ ಪೆಟ್ಟಾಗಿದ್ದರೂ ಕಷ್ಟಪಟ್ಟು ಈಜಿ ದಡ ಸೇರುತ್ತಾನೆ. ಆ ವೇಳೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಮಳೆಯಿಂದ ಮೊದಲು ರಕ್ಷಣೆ ಪಡೆಯಬೇಕೆಂದು ಯೋಚಿಸಿ ನಡೆಯುತ್ತಿದ್ದಾಗ ಅಲ್ಲೇ ಸಮೀಪದಲ್ಲಿದ್ದ ಮನೆಯೊಳಗಿಂದ ಮಹಿಳೆಯ ಆರ್ತನಾದ ಕೇಳಿಬರುತ್ತದೆ. ಆ ಮನೆಯೊಳಗೆ ಯಾವ ಕ್ರೌರ್ಯ ನಡೆಯುತಿರಬಹುದು ಎಂದು ಯೋಚಿಸಿದ ರಾಹಿಲನು ಅಲ್ಲಿಯೇ ಆಶ್ರಯ ಪಡೆಯುವ ಸಲುವಾಗಿ ಬಾಗಿಲು ಬಡಿಯುವಾಗ ಮೇಲಿನಂತೆ ಹೇಳುವನು.
ಸ್ವಾರಸ್ಯ: ರಾಹಿಲನು ಶತ್ರು ದೇಶದವರ ಮನೆಯಲ್ಲಿಯೇ ರಕ್ಷಣೆ ಪಡೆಯಲು ಪ್ರಯತ್ನಿಸುವ ಸನ್ನಿವೇಶ ಇಲ್ಲಿನ ಸ್ವಾರಸ್ಯವಾಗಿದೆ.
2. “ನಾನಾಕೆಯನ್ನು ಪರೀಕ್ಷಿಸುವೆ, ನೀವು ಬಿಸಿ ನೀರು ಸಿದ್ದಪಡಿಸಿ.”
ಉತ್ತರ: ಈ ಮೇಲಿನ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರು ಬರೆದಿರುವ ‘ಚಪ್ಪಲಿಗಳು’ ಕಥಾ ಸಂಕಲನದಿಂದ ಆಯ್ದುಕೊಳ್ಳಲಾದ ‘ಯುದ್ಧ’ ಎನ್ನುವ ಗದ್ಯ ಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ರಾಹಿಲನು ಹೇಳಿದ್ದಾನೆ.
ಸಂದರ್ಭ: ಯುದ್ಧದಲ್ಲಿನ ವೈಮಾನಿಕ ದಾಳಿಯಿಂದ ಪಾರಾದ ವೈದ್ಯ ರಾಹಿಲನು ಗಾಯಗೊಂಡು ರಕ್ಷಣೆಗಾಗಿ ಶತ್ರು ದೇಶದವರ ಮನೆಯ ಬಾಗಿಲು ಬಡಿಯುತ್ತಾನೆ. ಬಾಗಿಲು ತೆಗೆದು ಒಳ ಕರೆದುಕೊಂಡ ಮುದುಕಿಯ ಸೊಸೆಯು ಹೆರಿಗೆಯ ಬೇನೆಯಿಂದ ನರಳುತ್ತಿರುತ್ತಾಳೆ. ಡಾಕ್ಟರಾಗಿದ್ದ ರಾಹಿಲನು ತನ್ನ ಕಾಲಿನ ನೋವನ್ನು ಮರೆತು ಆಕೆಯನ್ನು ಪರೀಕ್ಷಿಸಲು ಮುಂದಾಗುವಾಗ ಮುದುಕಿಗೆ ಮೇಲಿನಂತೆ ಹೇಳುತ್ತಾನೆ.
ಸ್ವಾರಸ್ಯ: ಅನ್ಯದೇಶದವರ ಕುಟುಂಬದಲ್ಲಿ ಉಂಟಾಗಿದ್ದ ಸಂಕಷ್ಟವನ್ನು ತಾನೂ ನೋವಿನಲ್ಲಿದ್ದರೂ ಪರಿಹರಿಸಲು ಪ್ರಯತ್ನಿಸುವ ಮಾನವೀಯ ಗುಣ ಮತ್ತು ಅವನ ವೃತ್ತಿ ಧರ್ಮ ವ್ಯಕ್ತವಾಗಿದೆ.
3. “ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ?”
ಉತ್ತರ: ಈ ಮೇಲಿನ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರು ಬರೆದಿರುವ ‘ಚಪ್ಪಲಿಗಳು’ ಕಥಾ ಸಂಕಲನದಿಂದ ಆಯ್ದುಕೊಳ್ಳಲಾದ ‘ಯುದ್ಧ’ ಎನ್ನುವ ಗದ್ಯ ಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಮುದುಕಿಯು ಹೇಳಿದ್ದಾಳೆ.
ಸಂದರ್ಭ: ವೈಮಾನಿಕ ದಾಳಿಯಲ್ಲಿ ಪ್ರಾಣ ಉಳಿಸಿಕೊಂಡ ರಾಹಿಲ ಸಮುದ್ರದಲ್ಲಿ ಈಜಿ ಶತ್ರು ದೇಶದ ಮುದುಕಿಯ ಮನೆಯಲ್ಲಿಯೇ ರಕ್ಷಣೆ ಪಡೆದುಕೊಳ್ಳುತ್ತಾನೆ. ಅದೇ ವೇಳೆಯಲ್ಲಿ ಹೆರಿಗೆಯ ಬೇನೆಯಿಂದ ಬಳಲುತ್ತಿದ್ದ ಮದುಕಿಯ ಸೊಸೆಯ ಪ್ರಾಣವನ್ನು ಉಳಿಸುವಲ್ಲಿ ಸಫಲನಾಗುತ್ತಾನೆ.
ಆಗ ಅವನನ್ನು ಹುಡುಕುತ್ತ ಶತ್ರು ದೇಶದ ಸೈನಿಕರು ಅದೇ ಮನೆಯ ಬಳಿ ಬಂದು ಬಾಗಿಲು ತೆಗೆಯುವಂತೆ ಹೇಳುತ್ತಾರೆ. ಮುದುಕಿಯು ಮನೆಯಲ್ಲಿ ಆಶ್ರಯ ಪಡೆದಿರುವವನು ತಮ್ಮವನಲ್ಲ ತಮ್ಮ ದೇಶಕ್ಕೆ ದ್ರೋಹ ಬಗೆಯುವವನು ಎಂದು ಆಲೋಚಿಸಿ ರೋಷದಿಂದ ಬಾಗಿಲು ತೆಗೆಯಲು ಹೊರಟು ರಾಹಿಲನ ಕಡೆ ನೋಡಿದಾಗ ಅವನ ಅಸಹಾಯಕತೆಯ ನೋಟ ನೋಡಿ ತನ್ನ ಮನದಲ್ಲಿ ಮೇಲಿನಂತೆ ಅಂದುಕೊಳ್ಳುತ್ತಾಳೆ.
ಸ್ವಾರಸ್ಯ: ಯುದ್ಧಕ್ಕೆ ಹೋದ ತನ್ನ ಮಗನನ್ನು ರಾಹಿಲನಲ್ಲಿ ಕಾಣುವ ಮುದುಕಿಯ ಅಸಹಾಯಕ ಭಾವನೆ ಇಲ್ಲಿ ವ್ಯಕ್ತವಾಗಿದೆ.
4. “ನನ್ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನೂ ನೋಡಿ!”
ಉತ್ತರ: ಈ ಮೇಲಿನ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರು ಬರೆದಿರುವ ‘ಚಪ್ಪಲಿಗಳು’ ಕಥಾ ಸಂಕಲನದಿಂದ ಆಯ್ದುಕೊಳ್ಳಲಾದ ‘ಯುದ್ಧ’ ಎನ್ನುವ ಗದ್ಯ ಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಮುದುಕಿಯು ಹೇಳಿದ್ದಾಳೆ.
ಸಂದರ್ಭ: ಶತ್ರು ದೇಶದ ರಾಹಿಲನಿಗೆ ಮುದುಕಿಯು ಆಶ್ರಯ ನೀಡಿದ ಮನೆಗೆ ಆ ದೇಶದ ಸೈನಿಕರು ಯಾರಾದರೂ ಶತ್ರು ಸೈನಿಕರು ಬಂದಿದ್ದಾರೆಯೆ ಎಂದು ಹುಡುಕಲು ಬರುತ್ತಾರೆ. ಮುದುಕಿಯು ಮನೆಗೆ ಯಾರೂ ಬಂದಿಲ್ಲವೆಂದು ಹೇಳಿದರೂ ಬಂದವರಲ್ಲಿ ಒಬ್ಬಾತ ಯಾವುದಕ್ಕೂ ಮನೆಯನ್ನೊಮ್ಮೆ ನೋಡಿ ಬಿಡಿ ಎನ್ನುತ್ತಾನೆ. ಆಗ ಮುದುಕಿಯು ಅಳುತ್ತಾ ಮೇಲಿನಂತೆ ಹೇಳುತ್ತಾ ಯಾರಿಗಾಗಿ ಯಾತಕ್ಕಾಗಿ ಯುದ್ಧ ? ಈ ಯುದ್ಧ ನನ್ನ ಮೊಮ್ಮಗುವನ್ನೂ ಉಳಿಸಲಿಲ್ಲ ಎಂದು ಹೇಳುತ್ತಾಳೆ.
ಸ್ವಾರಸ್ಯ: ಯುದ್ಧವು ಯಾರಿಗೂ ಒಳಿತು ಮಾಡುವುದಿಲ್ಲ ಎಂಬ ಭಾವದ ಜೊತೆಗೆ ಮುದುಕಿಯು ಮೊಮ್ಮಗುವನ್ನು ಕಳೆದುಕೊಂಡ ಅಸಹಾಯಕತೆಯನ್ನು ವ್ಯಕ್ತಪಡಿಸಿರುವುದು ಇಲ್ಲಿ ವ್ಯಕ್ತವಾಗಿದೆ.
ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
1. ರಾಹಿಲನ ದೇಹದಲ್ಲಿ ____ ಸಂಚಾರವಾದಂತಾಯಿತು.
ಅ) ಶಕ್ತಿ
ಆ) ವಿದ್ಯುತ್
ಇ) ಹೊಸರಕ್ತ
ಈ) ಮಿಂಚು
ಉತ್ತರ: ಇ) ಹೊಸರಕ್ತ
2. ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ ___ ಕೇಳಿ ಬಂತು.
ಅ) ಆರ್ತನಾದ
ಆ) ಅಳು
ಇ) ಚೀರಾಟ
ಈ) ಸಾಂತ್ವನ
ಉತ್ತರ: ಈ) ಸಾಂತ್ವನ
3. ಮುದುಕಿ ಮತ್ತು ಸೊಸೆಯ ___ ಮನೆಯ ಮೂಲೆಯಲ್ಲಿ ಪ್ರತಿಧ್ವನಿಸಿತು.
ಅ) ಸಂತಸ
ಆ) ಜಗಳ
ಇ) ರೋದನ
ಈ) ಸಂಗೀತ
ಉತ್ತರ: ಇ) ರೋದನ
4. ಯಾರಾದರೂ ಗಾಯಗೊಂಡ ____ ಈ ಕಡೆ ಬಂದಿದ್ದಾರೆಯೇ?
ಅ) ಜನರು
ಆ) ಸೈನಿಕರು
ಇ) ಗಂಡಸರು
ಈ) ಹೆಂಗಸರು
ಉತ್ತರ: ಆ) ಸೈನಿಕರು
5. ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ____ ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು.
ಅ) ತಂದೆಯು
ಆ) ತಾಯಿಯು
ಇ) ಮಗಳು
ಈ) ಮಗನು
ಉತ್ತರ: ಈ) ಮಗನು
👌
ReplyDeleteAbhi
really helpful
ReplyDeleteReally helpful hatsof to developer.
ReplyDelete