10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-9
ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು: ಭಾಗ-9
1. ಬಾಲ ಕಾರ್ಮಿಕರು ಎಂದರೆ ಯಾರು?
ಉ: ಶಾಲೆಯಿಂದ ಹೊರಗಿರುವ 14 ವರ್ಷದೊಳಗಿನ ಮಕ್ಕಳು
2. ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಹೇಳುವ ಸಂವಿಧಾನದ ವಿಧಿ ಯಾವುದು?
ಉ: 24 ನೇ
3. ಬಾಲಕಾರ್ಮಿಕ ನಿಷೇದ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ
ಉ: 1986
4. ಕಾಣದ ಹಸಿವು ಎಂದರೆ ಏನು?
ಉ: ಪೋಷಕಾಂಶಗಳ ಅಭಾವದಿಂದ ಉಂಟಾಗುವ ಹಸಿವು
ಉ: ಶಾಲೆಯಿಂದ ಹೊರಗಿರುವ 14 ವರ್ಷದೊಳಗಿನ ಮಕ್ಕಳು
2. ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಹೇಳುವ ಸಂವಿಧಾನದ ವಿಧಿ ಯಾವುದು?
ಉ: 24 ನೇ
3. ಬಾಲಕಾರ್ಮಿಕ ನಿಷೇದ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ
ಉ: 1986
4. ಕಾಣದ ಹಸಿವು ಎಂದರೆ ಏನು?
ಉ: ಪೋಷಕಾಂಶಗಳ ಅಭಾವದಿಂದ ಉಂಟಾಗುವ ಹಸಿವು
5. ಪೋಕ್ಸೋ ಕಾಯ್ದೆ ಜಾರಿಗೆ ಬಂದ ವರ್ಷ
ಉ: 2012
6. ಪೋಕ್ಸೋ ಕಾಯಿದೆಯ ಉದ್ದೇಶ
ಉ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು
7. ಹೆಣ್ಣು ಭ್ರೂಣ ಹತ್ಯೆ ಎಂದರೆ ಏನು?
ಉ: ತಾಯಿಯ ಗರ್ಭದಲ್ಲಿ ಬೆಳೆದ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವುದು
8. ಹೆಣ್ಣು ಭ್ರೂಣ ಹತ್ಯೆ ನಿಷೇದ ಕಾಯ್ದೆ ಜಾರಿಗೆ ಬಂದ ವರ್ಷ
ಉ: 1994
9. ಭಾರತದಲ್ಲಿ ಹೆಣ್ಣು ಮಕ್ಕಳ ಮರಣ ದರವು ಗಂಡು ಮಕ್ಕಳ ಮರಣ ದರಕ್ಕಿಂತ ಹೆಚ್ಚಾಗಿದೆ ಏಕೆ?
ಉ: ಆರೋಗ್ಯ ಸೌಲಭ್ಯ, ಪೌಷ್ಠಿಕ ಆಹಾರ ಕೊರತೆ
10. ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಬಳಸುವ ಸಹಾಯವಾಣಿ ಸಂಖ್ಯೆ ಯಾವುದು?
ಉ: 1098
11. ಹಸಿವನ್ನು ವ್ಯಾಖ್ಯಾನಿಸಿ
ಉ: ನಿಗಧಿತ ಆಹಾರ ಒಬ್ಬ ವ್ಯಕ್ತಿಗೆ ದೊರೆಯದೆ ಇರುವುದು
12. ಬಾಲ್ಯವಿವಾಹ ನಿಷೇದ ಕಾಯ್ದೆ ಜಾರಿಗೆ ಬಂದ ವರ್ಷ
ಉ: 2006
13. ಲಿಂಗ ತಾರತಮ್ಯ ಎಂದರೆ
ಉ: ಸ್ತ್ರಿ-ಪುರುಷರ ನಡುವೆ ತಾರತಮ್ಯ ಮಾಡುವುದು
14. ಬಾಲ್ಯ ವಿವಾಹ ಎಂದರೆ
ಉ: 18 ವರ್ಷದೊಳಗಿನ ಹುಡುಗಿ 21 ವರ್ಷದೊಳಗಿನ ಹುಡುಗನಿಗೆ ಮದುವೆ ಮಾಡುವ ಪದ್ದತಿ
15. ಮಾತೃ ಸಂಸ್ಕøತಿಯ ಆಸ್ತಿಯ ಹಕ್ಕು ಹೊಂದಿರುವ ಸಮುದಾಯ ಯಾವುದು?
ಉ: ಕೇರಳದ ನಾಯರ್
16. ಸಾಮಾಜಿಕ ಚಳುವಳಿ ಎಂದರೆ
ಉ: ಮಾನವ ಸಮಾಜದ ಚಲನೆ, ಬದಲಾವಣೆಗೆ ಸಂಬಂಧಿಸಿದಂತೆ ನಡೆಯುವ ವ್ಯವಸ್ಥಿತ ಸ್ವಾಭಾವಿಕ ಪ್ರತಿರೋಧ
17. ಸಮೂಹ ವರ್ತನೆ ಎಂದರೆ ಏನು?
ಉ: ಜನರು ಆಕಸ್ಮಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾತ್ಕಾಲಿಕವಾಗಿ ನಡೆಸುವ ಆಲೋಚನೆ, ಭಾವನೆ ವರ್ತನೆಯಾಗಿದೆ
18. ಸಮೂಹ ವರ್ತನೆಯ ಮಾದರಿಗಳು ಯಾವುವು?
ಉ: ಜನಮಂದೆ, ದೊಂಬಿ
19. ಜನಮುಂದೆ ಎಂದರೆ
ಉ: ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿ ಸುತ್ತ ನೆರೆದಿರುವ ಜನರಾಶಿ
20. ದೊಂಬಿ ಎಂದರೆ
ಉ: ಹಿಂಸಾತ್ಮಕ – ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆ
21. ಜನಮಂದೆಯು ಯಾವಾಗ ದೊಂಬಿಯಾಗಿ ಪರಿವರ್ತನೆ ಹೊಂದುತ್ತದೆ?
ಉ: ಜನಮಂದೆಯ ವರ್ತನೆ ತೀರಾ ಹಿಂಸಾತ್ಮಕ – ವಿನಾಶಾತ್ಮಕವಾದಾಗ
22. ಪರಿಸರ ಚಳುವಳಿ ಎಂದರೆ
ಉ: ಜೀವ ಜಗತ್ತಿನ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಪ್ರತಿಪಾದಿಸುವುದು
23. ಜಾರ್ಖಂಡ್ ಮುಕ್ತಿ ಮೋರ್ಚಾ ಪರಿಸರದ ಹೋರಾಟ ಆರಂಭಗೊಂಡ ವರ್ಷ
ಉ: 1973
24. ಚಿಪ್ಕೋ ಚಳುವಳಿ ಆರಂಭಗೊಂಡ ಸ್ಥಳ
ಉ: ಉತ್ತರಪ್ರದೇಶ ರಾಜ್ಯದ ರೆನ್ನಿ (1974)
25. ಅಪ್ಪಿಕೋ ಚಳುವಳಿ ಆರಂಭವಾದ ಸ್ಥಳ,ವರ್ಷ ಯಾವುದು?
ಉ: ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ (1983)
26. ನರ್ಮದಾ ಬಚಾವೋ ಆಂದೋಲನದ ನೇತಾರರು ಯಾರು?
ಉ: ಮೇಧಾ ಪಾಟ್ಕರ್
27. ಸರ್ದಾರ್ ಸರೋವರ ಆಣೆಕಟ್ಟು ಯಾವ ನದಿಗೆ ನಿರ್ಮಿಸಲಾಗಿದೆ
ಉ: ನರ್ಮದಾ ನದಿ
28. ಮೌನ ಕಣಿವೆ ಆಂದೋಲನದ ಮುಖ್ಯ ಉದ್ದೇಶವೇನು?
ಉ: ಜೀವ ಸಂಕುಲಗಳ ಸಂರಕ್ಷಣೆ
29. ಕೈಗಾ ಅಣು ಸ್ಥಾವರ ವಿರೋಧಿ ಚಳವಳಿಯ ನೇತಾರರು ಯಾರು?
ಉ: ಡಾ|| ಶಿವರಾಮ ಕಾರಂತ
30. ಕುಸುಮಾ ಸೊರಬರವರು ಈ ಚಳುವಳಿಗೆ ಸಂಬಂಧಿಸಿದ್ದಾರೆ
ಉ: ಮಧ್ಯಪಾನ ನಿಷೇದ ಚಳುವಳಿ
*****
No comments:
Post a Comment