10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-6
ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು:
ಭಾಗ-6
1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ ಯಾವುದು?
ಉ: 1885 ಡಿಸೆಂಬರ್ (ಬಾಂಬೆ)
2. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೊದಲ ಅಧ್ಯಕ್ಷ ಯಾರು?
ಉ: ಡಬ್ಲ್ಯ ಸಿ ಬ್ಯಾನರ್ಜಿ
3. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸ್ಥಾಪಕರು ಯಾರು?
ಉ: ಎ ಓ ಹ್ಯೂಮ್
4. ಕಾಂಗ್ರೆಸ್ನ ಮುಖ್ಯ ಉದ್ದೇಶವೇನು?
ಉ: ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸಿ ಬೆಳೆಸುವುದು
5. ಸಂಪತ್ತಿನ ಸೋರಿಕೆ ಸಿದ್ಧಾಂತ ಮಂಡಿಸಿದವರು ಯಾರು?
ಉ: ದಾದಾಬಾಯಿ ನವರೋಜಿ
6. ಉದಾರ ರಾಷ್ಟ್ರವಾದದ ಕಾಲವೆಂದು ಹೇಳುವ ಕಾಲ ಯಾವುದು?
ಉ: ಮಂದಗಾಮಿಗಳ ಕಾಲ
7. ಬಂಗಾಳದ ವಿಭಜನೆಗೆ ಕಾರಣವೇನು?
ಉ: ಬಂಗಾಳ ಬ್ರಿಟಿμï ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರ ವಾಗಿತ್ತು-ಅದನ್ನು ಹತ್ತಿಕ್ಕಲು
8. ಬಂಗಾಳ ವಿಭಜನೆ ಯೋಜನೆ ರೂಪಿಸಿದವನು ಯಾರು?
ಉ: ಲಾರ್ಡ್ಕರ್ಜನ್
9. 15-8-1947 ರಂದು ಗಾಂಧೀಜಿ ಇದ್ಧ ಸ್ಥಳ ಯಾವುದು?
ಉ: ನೌಕಾಲಿ
10. ವಲ್ಲಭಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣ
ಉ: ದೇಶಿಯ ಸಂಸ್ಥಾನಗಳನ್ನು ವಿಲೀನಿಕರಣಗೊಳಿಸಿರುವುದರಿಂದ
11. ನಿಜಾಮನು ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಲು ಕಾರಣವೇನು?
ಉ: ಸ್ವತಂತ್ರವಾಗುಳಿಯುವÀ ಉದ್ದೇಶ
12. ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯುವ್ಯ ಭಾಗ ಯಾವುದು?
ಉ: ಪಾಕ್ ಆಕ್ರಮಿತ ಪ್ರದೇಶ (ಪಿ.ಓ.ಕೆ.)
13. ಆಂಧ್ರ ಪ್ರದೇಶ ಮೊದಲ ಭಾμÁವಾರು ಪ್ರಾಂತವಾಗಿ ರಚನೆಯಾಗಲು ಕಾರಣವೇನು?
ಉ: ಪೊಟ್ಟಿ ಶ್ರೀರಾಮಲು ಮರಣ
14. ರಾಜ್ಯ ಪುನರ್ವಿಂಗಡಣಾ ಆಯೋಗ ರಚನೆಯಾದÀ ವರ್ಷ ಯಾವುದು?
ಉ: 1953
15. ರಾಜ್ಯ ಪುನರ್ವಿಂಗಡಣಾ ಕಾಯ್ದೆ ಜಾರಿಯಾದ ವರ್ಷ ಯಾವುದು?
ಉ: 1956
16. ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ವರ್ಷ
ಉ: 1956 ನವೆಂಬರ್ 1
17. ಮೊದಲ ಮಹಾಯುದ್ದಕ್ಕೆ ತಕ್ಷಣದ ಕಾರಣವೇನು?
ಉ: ಆರ್ಕ್ಡ್ಯೂಕ್ನ ಕೊಲೆ
18. ಝಾರ್ ದೊರಗಳ ವಿರುದ್ಧ ಪ್ರತಿರೋಧಕ್ಕೆ ಕಾರಣವೇನು?
ಉ: 1905 ರಲ್ಲಿ ರಷ್ಯಾವನ್ನು ಜಪಾನ್ ಸೋಲಿಸಿದ್ದು
19. ಹಿಟ್ಲರ್ ಗೋಬೆಲ್ಸ್ ಮಂತ್ರಿಯನ್ನು ನೇಮಿಸಲು ಕಾರಣವೇನು?
ಉ: ಜನಾಂಗೀಯ ದ್ವೇಷ ಪ್ರಸಾರಮಾಡಲು
20. ಹಿಟ್ಲರ್ ಸ್ಥಾಪಿಸಿದ ಪಕ್ಷದ ಹೆಸರೇನು?
ಉ: ಬೂದು ಅಂಗಿದಳ
21. ಹೊಲೊಕಾಸ್ಟ್ ಎಂದರೇನು?
ಉ: ಹಿಟ್ಲರ್ನ ಸಾಮೂಹಿಕ ಕಗ್ಗೊಲೆಗಳು
22. ರಾಷ್ಟ್ರಸಂಘ (1919,ಲೀಗ್ ಆಫ್ ನೆಷನ್ಸ್) ಸ್ಥಾಪನೆಗೆ ಕಾರಣವೇನು?
ಉ: ಮುಂದಿನ ದಿನಗಳಲ್ಲಿ ಯುದ್ಧ ತಡೆಯಲು
23. ರಾಷ್ಟ್ರೀಯ ಫ್ಯಾಸಿಸ್ಟ್ ಪಕ್ಷದ ಸ್ಥಾಪಕ ಯಾರು?
ಉ: ಮುಸೋಲಿನಿ
24. ಎರಡನೇ ಮಹಾಯುದ್ದಕ್ಕೆ ತತ್ಕ್ಷಣದ ಕಾರಣವೇನು?
ಉ: ಜರ್ಮನಿಯ ಪೋಲೆಂಡ್ ಮೇಲಿನ ದಾಳಿ
25. ಕ್ಯೊಮಿಂಟಾಂಗ್ ಪಕ್ಷದ ನಾಯಕ ಯಾರು? (ಚೀನಾ)
ಉ: ಸನ್-ಯಾತ್-ಸೆನ್
26. ಅಮೇರಿಕಾ 2 ನೇ ಮಹಾಯುದ್ದ ಪ್ರವೇಶಿಸಲು ಕಾರಣವೇನು?
ಉ: ಜಪಾನ್ ಅಮೇರಿಕಾದ ನೌಕಾನೆಲೆ ಪರ್ಲ್ಹಾರ್ಬರ ಮೇಲಿನ ದಾಳಿ
27. ನಿರುದ್ಯೋಗ ಎಂದರೇನು?
ಉ: ಕೆಲಸಮಾಡುವ ಸಾಮಥ್ರ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆÀ ಇಲ್ಲದಿರುವ ಪರಿಸ್ಥಿತಿ
28. ಭ್ರಷ್ಟಾಚಾರ ಎಂದರೇನು?
ಉ: ಎಲ್ಲಾ ವಿಧಿ-ವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಠಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ
29. ಭ್ರಷ್ಟಾಚಾರ ನಿಯಂತ್ರಣಕ್ಕೆ ಪೂರಕ ಸಂಸ್ಥೆಗಳು ಯಾವುವು?
ಉ: ಲೋಕಪಾಲ & ಲೋಕಾಯುಕ್ತ
30. ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಿಸಿದ ಸಮಿತಿ ಯಾವುದು?
ಉ: ಡಿ.ಎಂ.ನಂಜುಂಡಪ್ಪ ಸಮಿತಿ
*****
No comments:
Post a Comment