ಸಂವಿಧಾನ ರಚನಾ ಸಭೆಯ ಹಂಗಾಮಿ ಅಧ್ಯಕ್ಷರಾಗಿದ್ದವರು ಯಾರು?
ಉತ್ತರ:
1) ಡಾ.ಬಾಬು ರಾಜೇಂದ್ರ ಪ್ರಸಾದ
2) ಡಾ.ಬಿ.ಆರ್. ಅಂಬೇಡ್ಕರ್
3) ಟಿ.ಟಿ. ಕೃಷ್ಣಮಾಚಾರಿ
4) ಸಚ್ಚಿದಾನಂದ ಸಿನ್ಹಾ.
ಭಾರತ ಸಂವಿಧಾನ ರಚನಾ ಸಭೆ:
ಸಂವಿಧಾನ ರಚನಾ ಸಭೆಯು ಮೊದಲ ಅಧಿವೇಶನ ಡಿಸೆಂಬರ್ 9 1946 ರಂದೇ ನಡೆಯಿತು. ಅದೊಂದು ಐತಿಹಾಸಿಕ ಘಟನೆ, ಸಚ್ಚಿದಾನಂದ ಸಿನ್ಹಾ ಹಂಗಾಮಿ ಅಧ್ಯಕ್ಷರಾಗಿದ್ದರು. ಡಿಸೆಂಬರ್ 11, 1946 ರಂದು ಡಾ. ರಾಜೇಂದ್ರಪ್ರಸಾದ್ರವರು ಖಾಯಂ ಅಧ್ಯಕ್ಷರಾಗಿಯೂ ಮತ್ತು ಟಿ.ಟಿ.ಕೃಷ್ಣಮಾಚಾರಿಯವರನ್ನು ಉಪಾಧ್ಯಕರನ್ನಾಗಿ ಆಯ್ಕೆ ಮಾಡಲಾಯಿತು.
ಸಂವಿಧಾನ ರಚನೆಯಲ್ಲಿ ಅನೇಕರು ಕಾರ್ಯವನ್ನು ನಿರ್ವಹಿಸಿದರು. ಅವರಲ್ಲಿ ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್, ಡಾ.ಬಿ.ಆರ್. ಅಂಬೇಡ್ಕರ್, ಮೌಲಾನ ಅಬುಲ್ ಕಲಾಂ ಆಜಾದ್, ಸಿ.ರಾಜಗೋಪಾಲಚಾರಿ, ಕೆ.ಎಂ. ಮುನ್ಛಿ, ಶ್ರೀಮತಿ ಸರೋಜಿನಿ ನಾಯ್ಡು, ಶ್ರೀಮತಿ ಸುಚೇತ ಕೃಪಲಾನಿ. ಹಾಗೂ
ಕರ್ನಾಟಕದ ಎಸ್. ನಿಜಲಿಂಗಪ್ಪ, ಕೆ.ಸಿ.ರೆಡ್ಡಿ. ಕೆಂಗಲ್ ಹನುಮಂತಯ್ಯ, ಟೇಕೂರು ಸುಬ್ರಮಣ್ಯಂ ಮೊದಲಾದವರು ಪ್ರಮುಖರಾಗಿದ್ದರು.
ಉತ್ತರ: 4) ಸಚ್ಚಿದಾನಂದ ಸಿನ್ಹಾ
No comments:
Post a Comment