ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದ ಗವರ್ನರ್ ಜನರಲ್| 10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-3| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-3

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು 

 ಭಾಗ-3

01. ಮಹಲ್ವಾರಿ ಪದ್ಧತಿಯನ್ನು ಪ್ರಯೋಗಿಸಿದವರು ಯಾರು ?
ಉ: ಆರ್. ಎಂ ಬರ್ಡ್ ಮತ್ತು ಜೇಮ್ಸ್ ಥಾಮ್ಸನ್
02. ರೈತವಾರಿ ಪದ್ಧತಿ ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಗೊಳಿಸಿದವರು ಯಾರು ?
ಉ: ಅಲೆಕ್ಸಾಂಡರ್ ರೀಡ್ (1782)

03. ರೈತವಾರಿ ಪದ್ಧತಿಯನ್ನು ಮದರಾಸು, ಮೈಸೂರು (1801) ಪ್ರಾಂತ್ಯದಲ್ಲಿ ಜಾರಿಗೊಳಿಸಿದವರು ಯಾರು ?
ಉ: ಥಾಮಸ್ ಮನ್ರೋ
04. ಸರಕಾರ ಮತ್ತು ರೈತನ ನಡುವೆ ನೇರ ಸಂಪರ್ಕ ಕಲ್ಪಿಸಿದ ಭೂಕಂದಾಯ ಪದ್ಧತಿ ಯಾವುದು ?
ಉ: ರೈತವಾರಿ

05. ರೈತರು ಸಾಲದ ಸುಳಿಗೆ ಸಿಲುಕಿದ್ದು ಯಾವ ಭೂ ಕಂದಾಯ ಪದ್ದತಿಯಿಂದ
ಉ: ರೈತವಾರಿ
06. ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ ಅಧಿಕಾರಿ ಯಾರು ?
ಉ: ವಾರನ್ ಹೇಸ್ಟಿಂಗ್ಸ್

07. 1781 ರಲ್ಲಿ ಕಲ್ಕತ್ತಾದಲ್ಲಿ ಮದರಸಾ ಆರಂಭಿಸಿದವನು ಯಾರು ?
ಉ: ವಾರನ್ ಹೆಸ್ಟಿಂಗ್ಸ್
08. 1792 ರಲ್ಲಿ ಬನಾರಸ್ಸಿನಲ್ಲಿ ಸಂಸ್ಕøತ ಕಾಲೇಜ್ ಆರಂಭಿಸಿದವರು ಯಾರು ?
ಉ: ಜೊನಾಥನ್ ಡಂಕನ್ 

09. ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು ಯಾರು ?
ಉ: ಚಾಲ್ರ್ಸ್ ಗ್ರಾಂಟ್
10. ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದ ಗವರ್ನರ್ ಜನರಲ್ ಯಾರು ?
ಉ: ವಿಲಿಯಂ ಬೆಂಟಿಂಕ್ 

11. ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾದ ವರದಿ ನೀಡಿದವರು ಯಾರು ?
ಉ: ಮೆಕಾಲೆ
12. ರಕ್ತ ಮಾಂಸದÀಲ್ಲಿ ಭಾರತೀಯರಾಗಿಯೂ, ಅಭಿರುಚಿ ಅಭಿಪ್ರಾಯ ನೀತಿ ಮತ್ತು ಬುದ್ದಿವಂತಿಕೆಯಲ್ಲಿ ಇಂಗ್ಲೀಷರಾಗುವ ಭಾರತೀಯರನ್ನು ಸೃಷ್ಠಿಸುವ ಉದ್ದೇಶ ಹೊಂದಿದ ವರದಿ ಯಾವುದು ?
ಉ: ಮೆಕಾಲೆ ವರದಿ

13. 1857 ರಲ್ಲಿ ಕಲ್ಕತ್ತಾ, ಬಾಂಬೆ ಮತ್ತು ಮದರಾಸುಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದವರು ಯಾರು ?
ಉ: ಡಾಲ್‍ಹೌಸಿ
14. ಸತ್ಯಾರ್ಥ ಪ್ರಕಾಶ ಕೃತಿಯ ಕರ್ತೃ ಯಾರು ?
ಉ: ದಯಾನಂದ ಸರಸ್ವತಿ 

15. ರೆಗ್ಯುಲೇಟಿಂಗ್ ಕಾಯ್ದೆ ಜಾರಿಯಾದ ವರ್ಷ ಯಾವುದು ?
ಉ: 1773
16. ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅವಕಾಶ ಮಾಡಿದ ಶಾಸನ ಯಾವುದು ?
ಉ: ರೇಗ್ಯುಲೇಟಿಂಗ್ ಆ್ಯಕ್ಟ್ 

17. ಭಾರತೀಯರು ತಮ್ಮ ಸಾರ್ವಭೌಮವನ್ನು ಬ್ರಿಟಿಷ್ ರಾಜಸತ್ತೆಯ ಹೆಸರಿನಲ್ಲಿ ಪಡೆದಿದ್ದಾರೆಯೆ ವಿನಃ ಅವರದೇ ಸ್ವಂತ ಹಕ್ಕಲ್ಲ ಎಂದು ಹೇಳಿದ ಶಾಸನ ಯಾವುದು ?
ಉ: ಪಿಟ್ಸ್ ಇಂಡಿಯಾ ಕಾಯ್ದೆ
18. ನಿಯಂತ್ರಣ ಮಂಡಳಿ ಸ್ಥಾಪನೆಗೆ ಕಾರಣವಾದ ಶಾಸನ ಯಾವುದು ?
ಉ: ಪಿಟ್ಸ್ ಇಂಡಿಯಾ ಕಾಯ್ದೆ 1784 

19. ಮುಕ್ತ ವ್ಯಾಪಾರದ ಹೊಸ ಶಕೆ ಯಾವ ಕಾಯ್ದೆಯನ್ವಯ ಆರಂಭವಾಯಿತು
ಉ: 1813ರ ಚಾರ್ಟರ್ ಆ್ಯಕ್ಟ್
20. ಬಂಗಾಳದ ಗವರ್ನರ _____ ಕಾಯ್ದೆಯನ್ವಯ ಭಾರತದ ಗವರ್ನರ್ ಜನರಲ್‍ನಾದನು
ಉ: 1833ರ ಚಾರ್ಟರ್ ಕಾಯ್ದೆ 

21. ಗವರ್ನರ್ ಜನರಲ್‍ನನ್ನು ವೈಸರಾಯ್‍ನಾಗಿ ಬದಲಾಯಿಸಿದ ಶಾಸನ ಯಾವುದು ?
ಉ: ಭಾರತ ಸರ್ಕಾರದ ಕಾಯ್ದೆ 1858
22. ಬ್ರಿಟಿಷರು ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು. ಏಕೆ
ಉ: ಹೈದರಾಲಿ ಸೈನ್ಯ ಮದರಾಸಿನ ಪ್ರಾಂತ್ಯವನ್ನು ತಲುಪಿದ್ದು, ಬ್ರಿಟಿಷರಲ್ಲಿ ನಡುಕ ಹುಟ್ಟಿಸಿತು. ಇದರಿಂದ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು

23. ಭಾರತದ ಮೊದಲ ವೈಸರಾಯ್ ಯಾರು ?
ಉ: ಲಾರ್ಡ್ ಕ್ಯಾನಿಂಗ್
24. ಭಾರತೀಯರಿಗೆ ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಸ್ಥಾನ ಕಲ್ಪಿಸಿದ ಶಾಸನ ಯಾವುದು ?
ಉ: 1861 ಭಾರತೀಯ ಪರಿಷತ್ ಕಾಯ್ದೆ 

25. ಬ್ರಿಟಿಷರು ಭಾರತೀಯರನ್ನು ಒಡೆದು ಆಳಲು ಜಾರಿಗೆ ತಂದ ಕಾಯ್ದೆ ಯಾವುದು ?
ಉ: 1909 ರ ಭಾರತೀಯ ಪರಿಷತ್ ಕಾಯ್ದೆ
26. ಪ್ರತ್ಯೇಕ ಚುನಾವಣಾ ವ್ಯವಸ್ಥೆ (ಮುಸ್ಲಿಂರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ) ಜಾರಿಗೆ ತಂದ ಶಾಸನ ಯಾವುದು ?
ಉ: ಮಿಂಟೋ-ಮಾರ್ಲೆ ಸುಧಾರಣಾ ಕಾಯ್ದೆ (1909) 

27. ಭಾರತೀಯರನ್ನು ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಭಾಗವಹಿಸಲು ಪ್ರೇರೇಪಿಸಿದ ಶಾಸನ ಯಾವುದು ?
ಉ: 1919ರ ಭಾರತೀಯ ಪರಿಷತ್ ಕಾಯ್ದೆ
28. ಭಾರತದ ಸಂವಿಧಾನ ರಚನೆಗೆ ಭದ್ರ ಬುನಾದಿಯಾದ ಕಾಯ್ದೆ ಯಾವುದು ?
ಉ: 1935ರ ಭಾರತ ಸರಕಾರದ ಕಾಯ್ದೆ

29. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಶಾಸನ ಯಾವುದು ?
ಉ: 1935ರ ಭಾರತ ಸರರ್ಕಾದ ಕಾಯ್ದೆ
30. ಕೇಂದ್ರದಲ್ಲಿ ದ್ವಿಸರಕಾರ ಸ್ಥಾಪನೆಗೆ ಅವಕಾಶ ನೀಡಿದ ಶಾಸನ ಯಾವುದು ?
ಉ: 1935ರ ಭಾರತ ಸರ್ಕಾರ ಕಾಯ್ದೆ  

*****

No comments:

Post a Comment

X STANDARD SECOND LANGUAGE ENGLISH-2020-21

 X STANDARD SECOND LANGUAGE ENGLISH-2020-21 STUDY MATERIAL FOR THE YEAR 2020-21 For Class 10 Karnataka Secondary Education Examination Board...