ಗದ್ಯ-2 ಶಬರಿ ಲೇಖಕರು ಪು.ತಿ.ನರಸಿಂಹಾಚಾರ್
ಗದ್ಯ-2 ಶಬರಿ ಲೇಖಕರು ಪು.ತಿ.ನರಸಿಂಹಾಚಾರ್
ಅಭ್ಯಾಸ ಭಾಗದ ಪ್ರಶ್ನೋತ್ತರಗಳು
I ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಶ್ರೀರಾಮನ ತಂದೆಯ ಹೆಸರೇನು?
ಉತ್ತರ: ಶ್ರೀರಾಮನ ತಂದೆಯ ಹೆಸರು ದಶರಥ.
2. ಲಕ್ಷ್ಮಣನ ತಾಯಿ ಯಾರು?
ಉತ್ತರ: ಲಕ್ಷ್ಮಣನ ತಾಯಿ ಸುಮಿತ್ರೆ.
3. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
ಉತ್ತರ: ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ.
4. ರಾಮ ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ಉತ್ತರ: ರಾಮ ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಧನು.
5. ಶಬರಿ ಗೀತ ನಾಟಕದ ಕರ್ತೃ ಯಾರು?
ಉತ್ತರ: ಶಬರಿ ಗೀತ ನಾಟಕದ ಕರ್ತೃ ಪು.ತಿ.ನರಸಿಂಹಾಚಾರ್
II ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
ಉತ್ತರ :
ದೊರೆವಳೇ ಸೀತೆ |
ಭೂಮಿಜಾತೆ ಆತ್ಮಕಾಮಕಲ್ಪಲತೆ ದೊರೆವಳೇ ಚೆಲುವೆ?
ಎರೆವೆ ಎರೆವೆ ಗಿರಿವನವೇ, ಪೇಳಿರಿ ನಾನೆರೆವೆ ದೊರೆವಳೇ? ದೊರೆಯಳೇ?
ಅವಳ ನೆಲೆ ಯಾರು ಅರಿಯಿರೇ, ಪೇಳಿ ಎನ್ನರಸಿ ದೊರೆಯಳೆ?
ಈ ಬೇಗೆ ಕೆಡದಲಾ | ನನ್ನೆದೆಯ ಬಿಡದಲಾ ಈ ಜಗವ ಸುಡದಲಾ |
ಹಾ ! ಹಾ! ಹಾ! ಎಂದು ರಾಮನು ಗಿರಿವನವನ್ನು ಪ್ರಾರ್ಥಿಸಿದನು.
2. ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು?
ಉತ್ತರ : ತಾಳಿಕೋ ಅಣ್ಣ ತಾಳಿಕೋ |
ಸೂರ್ಯನೇ ತೇಜಗೆಡೆ ತೇಜಕೆಡೆಯಾರು?
ರಾಮನೇ ಧೈರ್ಯಗೆಡೆ ಸ್ಥೈರ್ಯ ಕೆಡೆಯಾರು?
ಚಿತ್ರ ಕೂಟದಲ್ಲಿದ್ದ ಸಂದರ್ಭದಲ್ಲಿ ನಾನು ಆಕೆಯನ್ನು ಒಂಟಿಯಾಗಿ ಬಿಟ್ಟು ಹೋಗಿದ್ದರಿಂದ ಈ ಗತಿ ಒದಗಿತು. ನಾನು ಹಾಗೆ ಮಾಡಬಾರದಾಗಿತ್ತು ಎಂದು ಹೇಳುತ್ತ ಲಕ್ಷ್ಮಣನು ರಾಮನನ್ನು ಸಂತೈಸಿದನು.
3. ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
ಉ: ಶಬರಿ ಪ್ರತಿದಿನವೂ ರಾಮ ಬರುವನೆಂದು ಅವನಿಗಾಗಿ ಒಳ್ಳೆಯ ಸಿಹಿಯಾದ ಹಣ್ಣುಗಳನ್ನು ಆಯ್ದು ತರುವಳು. ಒಳ್ಳೆಯ ಸುವಾಸನೆಭರಿತ ಹೂವುಗಳನ್ನು ಹುಡುಕಿ ತಂದು ರಾಮನಿಗಾಗಿ ಮಾಲೆಯನ್ನು ಸಿದ್ಧಪಡಿಸುವಳು. ಮಧುಪರ್ಕವನ್ನು ರಾಮನಿಗಾಗಿ ಅಣಿಗೊಳಿಸುವಳು. ರಾಮನಿಗೆ ಅರ್ಪಿಸಲು ಅಣಿಗೊಳಿಸಿದ ಹೂ ಹಣ್ಣುಗಳು ಅವನಿಗೆ ಅರ್ಪಿಸಲಾಗದೇ ವ್ಯರ್ಥವಾದುದರ ಕುರಿತು ಚಿಂತಿಸುತ್ತ ಮತ್ತೆ ಅವನಿಗೆ ಅರ್ಪಿಸಲು ಪ್ರತಿದಿನವೂ ಹೊಸತನ್ನು ಆಯ್ದು ತರುವಳು. ರಾತ್ರಿಯ ಕತ್ತಲನ್ನು ಹೋಗಲಾಡಿಸುವ ಚಂದ್ರನೇ ರಾಮಾ ಬಾ, ನೀನು ಬಂದು ಈ ಹಣ್ಣುಗಳನ್ನು ಸೇವಿಸದೇ ನನಗೇನೂ ಸೇರದು ಎಂದು ರಾಮನ ಸ್ವಾಗತಕ್ಕಾಗಿ ಕಾಯುವಳು.
4. ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ?
ಉ: ರಾಮಲಕ್ಷ್ಮಣರನ್ನು ನೋಡಿದ ಶಬರಿಯು ಕ್ಷಣಹೊತ್ತು ಬೆರಗಾದಳು. ಬೆರಗು ಕಳೆದ ಬಳಿಕ ಅವನ ಸನಿಹ ಹೋಗಿ ಮೈಯನ್ನು ಸ್ಪರ್ಷಿಸಿ, ಪಾದಕ್ಕೆರಗಿ ಕೈಯನ್ನು ಕಣ್ಣಿಗೊತ್ತಿಕೊಂಡು ಕಂಬನಿಗರೆದಳು. ಬನ್ನಿರಿ ಎಂದು ಗದ್ಗದಿಸುತ್ತ ಅವನನ್ನು ಉಪಚರಿಸಲು ಅವಳು ಮಾಡಿದ ಸಿದ್ಧತೆ ಸಾಲದೆಂದು ಮರುಗಿದಳು. ಪರಿಮಳವನ್ನು ಸೂಸುವ ವಿವಿಧ ಹೂವುಗಳಿಂದ ಕಟ್ಟಲಾದ ವನಮಾಲೆಯನ್ನು ಕೊರಳಿಗಿಟ್ಟು ಹಿಗ್ಗಿದಳು. ತಾನು ರಾಮನಿಗೆಂದು ತಂದಿರುವ ಹಣ್ಣಿನಷ್ಟು ರುಚಿಯಾದ ಹಣ್ಣು ಈ ಜಗದಲ್ಲಿಯೇ ಇಲ್ಲವೆಂದು, ನಿಮಗಾಗಿಯೇ ಇದನ್ನು ತಂದಿರುವೆನೆಂದು ಅವರಿಗಿತ್ತು ಉಪಚರಿಸುವಳು
5. ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು?
ಉ: ನಿನ್ನ ಆದರಾತಿಥ್ಯದಿಂದ ನಾವು ಸಂತೃಪ್ತರು. ನಿನ್ನ ಸುಖದಲ್ಲಿಯೇ ನಾವು ಸುಖಿಗಳು. ಈ ಕಾಡಿನಲ್ಲಿಯೇ ಜೀವನದ ಸಂತೃಪ್ತಿ ಕಾಣುವ ನಿನ್ನ ಪುಣ್ಯಕ್ಕೆ ನಾವೂ ನಿನಗೆ ಋಣಿಗಳಾಗಿದ್ದೇವೆ ಎಂದು ತಮ್ಮನ್ನು ಉಪಚರಿಸಿದ ಶಬರಿಗೆ ರಾಮನು ನುಡಿದಾಗ ಈ ಬಡವಿಯ ಬಗ್ಗೆ ಮರುಕವೇ ಎಂದು ಶಬರಿ ಪ್ರಶ್ನಿಸುವಳು. ಆಗ ರಾಮನು ನಿನ್ನ ಸೇವೆಯಲ್ಲಿ ಸ್ವಲ್ಪವೂ ಕೊರತೆಯಿಲ್ಲ. ಅಯೋಧ್ಯೆಯ ಅರಮನೆಯಲ್ಲಿ ಪಡೆದದ್ದಕ್ಕಿಂತ ಹೆಚ್ಚಿನ ಸತ್ಕಾರ ನಿನ್ನಿಂದ ದೊರೆಯಿತು. ಇದರಿಂದ ನಾವು ಕಾಡನ್ನೇ ಮರೆತು ಇದೇ ಮನೆಯೆಂದು ತಿಳಿದು ಇಷ್ಟು ಆದರ ಪ್ರೀತಿ ತೋರಿದ ನಿನ್ನಲ್ಲೇ ಮಾತೃಸ್ವರೂಪವನ್ನು ನೋಡಿದೆವು ಎಂದು ಹೇಳಿದನು.
III ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಶಬರಿಯ ಚಿಂತೆ ಹಿಂಗಿಹೋದ ಸಂದಂರ್ಭದ ಸ್ವಾರಸ್ಯವನ್ನು ವಿವರಿಸಿ?
ಉ: ಮತಂಗ ಮಹರ್ಷಿಗಳಿಂದ ರಾಮನ ದರ್ಶನದಿಂದಲೇ ಮೋಕ್ಷ ಸಿದ್ಧಿ ಎಂಬ ವರವನ್ನು ಪಡೆದಿದ್ದ ಶಬರಿ ರಾಮನ ಬರುವಿಕೆಗಾಗಿ ಕಾದಿದ್ದಳು. ಶಬರಿಯ ಎಷ್ಟೋ ವರ್ಷಗಳ ಕಾಯುವಿಕೆಯ ತಪಸ್ಸು ಕೊನೆಗೂ ಈಡೇರುವಂತೆ ರಾಮನ ದರ್ಶನದ ದಿನ ಸಮೀಪಿಸಿತು. ರಾಮ ಬರುವನೆಂದು ಶಬರಿ ಹೂ ಹಣ್ಣುಗಳನ್ನು ತಂದು ದಿನವೂ ಕಾಯುತ್ತಿದ್ದಳು. ಅಂತೂ ಶಬರಿಂiÀi ಆಸೆ ಪೂರೈಸಲೋ ಎಂಬಂತೆ ಸೀತೆಯನ್ನರಸುತ್ತ ರಾಮ ಲಕ್ಷ್ಮಣ ಸಮೇತನಾಗಿ ಮತಂಗಾಶ್ರಮಕ್ಕೆ ಬಂದನು. ಅಲ್ಲಿ ತನಗಾಗಿ ಕಾದಿದ್ದ ಶಬರಿಯು ನೀಡಿದ ಹೂ ಹಣ್ಣುಗಳ ಸೇವೆ ಉಪಚಾರದಿಂದ ರಾಮ ಸಂತಸಭರಿತನಾದನು. ರಾಮನ ದರ್ಶನದಿಂದ ಶಬರಿಗೆ ಪರಮಾನಂದವಾಯಿತು. ನಾನು ಸುಖಿ ಪರಮ ಸುಖಿ, ಇಂದೆನಗೆ ಬಲು ಸಂತಸವಾಗಿದೆ ಎಂದು ಹಿಗ್ಗಿಹಾಡುವಳು. ರಾಮನ ದಿವ್ಯದರ್ಶನ, ವಿನಯಾದರ ತುಂಬಿದ ಮಾತುಗಳನ್ನು ಕೇಳಿ ಶಬರಿ ತಾನು ಧನ್ಯಳಾದೆನೆಂದು, ರಾಮನ ದರ್ಶನದ ಪುಣ್ಯ ಲಭಿಸಿ ತನ್ನ ಚಿಂತೆಯೆಲ್ಲ ಇಂಗಿ ಹೋಯಿತೆಂದು ಧನ್ಯತಾಭಾವವನ್ನು ತಾಳಿದಳು.
2. ಶಬರಿಯ ಸಡಗರ, ಸಂತೋಷವು ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ?
ಉ: ಸೀತೆಯನ್ನರಸುತ್ತ ರಾಮಲಕ್ಷ್ಮಣರು ಮತಂಗಾಶ್ರಮದ ಬಳಿ ಶಬರಿಯಿರುವಲ್ಲಿಗೆ ಬರುತ್ತಾರೆ. ರಾಮ ಬಂದು ಎದುರಿಗೆ ನಿಂತಿರುವುದನ್ನು ನೋಡಿದ ಶಬರಿ ಬೆರಗಾದಳು. ಬಳಿಕ ಸಾವರಸಿಕೊಂಡು ಅವನ ಸನಿಹಬಂದು ಅವನ ಮೈಯನ್ನು ಸ್ಪರ್ಷಿಸಿದಳು. ಅವನ ಕಾಲಿಗೆ ಬಿದ್ದು ನಮಸ್ಕರಿಸಿದಳು. ರಾಮನ ಕೈಗಳನ್ನು ಕಣ್ಣಿಗೊತ್ತಿಕೊಂಡು ಕಣ್ಣೀರು ಸುರಿಸಿದಳು. ಬನ್ನಿರಿ ಎಂದು ಗದ್ಗದಿಸುತ್ತ ಒಳ ಕರೆದು ಆದರಿಸಿದಳು. ಅಯ್ಯೋ, ಏನೂ ಸಿದ್ಧತೆಯೇ ಇಲ್ಲ, ನಿನ್ನೆಯಷ್ಟು ಚೆನ್ನಾಗಿರುವ ಹೂ ಹಣ್ಣುಗಳು ದೊರೆತೇ ಇಲ್ಲ ಎಂದು ತಳಮಳಿಸಿದಳು. ತನ್ನ ಮನದ ಬಯಕೆಯಂತೆ ಸುಮಧುರ ಪರಿಮಳ ಬೀರುವ ಹೂಗಳ ಮಾಲೆಯನ್ನು ರಾಮನ ಕೊರಳಿಗೆ ಹಾಕಿ ನಲಿದಳು. ಇಷ್ಟು ರುಚಿಯಾಗಿರುವ ಹಣ್ಣು ಜಗತ್ತಿನಲ್ಲಿಯೇ ಇಲ್ಲ ಎಂದು ನಿಮಗೋಸ್ಕರವಾಗಿಯೇ ತಂದೆನೆಂದು ಅವರ ಕೈಯೊಳಗಿತ್ತು ಆದರಿಸಿದಳು. ರಾಮ ಲಕ್ಷ್ಮಣರು ಶಬರಿಯ ಆತಿಥ್ಯದಿಂದ ಸಂತೃಪ್ತರಾದಾಗ ಅವಳಲ್ಲಿ ಧನ್ಯತಾಭಾವ ಮೂಡುವುದು.
3. ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ?
ಉ: ಮತಂಗರ ಆಶ್ರಮದಲ್ಲಿದ್ದ ಶಬರಿಯು ನಿಷ್ಠೆಯಿಂದ ಅವರಿಗೆ ಸಲ್ಲಿಸಿದ ಸೇವೆಯ ಫಲವಾಗಿ ಶ್ರೀರಾಮನ ದರ್ಶನದಿಂದ ಅವಳಿಗೆ ಮುಕ್ತಿ ಎಂಬ ವರವನ್ನು ಅವರಿಂದ ಪಡೆದಿದ್ದಳು. ಶ್ರೀರಾಮನ ಗುಣ ಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು ಕಾಣುವುದೇ ಜೀವನದ ಏಕೈಕ ಗುರಿ ಎಂದು ಭಾವಿಸಿದ್ದ ಅಸಂಖ್ಯಾತ ಭಕ್ತರಲ್ಲಿ ಇವಳೂ ಒಬ್ಬಳಾಗಿದ್ದಳು. ಮತಂಗರು ದಿವ್ಯ ಲೋಕವನ್ನು ಸೇರಿದ ಬಳಿಕ ರಾಮಧ್ಯಾನದಲ್ಲಿ ತೊಡಗಿ ರಾಮನ ದರ್ಶನಕ್ಕಾಗಿ ಕಾದಿದ್ದಳು. ಪ್ರತಿದಿನವೂ ಹೊಸ ಹೂ ಹಣ್ಣುಗಳನ್ನು ತಂದು ರಾಮನು ಬಂದಾಗ ಅವನಿಗೆ ಅರ್ಪಿಸಬೇಕೆಂದು ಕಾಯುತ್ತಿದ್ದಳು.
4. “ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ.”
ಉತ್ತರ : ಈ ಮೇಲಿನ ವಾಕ್ಯವನ್ನು ಪು.ತಿ.ನರಸಿಂಹಾಚಾರರು ಬರೆದಿರುವ ‘ಶಬರಿ’ ಎನ್ನುವ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಶಬರಿ ರಾಮನ ಕುರಿತು ಹೇಳಿದ್ದಾಳೆ.
ಸಂದರ್ಭ: ತನ್ನ ಆಶ್ರಮಕ್ಕೆ ಆಗಮಿಸಿದ ರಾಮಲಕ್ಷ್ಮಣರನ್ನು ಅತ್ಯಾದರದಿಂದ ಬರಮಾಡಿಕೊಂಡ ಶಬರಿಯು ಹೂಹಣ್ಣುಗಳನ್ನಿತ್ತು ಉಪಚರಿಸಿದಳು. ಅವಳ ಉಪಚಾರದಿಂದ ರಾಜಕುಮಾರರು ಪ್ರಸನ್ನರಾದರು. ಆಗ ಶಬರಿಯು ತನ್ನ ಎಷ್ಟೋ ವರ್ಷಗಳ ತಪಸ್ಸು ಫಲಿಸಿತು. ರಾಮನ ದರ್ಶನದಿಂದ ತಾನು ಸುಖಿಯಾದೆನು ಎಂದು ಹಾಡುವಳು. ರಾಮನು ನಿನ್ನ ಪ್ರೀತಿಗೆ ನಾವು ಋಣಿಯಾಗಿದ್ದೇವೆ. ಅಯೋಧ್ಯೆಯ ಅರಮನೆಯಲ್ಲಿ ಸಿಗುವ ಆದರಕ್ಕಿಂತಲೂ ಮಿಗಿಲಾದ ಆದರ ಇಲ್ಲಿ ಸಿಕ್ಕಿತು, ನಿನ್ನಲ್ಲೇ ತಾಯಿಯನ್ನು ಕಾಣುತ್ತಿದ್ದೇವೆ ಎಂದಾಗ ಶಬರಿ ರಾಮನ ಭವ್ಯ ವ್ಯಕ್ತಿತ್ವವನ್ನು ಮೇಲಿನಂತೆ ಕೊಂಡಾಡುವಳು.
ಸ್ವಾರಸ್ಯ: ಬಾಹ್ಯ ಮತ್ತು ಅಂತರಂಗದ ಸೊಬಗು ರಾಮನಲ್ಲಿ ಮೇಳೈಸಿತ್ತು ಎಂಬುದು ಶಬರಿಯ ಮಾತಿನಿಂದ ವ್ಯಕ್ತವಾಗುತ್ತದೆ.
5. “ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು.”
ಉ: ಈ ಮೇಲಿನ ವಾಕ್ಯವನ್ನು ಪು.ತಿ.ನರಸಿಂಹಾಚಾರರು ಬರೆದಿರುವ ‘ಶಬರಿ’ ಎನ್ನುವ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ರಾಮನು ಶಬರಿಯನ್ನು ಕುರಿತು ಲಕ್ಷ್ಮಣನಿಗೆ ಹೇಳುವನು.
ಸಂದರ್ಭ: ರಾಮನ ದರ್ಶನಕ್ಕಾಗಿ ಕಾಯುತ್ತಿದ್ದ ಶಬರಿಯು ಅವನಿಂದ ಮೋಕ್ಷವನ್ನು ಪಡೆದು ಧನ್ಯಳಾದಳು. ಅವಳನ್ನು ಕುರಿತು ಲಕ್ಷ್ಮಣನು ಅವಳದು ಮಗುವಿನ ರೀತಿಯ ಪ್ರೀತಿ. ನಿನ್ನನ್ನು ನೋಡಿ ನಲಿಯುತ್ತ ಕೊನೆಗೆ ನಮ್ಮನ್ನೇ ಮರೆತಳು ಎಂದು ರಾಮನಿಗೆ ಹೇಳಿದಾಗ ಬೆಳಕಿನ ನಿರೀಕ್ಷೆ ಇರುವವರಿಗೆ ಬತ್ತಿ ತಾನು ಉರಿದು ಕಪ್ಪಾಗಿ ಲೋಕಕ್ಕೆ ಬೆಳಕು ನೀಡುವುದು ಅರ್ಥವಾಗುವುದಿಲ್ಲ. ಆದರೆ ಬೆಳಕು ನೀಡುವವರು ಶಬರಿಯ ರೀತಿ ಇರುವರು ಎಂದು ಹೇಳುವನು.
ಸ್ವಾರಸ್ಯ: ಶಬರಿಯ ಜೀವನವು ಉರಿವ ದೀಪದ ಹಾಗೆ, ಬೇರೆಯವರಿಗೆ ಉಪಕಾರ ಮಾಡುವುದರಲ್ಲಿಯೇ ತೃಪ್ತವಾಗುವುದು. ಆದರೆ ಸಾಮಾನ್ಯರು ಮಹಾತ್ಮರ ತ್ಯಾಗವನ್ನು ಗಮನಿಸಲಾರರು. ತಮಗೆ ದೊರೆತದ್ದನ್ನು ಪಡೆದುಕೊಳ್ಳುವರಷ್ಟೇ, ದೀಪದ ಬೆಳಕನ್ನು ಪಡೆದುಕೊಳ್ಳುವವರು ಬತ್ತಿಯ ತ್ಯಾಗವನ್ನು ಅರಿಯಲಾರರು ಎಂಬುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.
ಭಾಷಾ ಚಟುವಟಿಕೆ:
1. ಕನ್ನಡ ಸಂಧಿಗಳನ್ನು ಹೆಸರಿಸಿ?
ಕನ್ನಡ ಸಂಧಿಗಳು : ಲೋಪ ಸಂಧಿ, ಆಗಮ ಸಂಧಿ, ಆದೇಶ ಸಂಧಿ.
ಉದಾ:
ಲೋಪಸಂಧಿ - ನಮ್ಮೆಡೆಗೆ = ನಮ್ಮ+ಎಡೆಗೆ,
ಬನದೊಳಕ್ಕೆ=ಬನದ+ಒಳಕ್ಕೆ
ಆಗಮಸಂಧಿ - ಕೈಯಲ್ಲಿ=ಕೈ+ಅಲ್ಲಿ,
ರಕ್ಷೆಯಿಡಲಿ=ರಕ್ಷೆ+ಇಡಲಿ
ಆದೇಶಸಂಧಿ -ಕಣ್+ಪನಿ=ಕಂಬನಿ ಮುಂತಾದವು.
ಹೊಂದಿಸಿ ಬರೆಯಿರಿ:
ಅ. ಬ. ಉತ್ತರಗಳು
ಮತಂಗ ಸೀತೆ ಮತಂಗ- ಆಶ್ರಮ
ಪು.ತಿ.ನ ಆಶ್ರಮ ಪು.ತಿ.ನ- ಮೇಲುಕೋಟೆ
ದಶರಥ ಮೇಲುಕೋಟೆ ದಶರಥ - ರಾಮ
ಚಿತ್ರಕೂಟ ಪರ್ವತ ಚಿತ್ರಕೂಟ -ಪರ್ವತ
ಭೂಮಿ ಜಾತೆ ರಾಮ ಭೂಮಿಜಾತೆ- ಸೀತೆ
2. ಸಂಸ್ಕøತ ಸಂಧಿಗಳನ್ನು ಹೆಸರಿಸಿ?
ಉತ್ತರ :
ಸಂಸ್ಕøತ ಸ್ವರ ಸಂಧಿಗಳು:
ಸವರ್ಣದೀರ್ಘ ಸಂಧಿ, ಗುಣಸಂಧಿ, ಯಣ್ ಸಂಧಿ, ವೃದ್ಧಿಸಂಧಿ
ಸಂಸ್ಕøತ ವ್ಯಂಜನ ಸಂಧಿಗಳು:
ಜಶ್ತ್ವಸಂಧಿ, ಶ್ಚುತ್ವಸಂಧಿ, ಅನುನಾಸಿಕ ಸಂಧಿ
4. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಪದ ಬರೆಯಿರಿ?
ಅ) ನಮೋನಮೋ : ದ್ವಿರುಕ್ತಿ : : ಧೀರಶೂರ : ಜೋಡುನುಡಿ
ಆ) ಲೋಪಸಂಧಿ : ಸ್ವರಸಂಧಿ : : ಆದೇಶಸಂಧಿ : ವ್ಯಂಜನಸಂಧಿ
ಇ) ಕಟ್ಟಕಡೆಗೆ : ಕಡೆಗೆಕಡೆಗೆ : : ಮೊತ್ತಮೊದಲು : ದ್ವಿರುಕ್ತಿ
ಈ) ಶರಚ್ಚಂದ್ರ : ಶ್ಚುತ್ವಸಂಧಿ : : ದಿಗಂತ : ಜಶ್ತ್ವಸಂಧಿ
3. ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ?
ಸುರ + ಅಸುರ = ಸುರಾಸುರ - ಸವರ್ಣದೀರ್ಘ ಸಂಧಿ
ಬಲ್ಲೆನು + ಎಂದು = ಬಲ್ಲೆನೆಂದು - ಲೋಪಸಂಧಿ
ಸೂರ್ಯ + ಉದಯ = ಸೂರ್ಯೋದಯ - ಗುಣಸಂಧಿ
ಮಳೆ + ಕಾಲ = ಮಳೆಗಾಲ - ಆದೇಶಸಂಧಿ
ಅಷ್ಟ + ಐಶ್ವರ್ಯ =ಅಷ್ಟೈಶ್ವರ್ಯ - ವೃದ್ಧಿಸಂಧಿ
ವೇದಿ + ಅಲ್ಲಿ = ವೇದಿಯಲ್ಲಿ - ಆಗಮಸಂಧಿ
I want this question with answers model papers vishayadharita please kannada
ReplyDelete