ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿಗೊಳಿಸಿದವರು ಯಾರು| 10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-2| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

 

10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-2

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು 

 ಭಾಗ-2

01. 1765 ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿಗೊಳಿಸಿದವನು ಯಾರು ?
ಉ: ರಾಬರ್ಟ್ ಕ್ಲೈವ್    
02. ಸಿಖ್ಖರನ್ನು ಸಂಘಟಿಸಿದವರು ಯಾರು ?
ಉ: ರಣಜಿತ್ ಸಿಂಗ್
03. ಒಂದನೇ ಆಂಗ್ಲೋ ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಸಾಲ್ ಬಾಯ್
04. ಸಹಾಯಕ ಸೈನ್ಯ ಪದ್ಧತಿ ಜಾರಿಗೊಳಿಸಿದವರು ಯಾರು ?
ಉ : ಲಾರ್ಡ್ ವೆಲ್ಲೆಸ್ಲಿ (1798) 

05. ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತರಲು ಕಾರಣವೇನು ?
ಉ: ಭಾರತೀಯ ರಾಜ್ಯಗಳನ್ನು ನಿಯಂತ್ರಿಸುವುದು.
06. ಸಹಾಯಕ ಸೈನ್ಯ ಪದ್ದತಿ ಎಂದರೆ
ಉ: ಕಂಪನಿ ಮತ್ತು ಭಾರತೀಯ ರಾಜರ ನಡುವಿನ ಒಂದು ಸೈನಿಕ ಒಪ್ಪಂದವೆ ಸಹಾಯಕ ಸೈನ್ಯ ಪದ್ದತಿ

07. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ಸಂಸ್ಥಾನ ಯಾವುದು ?
ಉ: ಹೈದರಾಬಾದ್
08. 2 ನೇ ಆಂಗ್ಲೋ- ಮರಾಠ ಯುದ್ಧಕ್ಕೆ ಕಾರಣವೇನು
ಉ: ಮರಾಠ ನಾಯಕರ ಆಂತರಿಕ ಸಂಘರ್ಷ.

09. 2 ನೇ ಆಂಗ್ಲೋ - ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಬೆಸ್ಸಿನ್ ಒಪ್ಪಂದ
10. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠ ಪೇಶ್ವೆ ಯಾರು ?
ಉ: 2ನೇ ಬಾಜಿರಾವ್

11. ಲಾರ್ಡ್ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಕಾರಣವೇನು ?
ಉ: ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಳವಾದರಿಂದ.
12. ಲಾಹೋರ್ ಒಪ್ಪಂದದ (1846) ಪರಿಣಾಮವೇನು ?
ಉ: ಬ್ರಿಟಿಷ್ ರೆಸಿಡೆಂಟ್‍ನು ಪಂಜಾಬಿನ ನಿಜವಾದ ಆಡಳಿತಗಾರನಾದನು. 

13. ಪಂಜಾಬನ್ನು ಬ್ರಿಟಿಷ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದವರು ಯಾರು ?
ಉ: ಲಾರ್ಡ್ ಡಾಲ್‍ಹೌಸಿ
14. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಅರ್ಥೈಸಿರಿ
ಉ: ಭಾರತೀಯ ರಾಜನು ದತ್ತು ತೆಗೆದುಕೊಂಡ ಪುತ್ರನಿಗೆ ಉತ್ತರಾಧಿಕಾರದ ಹಕ್ಕಿರಲಿಲ್ಲ.

15. ನಾಗರಿಕ ಸೇವಾ ವ್ಯವಸ್ಥೆ ಜಾರಿಗೆ ತಂದವರು ಯಾರು?
ಉ: ಕಾರ್ನ್‍ವಾಲೀಸ್
16. ರೆಗ್ಯುಲೇಟಿಂಗ್ (1773) ಕಾಯ್ದೆಯ ಉದ್ದೇಶವೇನು ?
ಉ: ನಿಯಂತ್ರಣ ಹೇರುವುದು

17. ಪೋರ್ಟ್ ವಿಲಿಯಂ ಕಾಲೇಜ್ ಸ್ಥಾಪನೆಯಾದ ಸ್ಥಳ ಯಾವುದು ?
ಉ: ಕಲ್ಕತ್ತಾ
18. ಹಿಂದೂಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ಎಂದು ಪ್ರತಿಪಾದಿಸಿದವರು ಯಾರು ?
ಉ: ಕಾರ್ನ್‍ವಾಲೀಸ 

19. ವ್ಯವಸ್ಥಿತವಾದ ಪೋಲಿಸ್ ವಿಭಾಗ ಅಸ್ತಿತ್ವಕ್ಕೆ ತಂದವರು ಯಾರು ?
ಉ: ಕಾರ್ನ್‍ವಾಲೀಸ
20. ಸೂಪರಿಡೆಂಟ್ ಆಫ್ ಪೋಲಿಸ್ ಹೊಸ ಹುದ್ದೆ ಸೃಷ್ಠಿಸಿದವರು ಯಾರು ?
ಉ: ಕಾರ್ನ್‍ವಾಲೀಸ

21. ಬ್ರಿಟಿಷ ಸೈನ್ಯದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಯಾವುದಾಗಿತ್ತು ?
ಉ: ಸುಬೇದಾರ್
22. ದಿವಾನಿ ಅದಾಲತ್, ಫೌಜದಾರಿ ಅದಾಲತ್ ನ್ಯಾಯಾಲಯ ಅಸ್ತಿತ್ವಕ್ಕೆ ತಂದವರು ಯಾರು ?
ಉ: ವಾರನ್ ಹೇಸ್ಟಿಂಗ್ಸ್

23. ಕಾನೂನು ಮತ್ತು ಸುವ್ಯವಸ್ಥೆ ಆಡಳಿತಕ್ಕೆ ಮುಖ್ಯ ಅಡಿಪಾಯವಾದ ಕಾಯ್ದೆ ಯಾವುದು ?
ಉ: ಪೋಲಿಸ್ ಕಾಯ್ಧೆ - 1861
24. ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ ತಂದವÀರು ಯಾರು ?
ಉ: ಕಾರ್ನ್‍ವಾಲೀಸ – 1793 

25. ಖಾಯಂ ಜಮೀನ್ದಾರಿ ಪದ್ಧತಿ ಎಂದರೆ
ಉ: ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಸರ್ಕಾರಕ್ಕೆ ಕೊಡುವ ಕಂದಾಯ ಪದ್ಧತಿ ಯಾಗಿದೆ.
26. ಖಾಯಂ ಜಮೀನ್ಧಾರಿ ಪದ್ಧತಿಯಿಂದ ಹುಟ್ಟಿಕೊಂಡ ಸಾಮಾಜಿಕ ವರ್ಗ ಯಾವುದು ?
ಉ: ಜಮೀನ್ದಾರರು

27. ಖಾಯಂ ಜಮೀನ್ಧಾರಿ ಪದ್ಧತಿಯನ್ವಯ ಭೂಮಾಲೀಕರಾದವÀರು ಯಾರು ?
ಉ: ಜಮೀನ್ದಾರರು
28. ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು ಎಂದು ಹೇಳಿದವರು ಯಾರು ?
ಉ: ಚಾಲ್ರ್ಸ್ ಮೆಟಕಾಫ್ 

29. ಖಾಯಂ ಜಮೀನ್ದಾರಿ ಪದ್ಧತಿ ಯಾವ ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದರು ?
ಉ: ಬಂಗಾಳ ಮತ್ತು ಬಿಹಾರ
30. ಮಹಲ್ ಪದದ ಅರ್ಥವೇನು?
ಉ: ತಾಲೂಕು 
*****

 

No comments:

Post a Comment

X STANDARD SECOND LANGUAGE ENGLISH-2020-21

 X STANDARD SECOND LANGUAGE ENGLISH-2020-21 STUDY MATERIAL FOR THE YEAR 2020-21 For Class 10 Karnataka Secondary Education Examination Board...