ಭಾರತಕ್ಕೆ ಯೂರೋಪಿಯನ್ನರ ಆಗಮನ| ಅಧ್ಯಾಯ-1 |ಇತಿಹಾಸ| 10ನೇ ತರಗತಿ ಸಮಾಜ ವಿಜ್ಞಾನ|

|ಭಾರತಕ್ಕೆ ಯೂರೋಪಿಯನ್ನರ ಆಗಮನ |

| ಅಧ್ಯಾಯ-1 |ಇತಿಹಾಸ| 

|10ನೇ ತರಗತಿ ಸಮಾಜ ವಿಜ್ಞಾನ|

 @jothreddy ಭಾರತಕ್ಕೆ ಯುರೋಪಿಯನ್ನರ ಆಗಮನ

@jothreddy youtube

ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ.

1. 1453ರಲ್ಲಿ ಆಟೋಮಾನ್ ಟರ್ಕರು ____ ನಗರವನ್ನು ವಶಪಡಿಸಿಕೊಂಡರು.
ಉತ್ತರ: ಕಾನಸ್ಟಾಂಟಿನೋಪಲ್
2. ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ____ ಕಂಡುಹಿಡಿದನು.
ಉತ್ತರ: ವಾಸ್ಕೋಡಗಾಮ
 
3. ಭಾರತದಲ್ಲಿದ್ದ ಫ್ರೇಂಚರ ರಾಜಧಾನಿ ___
ಉತ್ತರ: ಪುದುಚೇರಿ (ಪಾಂಡಿಚೇರಿ)
4. ರಾಬರ್ಟ ಕ್ಲೈವನು 1757ರಲ್ಲಿ ಸಿರಾಜ್-ಉದ್-ದೌಲನ ಮೇಲೆ ____ ಕದನ ಸಾರಿದನು.
ಉತ್ತರ: ಪ್ಲಾಸಿ
 
5. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ‘ದಿವಾನಿ’ ಹಕ್ಕನ್ನು ____ ನೀಡಿದನು.
ಉತ್ತರ: 2ನೇ ಷಾ ಅಲಂ
6. ಬಂಗಾಳದಲ್ಲಿ ‘ದ್ವಿ ಪ್ರಭುತ್ವ’ವನ್ನು ಜಾರಿಗೆ ತಂದವನು _____
ಉತ್ತರ: ರಾಬರ್ಟ ಕ್ಲೈವ್
 
ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ @jothreddy
1. ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪ್ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು?
ಉತ್ತರ: ಭಾರತ ಮತ್ತು ಯೂರೋಪ ಮಧ್ಯ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಸಂಬಂಧಗಳು ಏರ್ಪಟ್ಟಿದ್ದವು. ಪ್ರಮುಖವಾಗಿ ಭಾರತದ ಸಾಂಬಾರು ಪಧಾರ್ಥಗಳಾದ- ಮೆಣಸು, ಜೀರಿಗೆ, ದಾಲ್ಚಿನ್ನಿ, ಏಲಕ್ಕಿ, ಶುಂಠಿ ಮುಂತಾದ ಉತ್ಪನ್ನಗಳಿಗೆ ಯೂರೋಪಿನಲ್ಲಿ ಅಪಾರವಾದ ಬೇಡಿಕೆ ಇತ್ತು. ಮಧ್ಯಕಾಲದಲ್ಲಿಯು ಯುರೋಪ್, ಭಾರತ ಮತ್ತು ಇತರ ಏಷ್ಯಾ ದೇಶಗಳ ಮಧ್ಯೆ ವ್ಯಾಪಾರ ಮುಂದುವರಿಯಿತು.ಪ್ರಾರಂಭದಲ್ಲಿ ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಪೂರ್ವ ರೋಮನ್ (ಬೈಜಾಂಟಿಯಂ) ಸಾಮ್ರಾಜ್ಯದ ರಾಜಧಾನಿಯಾದ “ಕಾನ್ ಸ್ಟಾಂಟಿನೋಪಲ್” ನಗರಕ್ಕೆ ತಲುಪಿಸುತ್ತಿದ್ದರು. ಅಲ್ಲಿಂದ ಇಟಲಿಯ (ರೋಮನ್ ಸಾಮ್ರಾಜ್ಯದ ಭಾಗ) ವರ್ತಕರು ಅವುಗಳನ್ನು ಕೊಂಡು ಯೂರೋಪಿನ ದೇಶಗಳಲ್ಲಿ ಮಾರುತ್ತಿದ್ದರು.
@jothreddy 
 
2. ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿಯಲು ಕಾರಣವಾದ ಅಂಶಗಳನ್ನು ಚರ್ಚಿಸಿ.
ಉತ್ತರ: ಏಷ್ಯಾ ಮತ್ತು ಯುರೋಪ್ ವ್ಯಾಪಾರಗಳು ಕಾನ್‍ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿತ್ತು. 1453ರಲ್ಲಿ ಅಟೋಮಾನ್ ಟರ್ಕರು ಕಾನ್‍ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು. ಇದರಿಂದಾಗಿ ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರನಕ್ಕೆ ಬಂದವು. ಇಟಲಿಯ ವರ್ತಕರ ಏಕಸೌಮ್ಯವನ್ನು ಮುರಿಯಲು ಸ್ಪೇನ್, ಪೋರ್ಚುಗಲ್, ಮುಂತಾದ ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಲಾರಂಭಿಸಿದರು. ಇದಕ್ಕೆ ಪೂರಕವಾಗಿ ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ಆಸ್ಟ್ರೋಲೋಬ್ (ನಕ್ಷತ್ರ ಉನ್ನತಿ ಮಾಪನ), ಸಿಡಿಮದ್ದು, ಭೂಪಟ, ನಕ್ಷೆಗಳು ನಾವಿಕರಿಗೆ ಸಹಾಯವಾದವು.
 
3. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರುಗಳನ್ನು ಪಟ್ಟಿ ಮಾಡಿ.
ಉತ್ತರ:
ಪೋರ್ಚುಗಿಸರು
ಡಚ್ಚರು
ಇಂಗ್ಲಿಷರು ಹಾಗೂ
ಫ್ರೆಂಚರು
@jothreddy
 
4. ಎರಡನೇ ಕಾರ್ನಾಟಿಕ್ ಯುದ್ಧವನ್ನು ವಿವರಿಸಿ.
ಉತ್ತರ: ಬದಲಾದ ಸನ್ನಿವೇಶದಲ್ಲಿ ಫ್ರೆಂಚರು ಅಸಫಜಾನ ಮತ್ತೋಬ್ಬ ಮಗನಾದ ಸಲಾಬತ್ ಜಂಗನನ್ನು ಹೈದರಾಬಾದಿನ ನಿಜಾಮನನ್ನಾಗಿ ಮಾಡಿದರು. ಅವನ ರಕ್ಷಣೆಗಾಗಿ ಆಸ್ಥಾನದಲ್ಲಿ ಫ್ರೆಂಚರು ತಮ್ಮ ಸೈನ್ಯ ಸಹಿತವಾಗಿ ‘ಬುಸ್ಸಿ’ ಎಂಬ ಅಧಿಕಾರಿಯನ್ನು ನೇಮಿಸಿದರು. ಮತ್ತೊಂದು ಕಡೆ ಫ್ರೆಂಚರ ಬೆಂಬಲದಿಂದ ಚಂದಾಸಾಹೇಬನು ಕಾರ್ನಾಟಿಕ್‍ನ ನವಾಬನಾಗಿದ್ದನು. ಆದರೆ ಇಂಗ್ಲೀಷ್ ಈಸ್ಟ್ ಇಂಟಿಯಾ ಕಂಪನಿಯ ಅಧಿಕಾರಿ ರಾಬರ್ಟ್ ಕ್ಲೈವನು ಕಾರ್ನಾಟಿಕದ ರಾಜಧಾನಿ ಆರ್ಕಾಟಿನ ಮೇಲೆ ಆಕ್ರಮಣ ಮಾಡಿ ಫ್ರೆಂಚರು ಮತ್ತು ಚಂದಾಸಾಹೇಬನನ್ನು ಸೋಲಿಸಿದನು. ಅಂತಿಮವಾಗಿ ಈ ಯುದ್ಧದಲ್ಲಿ ಚಂದಾಸಾಹೇಬನನ್ನು ಬಂಧಿಸಿ ಹತ್ಯೆ ಮಾಡಲಾಯಿತು. ಅವನ ಸ್ಥಾನಕ್ಕೆ ಬ್ರಿಟಿಷರು ಅನ್ವರುದ್ದೀನನ ಮಗನಾದ ಮಹಮ್ಮದ್ ಅಲಿಯನ್ನು ನವಾಬನನ್ನಾಗಿ ಮಾಡಿದರು. ಕೊನೆಗೆ ಎರಡನೇಯ ಕಾರ್ನಾಟಿಕ್ ಯುದ್ಧವು “ಪಾಂಡಿಚೇರಿ” ಒಪ್ಪಂದದೊಂದಿಗೆ ಮುಕ್ತಾಯವಾಯಿತು. ಫ್ರೇಂಚರು ಡೂಪ್ಲೇಯನ್ನು ಹಿಂದಕ್ಕೆ ಕರೆಯಿಕೊಂಡರು. ಈ ಯುದ್ಧವು ಫ್ರೇಂಚರಿಗೆ ರಾಜಕೀಯ ಹಿನ್ನಡೆಯನ್ನು ಬ್ರಿಟಿಷರಿಗೆ ಪ್ರತಿಷ್ಠೆಯನ್ನು ತಂದು ಕೊಟ್ಟಿತು.
 
@jothreddy
5. ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ
ಉತ್ತರ: ಕಾರಣಗಳು:- ದಸ್ತಕ್‍ಗಳ ದುರುಪಯೋಗ 
ಅನುಮತಿ ಇಲ್ಲದೆ ಕೋಟೆಯ ದುರಸ್ಥಿ 
ಕಪ್ಪುಕೋಣೆ ದುರಂತ 
ಪರಿಣಾಮಗಳು:- ಈ ಯುದ್ಧವು ಭಾರತೀಯರಲ್ಲಿದ್ದ ಅನೈಕ್ಯತೆ, ಅಸಂಘಟನೆ ಮತ್ತು ಆ ಕಾಲದ ವ್ಯಾಪಾರಿ ವರ್ಗದಲ್ಲಿದ್ದ ಲೋಭಿತನವನ್ನು ಪ್ರದರ್ಶಿಸಿತು.
ಮೀರ್ ಜಾಫರ್ ಬಂಗಾಳದ ನವಾಬನಾದನು.
ಕಂಪನಿಯು ಬಂಗಾಳ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂಧಿತ ಹಕ್ಕನ್ನು ಪಡೆಯಿತು.
ಸಿರಾಜನು ಕಲ್ಕತ್ತಾದ ಮೇಲೆ ನಡೆಸಿದ ಆಕ್ರಮಣಕ್ಕೆ ಪರಿಹಾರವಾಗಿ ಮೀರ್ ಜಾಫರನು ಕಂಪನಿಗೆ 17 ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ನೀಡಿದನು.
 @jothreddy
 
6. ಬಕ್ಸಾರ್ ಕದನದ ಪರಿಣಾಮಗಳಾವುವು?
ಉತ್ತರ: ಈಸ್ಟ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ‘ದಿವಾನಿ’ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.
ಷಾ ಅಲಂ ವಾರ್ಷಿಕ 26 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ ಹಕ್ಕನ್ನೇಲ್ಲ ಬಿಟ್ಟುಕೊಡಬೇಕಾಯಿತು.
‘ಔದ್’ ನ ನವಾಬನಾದ ಷುಜ್-ಉದ್-ದೌಲನು ಕಂಪನಿಗೆ ಯುದ್ಧ ನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.
ಮೀರ್ ಜಾಫರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸತೊಡಗಿತು.

****
@jothreddy


ಭಾರತದ ಸಂವಿಧಾನಿಕ ಇತಿಹಾಸಲ್ಲಿ ಮೊದಲ ಲಿಖಿತ ದಾಖಲೆ ಯಾವುದು?

  ಭಾರತದ ಸಂವಿಧಾನಿಕ ಇತಿಹಾಸಲ್ಲಿ ಮೊದಲ ಲಿಖಿತ ದಾಖಲೆ ಯಾವುದು?

1) ಪಿಟ್ಸ್ ಇಂಡಿಯಾ ಕಾಯ್ದೆ 1784

2) ರೆಗುಲೇಟಿಂಗ್ ಕಾಯ್ದೆ 1773

3) ಚಾರ್ಟರ್ ಕಾಯ್ದೆ 1793

4) ಚಾರ್ಟರ್ ಕಾಯ್ದೆ 1813   


 ಸರಿಯಾದ ಉತ್ತರ: 2) ರೆಗ್ಯುಲೇಟಿಂಗ್ ಕಾಯ್ದೆ 1773

10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-9| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-9

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು:   ಭಾಗ-9

1. ಬಾಲ ಕಾರ್ಮಿಕರು ಎಂದರೆ ಯಾರು?
ಉ: ಶಾಲೆಯಿಂದ ಹೊರಗಿರುವ 14 ವರ್ಷದೊಳಗಿನ ಮಕ್ಕಳು
2. ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಹೇಳುವ ಸಂವಿಧಾನದ ವಿಧಿ ಯಾವುದು?
ಉ: 24 ನೇ

3. ಬಾಲಕಾರ್ಮಿಕ ನಿಷೇದ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ
ಉ: 1986
4. ಕಾಣದ ಹಸಿವು ಎಂದರೆ ಏನು?
ಉ: ಪೋಷಕಾಂಶಗಳ ಅಭಾವದಿಂದ ಉಂಟಾಗುವ ಹಸಿವು 

5. ಪೋಕ್ಸೋ ಕಾಯ್ದೆ ಜಾರಿಗೆ ಬಂದ ವರ್ಷ
ಉ: 2012
6. ಪೋಕ್ಸೋ ಕಾಯಿದೆಯ ಉದ್ದೇಶ
ಉ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು 

7. ಹೆಣ್ಣು ಭ್ರೂಣ ಹತ್ಯೆ ಎಂದರೆ ಏನು?
ಉ: ತಾಯಿಯ ಗರ್ಭದಲ್ಲಿ ಬೆಳೆದ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವುದು
8. ಹೆಣ್ಣು ಭ್ರೂಣ ಹತ್ಯೆ ನಿಷೇದ ಕಾಯ್ದೆ ಜಾರಿಗೆ ಬಂದ ವರ್ಷ
ಉ: 1994 

9. ಭಾರತದಲ್ಲಿ ಹೆಣ್ಣು ಮಕ್ಕಳ ಮರಣ ದರವು ಗಂಡು ಮಕ್ಕಳ ಮರಣ ದರಕ್ಕಿಂತ ಹೆಚ್ಚಾಗಿದೆ ಏಕೆ?
ಉ: ಆರೋಗ್ಯ ಸೌಲಭ್ಯ, ಪೌಷ್ಠಿಕ ಆಹಾರ ಕೊರತೆ
10. ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಬಳಸುವ ಸಹಾಯವಾಣಿ ಸಂಖ್ಯೆ ಯಾವುದು?
ಉ: 1098 

11. ಹಸಿವನ್ನು ವ್ಯಾಖ್ಯಾನಿಸಿ
ಉ: ನಿಗಧಿತ ಆಹಾರ ಒಬ್ಬ ವ್ಯಕ್ತಿಗೆ ದೊರೆಯದೆ ಇರುವುದು
12. ಬಾಲ್ಯವಿವಾಹ ನಿಷೇದ ಕಾಯ್ದೆ ಜಾರಿಗೆ ಬಂದ ವರ್ಷ
ಉ: 2006 

13. ಲಿಂಗ ತಾರತಮ್ಯ ಎಂದರೆ
ಉ: ಸ್ತ್ರಿ-ಪುರುಷರ ನಡುವೆ ತಾರತಮ್ಯ ಮಾಡುವುದು
14. ಬಾಲ್ಯ ವಿವಾಹ ಎಂದರೆ 
ಉ: 18 ವರ್ಷದೊಳಗಿನ ಹುಡುಗಿ 21 ವರ್ಷದೊಳಗಿನ ಹುಡುಗನಿಗೆ ಮದುವೆ ಮಾಡುವ ಪದ್ದತಿ 

15. ಮಾತೃ ಸಂಸ್ಕøತಿಯ ಆಸ್ತಿಯ ಹಕ್ಕು ಹೊಂದಿರುವ ಸಮುದಾಯ ಯಾವುದು?
ಉ: ಕೇರಳದ ನಾಯರ್ 

16. ಸಾಮಾಜಿಕ ಚಳುವಳಿ ಎಂದರೆ
ಉ: ಮಾನವ ಸಮಾಜದ ಚಲನೆ, ಬದಲಾವಣೆಗೆ ಸಂಬಂಧಿಸಿದಂತೆ ನಡೆಯುವ ವ್ಯವಸ್ಥಿತ ಸ್ವಾಭಾವಿಕ ಪ್ರತಿರೋಧ
17. ಸಮೂಹ ವರ್ತನೆ ಎಂದರೆ ಏನು?
ಉ: ಜನರು ಆಕಸ್ಮಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾತ್ಕಾಲಿಕವಾಗಿ ನಡೆಸುವ ಆಲೋಚನೆ, ಭಾವನೆ ವರ್ತನೆಯಾಗಿದೆ 

18. ಸಮೂಹ ವರ್ತನೆಯ ಮಾದರಿಗಳು ಯಾವುವು?
ಉ: ಜನಮಂದೆ, ದೊಂಬಿ
19. ಜನಮುಂದೆ ಎಂದರೆ
ಉ: ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿ ಸುತ್ತ ನೆರೆದಿರುವ ಜನರಾಶಿ
 
20. ದೊಂಬಿ ಎಂದರೆ
ಉ: ಹಿಂಸಾತ್ಮಕ – ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆ
21. ಜನಮಂದೆಯು ಯಾವಾಗ ದೊಂಬಿಯಾಗಿ ಪರಿವರ್ತನೆ ಹೊಂದುತ್ತದೆ?
ಉ: ಜನಮಂದೆಯ ವರ್ತನೆ ತೀರಾ ಹಿಂಸಾತ್ಮಕ – ವಿನಾಶಾತ್ಮಕವಾದಾಗ

22. ಪರಿಸರ ಚಳುವಳಿ ಎಂದರೆ
ಉ: ಜೀವ ಜಗತ್ತಿನ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಪ್ರತಿಪಾದಿಸುವುದು
23. ಜಾರ್ಖಂಡ್ ಮುಕ್ತಿ ಮೋರ್ಚಾ ಪರಿಸರದ ಹೋರಾಟ ಆರಂಭಗೊಂಡ ವರ್ಷ
ಉ: 1973 

24. ಚಿಪ್ಕೋ ಚಳುವಳಿ ಆರಂಭಗೊಂಡ ಸ್ಥಳ
ಉ: ಉತ್ತರಪ್ರದೇಶ ರಾಜ್ಯದ ರೆನ್ನಿ (1974)
25. ಅಪ್ಪಿಕೋ ಚಳುವಳಿ ಆರಂಭವಾದ ಸ್ಥಳ,ವರ್ಷ ಯಾವುದು?
ಉ: ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ (1983)

26. ನರ್ಮದಾ ಬಚಾವೋ ಆಂದೋಲನದ ನೇತಾರರು ಯಾರು?
ಉ: ಮೇಧಾ ಪಾಟ್ಕರ್
27. ಸರ್ದಾರ್ ಸರೋವರ ಆಣೆಕಟ್ಟು ಯಾವ ನದಿಗೆ ನಿರ್ಮಿಸಲಾಗಿದೆ
ಉ: ನರ್ಮದಾ ನದಿ 

28. ಮೌನ ಕಣಿವೆ ಆಂದೋಲನದ ಮುಖ್ಯ ಉದ್ದೇಶವೇನು?
ಉ: ಜೀವ ಸಂಕುಲಗಳ ಸಂರಕ್ಷಣೆ
29. ಕೈಗಾ ಅಣು ಸ್ಥಾವರ ವಿರೋಧಿ ಚಳವಳಿಯ ನೇತಾರರು ಯಾರು?
ಉ: ಡಾ|| ಶಿವರಾಮ ಕಾರಂತ 

30. ಕುಸುಮಾ ಸೊರಬರವರು ಈ ಚಳುವಳಿಗೆ ಸಂಬಂಧಿಸಿದ್ದಾರೆ
ಉ: ಮಧ್ಯಪಾನ ನಿಷೇದ ಚಳುವಳಿ

*****

10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-8| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-8

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು:   

ಭಾಗ-8

1. ವಿಶ್ವಸಂಸ್ಥೆಯ ಸಚಿವ ಸಂಪುಟ ಯಾವುದು?
ಉ: ಭದ್ರತಾ ಮಂಡಳಿ
2. ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು ಯಾವುವು?
ಉ: ಅಮೆರಿಕಾ, ರಷ್ಯಾ, ಚೀನಾ, ಫ್ರಾನ್ಸ್, ಇಂಗ್ಲೆಂಡ್ 

3. ಖಾಯಂ ಸದಸ್ಯ ರಾಷ್ಟ್ರಗಳು ಹೊಂದಿರುವ ವಿಶೇಷ ಅಧಿಕಾರ ಯಾವುದು?
ಉ: ವಿಟೋ & ನಿಷೇದಾತ್ಮಕ ಮತ ಚಲಾವಣೆ ಅಧಿಕಾರ
4. ದತ್ತಿ ಸಮಿತಿಯ ಕಾರ್ಯಕ್ಷೇತ್ರ ಇತ್ತೀಚಿಗೆ ಕಡಿಮೆಯಾಗಿದೆ ಏಕೆ?
ಉ: ಆಶ್ರಿತ ಭೂ ಪ್ರದೇಶಗಳು ಸ್ವತಂತ್ರವಾಗಿರುವುದರಿಂದ 

5. ಅಂತರರಾಷ್ಟ್ರೀಯ ನ್ಯಾಯಾಲಯವಿರುವ ಸ್ಥಳ ಯಾವುದು?
ಉ: ನೆದರಲ್ಯಾಂಡ್‍ನ ಹೇಗ್
6. ಆಹಾರ & ಕೃಷಿ ಸಂಸ್ಥೆ ಉದ್ದೇಶವೇನು?
ಉ: ಜಗತ್ತಿನ ಬಡತನ, ಹಸಿವು ಹಾಗೂ ಅಪೌಷ್ಠಿಕತೆಯ ವಿರುದ್ಧ ಹೋರಾಟ ಮಾಡುವುದು.

7. ವಿಶ್ವ ಆರೋಗ್ಯ ಸಂಸ್ಥೆಯ ಸಾಧನೆ ಏನು?
ಉ: ಸಿಡುಬು ರೋಗ ಸಮಗ್ರ ನಿವಾರಣೆ
8. ವಿಶ್ವ ಆರೋಗ್ಯ ಸಂಸ್ಥೆ ಕೇಂದ್ರ ಕಛೇರಿ ಇರುವುದು ಎಲ್ಲಿ?
ಉ: ಜಿನೇವಾ

9. ಯುನಿಸ್ಕೋ ಸ್ಥಾಪನೆಯ ಉದ್ದೇಶವೇನು?
ಉ: ವಿಶ್ವದಾದ್ಯಂತ ವಿಜ್ಞಾನ, ಶಿಕ್ಷಣ, ಸಂಸ್ಕøತಿಗಳಿಗೆ ಪ್ರೋತ್ಸಾಹ ನೀಡುವುದು.
10. ಮಾನವೀಯ ದೃಷ್ಠಿಕೋನ ಹೊಂದಿದ ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆ ಯಾವದು?
ಉ; ಯುನಿಸೆಫ್ 

11. ನೊಬೆಲ್ ಬಹುಮಾನ ಪಡೆದ ವಿಶ್ವಸಂಸ್ಥೆಯ ವಿಶೇಷ ಅಂಗ ಸಂಸ್ಥೆ ಯಾವುದು ?
ಉ: ಯುನಿಸೆಫ್ (1965)
12. ಯುನೆಸ್ಕೋದ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು ?
ಉ: ಪ್ಯಾರಿಸ್

13.IMF ನ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು ?
ಉ: ವಾಷಿಂಗ್‍ಟನ್
14. ಯುನಿಸೆಫ್ ಶುಭಾಶಯ ಪತ್ರಗಳನ್ನು ಮಾರಲು ಕಾರಣವೇನು?
ಉ: ಮಕ್ಕಳ ಯೋಗಕ್ಷೇಮಕ್ಕಾಗಿ 

15. ವಿವಿಧ ದೇಶಗಳ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕ್ ಯಾವುದು ?
ಉ: ಐ.ಎಮ್.ಎಫ್
16. ತೃತೀಯ ಆಧಾರ ಸ್ಥಂಭ ಎಂದು ಕರೆಯಲ್ಪಡುವ ಸಂಸ್ಥೆ ಯಾವುದು ?
ಉ: ವಿಶ್ವ ವ್ಯಾಪಾರ ಸಂಘ 

17. ದ್ವಿತೀಯ ಮಹಾಯುದ್ಧದ ಬಳಿಕ ಆರ್ಥಿಕ ಪುನಃಶ್ಚೇತನಕ್ಕಾಗಿ ಸ್ಥಾಪಿಸಿದ ಸಂಸ್ಥೆ ಯಾವುದು
ಉ: IBRD (ವಿಶ್ವ ಬ್ಯಾಂಕ್)
18. IBRD ಕೇಂದ್ರ ಕಛೇರಿ ಇರುವ ಸ್ಥಳ ಯಾವುದು?
ಉ: ವಾಷಿಂಗ್‍ಟನ್ 

19. ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು ?
ಉ: ಜಿನೇವಾ
20. ವಿಶ್ವವ್ಯಾಪಾರ ಸಂಘ ಪ್ರಾರಂಭವಾದÀ ವರ್ಷ ಯಾವುದು?
ಉ: 1995 ಜನವರಿ 1 

21. ಸಾರ್ಕ ಸ್ಥಾಪನೆಯಾದ ವರ್ಷ ಯಾವುದು?
ಉ: 1985
22. ಸಾರ್ಕ ಪ್ರಗತಿಗೆ ತೊಡಕಾಗಿರುವುದು ಏನು?
ಉ: ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು ಎನ್ನುವುದು.

23. ಸಾರ್ಕನ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು?
ಉ: ಕಠ್ಮಂಡು
24. ಆಫ್ರಿಕನ್ ಯೂನಿಯನ್ ಒಕ್ಕೂಟದ ಸದಸ್ಯರು ಬದ್ದರಾಗಿರುವುದು ಯಾವುದಕ್ಕೆ?
ಉ: ನೂತನ ವಸಾಹತುಶಾಹಿತ್ವದ ವಿರುದ್ಧ ಧ್ವನಿಯೆತ್ತಲು

25. ಶಿಕ್ಷಣ ಮೂಲಭೂತ ಹಕ್ಕು ಎಂದು ತಿಳಿಸುವ ಸಂವಿಧಾನದ ವಿಧಿ ಯಾವುದು?
ಉ: 21ಎ ವಿಧಿ
26. ಅಸ್ಪøಶ್ಯತೆ ವಿರೋಧಿಸುವ ಸಂವಿಧಾನದ ವಿಧಿ ಯಾವುದು?
ಉ: 17 ನೇ ವಿಧಿ

27. ಅಸ್ಪøಶ್ಯತೆ ಅಪರಾಧಗಳ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?
ಉ: 1955
28. ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಾಗಿ ತಿದ್ದುಪಡಿಯಾದ ವರ್ಷ ಯಾವುದು?
ಉ: 1976 

29. ಅಂಬೇಡ್ಕರ್‍ರವರನ್ನು ಸಂವಿಧಾನದ ಶಿಲ್ಪಿ ಎಂದು ಕರೆಯಲು ಕಾರಣವೇನು?
ಉ: ಸಂವಿಧಾನ ಕರಡು ರಚನೆಯಲ್ಲಿ ನಿರ್ಣಾಯಕ ಮತ್ತು ಮಹತ್ವದ ಪಾತ್ರ ನಿರ್ವಹಿಸಿದ್ದರಿಂದ
30. ಬಾಲಕಾರ್ಮಿಕತನ ಎಂದರೆ ಏನು?
ಉ: ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆ 
 
*****
 

10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-7| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-7

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು:   ಭಾಗ-7

1. ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದ ವಿಧಿ ಯಾವುದು?
ಉ: 371 ಜೆ
2. ಕೋಮುವಾದವೆಂದರೆ ಏನು?
ಉ: ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿ ಬೆಳೆಸಿಕೊಳ್ಳುವುದು. 

3. ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಜಾರಿಗೆ ಬಂದ ಕಾರ್ಯಕ್ರಮ ಯಾವುದು?
ಉ: ಸ್ತ್ರೀ ಶಕ್ತಿ
4. ಭಯೋತ್ಪಾದನೆ ಎಂದರೆ ಏನು?
ಉ: ಉಗ್ರಗಾಮಿ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ ತಂತ್ರಗಾರಿಕೆ

5. 21ನೇ ಶತಮಾನÀದಲ್ಲಿ ಭಾರತೀಯ ನಾಗರಿಕ ಸಮಾಜಕ್ಕೆ ಸವಾಲಾಗಿರುವುದು ಯಾವುದು?
ಉ: ಕಾರ್ಪೋರೇಟ್ ತಂತ್ರಗಾರಿಕೆ
6. ತಾವು ವಾಸಿಸುತ್ತಿರುವ ಪ್ರದೇಶದ ಬಗ್ಗೆ ಗಾಢವಾದ ಅಭಿಮಾನ ಹೊಂದಿರುವುದು ಏನು?
ಉ: ಪ್ರಾದೇಶಿಕತೆ (ಪ್ರಾದೇಶಿಕವಾದ) 

7. ಕಾರ್ಪೋರೇಟ್À ತಂತ್ರÀಗಾರಿಕೆ ಎಂದರೆ ಏನು?
ಉ: ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಪೂರ್ವನಿರ್ಧಾರಿತ ಗುರಿಗಳನ್ನು ತಲುಪಲು ಕಂಪನಿಯು ಕೈಗೊಳ್ಳುವ ವಿವಿಧ ರೀತಿಯ ಆಡಳಿತಾತ್ಮಕ ಪ್ರಯತ್ನಗಳೇ ಆಗಿದೆ
8. ಭಾರತದಲ್ಲಿ ಭಾμÁವಾರು ಪ್ರಾಂತ್ಯಗಳು ವಿಭಜನೆಯಾದ ವರ್ಷ
ಉ: 1956 

9. ವಿದೇಶಾಂಗ ನೀತಿ ಎಂದರೆ ಏನು?
ಉ: ಒಂದು ರಾಷ್ಟ್ರವು ಅನ್ಯ ರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿ
10. ಆಫ್ರಿಕಾದ ಗಾಂಧಿ ಎಂದು ಹೆಸರಾದವರು ಯಾರು?
ಉ: ನೆಲ್ಸ್‍ನ್ ಮಂಡೇಲಾ 

11. ಜಗತ್ತಿನ ಧುೃವೀಕರಣದ ಸಮಯದಲ್ಲಿ ಭಾರತ ಯಾವ ನೀತಿ ಅನುಸರಿಸಿತು?
ಉ: ಅಲಿಪ್ತ ನೀತಿ ಅನುಸರಿಸಿತು.
12. ಅಂತರರಾಷ್ಟ್ರೀಯ ಶಾಂತಿ & ಸೌಹಾದರ್Àತೆಯ ಕುರಿತು ತಿಳಿಸುವ ವಿಧಿ ಯಾವುದು?
ಉ: 51 ವಿಧಿ 

13. ಭಾರತÀ & ಚೀನಾದ ನಡುವೆ ಉತ್ತಮ ವ್ಯಾಪಾರ ಸಂಪರ್ಕ ಹೊಂದಿದ ಉಲ್ಲೇಖವಿರುವ ಕೃತಿ ಯಾವುದು?
ಉ: ಕೌಟಿಲ್ಯನ ಅರ್ಥಶಾಸ್ತ್ರ
14. ಭಾರತ & ಚೀನಾ ಪ್ರಯತ್ನದ ಫಲವಾಗಿ 2015 ರಲ್ಲಿ ಪ್ರಾರಂಭಗೊಂಡ ಸಂಘಟನೆ
ಉ: BRICS (ಬ್ರಿಕ್ಸ್) 

15. ಗೋವಾ ವಿಮೋಚನೆಗೊಂಡ ವರ್ಷ ಯಾವುದು?
ಉ:1961
16. ಭಾರತ & ರಷ್ಯಾ ನಡುವೆ 20 ವರ್ಷಗಳ ಶಾಂತಿ ಸಹಕಾರ ಮೈತ್ರಿ ಒಪ್ಪಂದವಾದ ವರ್ಷ ಯಾವುದು?
ಉ: 1971 

17. ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವಕ್ಕೆ ಬೆಂಬಲಿಸುತ್ತಿರುವ ದೇಶ ಯಾವುದು?
ಉ: ರಷ್ಯಾ
18. ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ದೇಶಗಳು ಯಾವುವು?
ಉ: ಭಾರತ & ಚೀನಾ 

19. ಚೀನಾ ಇಂದಿಗೂ ತನ್ನದೆಂದು ಪ್ರತಿಪಾದಿಸುತ್ತಿರುವ ಭಾರತದ ರಾಜ್ಯ ಯಾವುದು?
ಉ: ಅರುಣಾಚಲ ಪ್ರದೇಶ
20. ಭಾರತ & ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಪ್ರಮುಖ ಕಾರಣ 
ಉ: ಕಾಶ್ಮೀರ ಸಮಸ್ಯೆ 

21. 1971 ಭಾರತ - ಪಾಕಿಸ್ತಾನ ಯುದ್ದದ ಪರಿಣಾಮವೇನು?
ಉ: ಬಾಂಗ್ಲಾದೇಶದ ಉದಯ
22. ವಿಶ್ವಸಂಸ್ಥೆ ಪ್ರಾರಂಭವಾದ ವರ್ಷ ಯಾವುದು?
ಉ: 24 ಅಕ್ಟೋಬರ 1945 

23. ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆs ಅಂಗೀಕರಿಸಿದ ವರ್ಷ
ಉ: 1948 ಡಿಸೆಂಬರ 10
24. “ಶಸ್ತ್ರಾಸ್ತ್ರಗಳನ್ನು ಹೊಂದಿದ ಈ ಜಗತ್ತು, ಹಣ ಮಾತ್ರ ಪೋಲು ಮಾಡುವುದಿಲ್ಲ. ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಯನ್ನು ವ್ಯಯಗೊಳಿಸುತ್ತದೆ“ ಈ ಹೇಳಿಕೆ ನೀಡಿದವರು
ಉ: ಐಸನ್ ಹೊವರ್ 

25. ತೃತೀಯ ಜಗತ್ತು ಎಂಬ ವಿಚಾರ ಸಂಬಂಧಿಸಿದ್ದು
ಉ: ಬಡರಾಷ್ಟ್ರಗಳು
26. ಅಣು ಶಸ್ತ್ರಾಸ್ತ್ರಗಳ ತಯಾರಿಕಾ ಪೈಪೋಟಿಯಿಂದ ಜಗತ್ತು ಎದುರಿಸುವ ಗಂಭೀರ ಪರಿಣಾಮವೇನು?
ಉ: ಪರಸ್ಪರ ನಿಶ್ಚಿತ ನಾಶ 

27. 1ನೇ ಮಹಾಯುದ್ಧದ ನಂತರ ವಿಶ್ವಶಾಂತಿಗಾಗಿ ಸ್ಥಾಪಿತವಾದÀ ಸಂಸ್ಥೆ ಯಾವುದು?
ಉ: ಲೀಗ್ ಆಫ್ ನೇಷನ್ಸ್
28. ವಿಶ್ವಸಂಸ್ಥೆ ಸ್ಥಾಪನೆಯ ರೂವಾರಿಗಳು ಯಾರು?
ಉ: ಚರ್ಚಿಲ್, ಸ್ಟಾಲಿನ್ ಹಾಗೂ ರೂಸ್‍ವೆಲ್ಟ್ 

29. ವಿಶ್ವಸಂಸ್ಥೆ ಪದ ಚಾಲ್ತಿಗೆ ತಂದವರು ಯಾರು?
ಉ: ಪ್ರಾಂಕ್ಲಿನ್ ಡಿ ರೂಸ್‍ವೆಲ್ಟ್
30. ವಿಶ್ವಸಂಸ್ಥೆ ಮುಖ್ಯ ಕಛೇರಿಯ ಇರುವ ಸ್ಥಳ ಯಾವುದು?
ಉ: ನ್ಯೂಯಾರ್ಕ 
****
 

10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-6| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

 

10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-6

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು:  

 ಭಾಗ-6
1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ ಯಾವುದು?
ಉ: 1885 ಡಿಸೆಂಬರ್ (ಬಾಂಬೆ)
2. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಮೊದಲ ಅಧ್ಯಕ್ಷ  ಯಾರು?
ಉ: ಡಬ್ಲ್ಯ ಸಿ ಬ್ಯಾನರ್ಜಿ 
 
3. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಸ್ಥಾಪಕರು ಯಾರು?
ಉ: ಎ ಓ ಹ್ಯೂಮ್
4. ಕಾಂಗ್ರೆಸ್‍ನ ಮುಖ್ಯ ಉದ್ದೇಶವೇನು?
ಉ: ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸಿ ಬೆಳೆಸುವುದು
 
5. ಸಂಪತ್ತಿನ ಸೋರಿಕೆ ಸಿದ್ಧಾಂತ ಮಂಡಿಸಿದವರು ಯಾರು?
ಉ: ದಾದಾಬಾಯಿ ನವರೋಜಿ
6. ಉದಾರ ರಾಷ್ಟ್ರವಾದದ ಕಾಲವೆಂದು ಹೇಳುವ ಕಾಲ ಯಾವುದು?
ಉ: ಮಂದಗಾಮಿಗಳ ಕಾಲ 
 
7. ಬಂಗಾಳದ ವಿಭಜನೆಗೆ ಕಾರಣವೇನು?
ಉ: ಬಂಗಾಳ ಬ್ರಿಟಿμï ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರ ವಾಗಿತ್ತು-ಅದನ್ನು ಹತ್ತಿಕ್ಕಲು
8. ಬಂಗಾಳ ವಿಭಜನೆ ಯೋಜನೆ ರೂಪಿಸಿದವನು ಯಾರು?
ಉ: ಲಾರ್ಡ್‍ಕರ್ಜನ್ 
 
9. 15-8-1947 ರಂದು ಗಾಂಧೀಜಿ ಇದ್ಧ ಸ್ಥಳ ಯಾವುದು?
ಉ: ನೌಕಾಲಿ
10. ವಲ್ಲಭಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣ  
ಉ: ದೇಶಿಯ ಸಂಸ್ಥಾನಗಳನ್ನು ವಿಲೀನಿಕರಣಗೊಳಿಸಿರುವುದರಿಂದ 
 
11. ನಿಜಾಮನು ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಲು ಕಾರಣವೇನು?
ಉ: ಸ್ವತಂತ್ರವಾಗುಳಿಯುವÀ ಉದ್ದೇಶ
12. ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯುವ್ಯ ಭಾಗ ಯಾವುದು?
ಉ: ಪಾಕ್ ಆಕ್ರಮಿತ ಪ್ರದೇಶ (ಪಿ.ಓ.ಕೆ.)
 
13. ಆಂಧ್ರ ಪ್ರದೇಶ ಮೊದಲ ಭಾμÁವಾರು ಪ್ರಾಂತವಾಗಿ ರಚನೆಯಾಗಲು ಕಾರಣವೇನು?  
ಉ: ಪೊಟ್ಟಿ ಶ್ರೀರಾಮಲು ಮರಣ
14. ರಾಜ್ಯ ಪುನರ್ವಿಂಗಡಣಾ ಆಯೋಗ ರಚನೆಯಾದÀ ವರ್ಷ ಯಾವುದು?
ಉ: 1953 
 
15. ರಾಜ್ಯ ಪುನರ್ವಿಂಗಡಣಾ ಕಾಯ್ದೆ ಜಾರಿಯಾದ ವರ್ಷ ಯಾವುದು?
ಉ: 1956
16. ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ವರ್ಷ  
ಉ: 1956 ನವೆಂಬರ್ 1 
 
17. ಮೊದಲ ಮಹಾಯುದ್ದಕ್ಕೆ ತಕ್ಷಣದ ಕಾರಣವೇನು?
ಉ: ಆರ್ಕ್‍ಡ್ಯೂಕ್‍ನ ಕೊಲೆ
18. ಝಾರ್ ದೊರಗಳ ವಿರುದ್ಧ ಪ್ರತಿರೋಧಕ್ಕೆ ಕಾರಣವೇನು?
ಉ: 1905 ರಲ್ಲಿ ರಷ್ಯಾವನ್ನು ಜಪಾನ್ ಸೋಲಿಸಿದ್ದು 
 
19. ಹಿಟ್ಲರ್ ಗೋಬೆಲ್ಸ್ ಮಂತ್ರಿಯನ್ನು ನೇಮಿಸಲು ಕಾರಣವೇನು?
ಉ: ಜನಾಂಗೀಯ ದ್ವೇಷ ಪ್ರಸಾರಮಾಡಲು
20. ಹಿಟ್ಲರ್ ಸ್ಥಾಪಿಸಿದ ಪಕ್ಷದ ಹೆಸರೇನು?
ಉ: ಬೂದು ಅಂಗಿದಳ
 
21. ಹೊಲೊಕಾಸ್ಟ್ ಎಂದರೇನು?
ಉ: ಹಿಟ್ಲರ್‍ನ ಸಾಮೂಹಿಕ ಕಗ್ಗೊಲೆಗಳು
22. ರಾಷ್ಟ್ರಸಂಘ (1919,ಲೀಗ್ ಆಫ್ ನೆಷನ್ಸ್) ಸ್ಥಾಪನೆಗೆ ಕಾರಣವೇನು?
ಉ: ಮುಂದಿನ ದಿನಗಳಲ್ಲಿ ಯುದ್ಧ ತಡೆಯಲು 
 
23. ರಾಷ್ಟ್ರೀಯ ಫ್ಯಾಸಿಸ್ಟ್ ಪಕ್ಷದ ಸ್ಥಾಪಕ ಯಾರು?
ಉ: ಮುಸೋಲಿನಿ
24. ಎರಡನೇ ಮಹಾಯುದ್ದಕ್ಕೆ ತತ್‍ಕ್ಷಣದ ಕಾರಣವೇನು?
ಉ: ಜರ್ಮನಿಯ ಪೋಲೆಂಡ್ ಮೇಲಿನ ದಾಳಿ 
 
25. ಕ್ಯೊಮಿಂಟಾಂಗ್ ಪಕ್ಷದ ನಾಯಕ ಯಾರು? (ಚೀನಾ)
ಉ: ಸನ್-ಯಾತ್-ಸೆನ್
26. ಅಮೇರಿಕಾ 2 ನೇ ಮಹಾಯುದ್ದ ಪ್ರವೇಶಿಸಲು ಕಾರಣವೇನು?
ಉ: ಜಪಾನ್ ಅಮೇರಿಕಾದ ನೌಕಾನೆಲೆ ಪರ್ಲ್‍ಹಾರ್ಬರ ಮೇಲಿನ ದಾಳಿ
 
27. ನಿರುದ್ಯೋಗ ಎಂದರೇನು?
ಉ: ಕೆಲಸಮಾಡುವ ಸಾಮಥ್ರ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆÀ ಇಲ್ಲದಿರುವ ಪರಿಸ್ಥಿತಿ
28. ಭ್ರಷ್ಟಾಚಾರ ಎಂದರೇನು?
ಉ: ಎಲ್ಲಾ ವಿಧಿ-ವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಠಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ 
 
29. ಭ್ರಷ್ಟಾಚಾರ ನಿಯಂತ್ರಣಕ್ಕೆ ಪೂರಕ ಸಂಸ್ಥೆಗಳು ಯಾವುವು?
ಉ: ಲೋಕಪಾಲ & ಲೋಕಾಯುಕ್ತ
30. ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಿಸಿದ ಸಮಿತಿ ಯಾವುದು?
ಉ: ಡಿ.ಎಂ.ನಂಜುಂಡಪ್ಪ ಸಮಿತಿ 
 
*****


10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-5| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-5

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು:

 ಭಾಗ-5

1. “ವೇದಗಳಿಗೆ ಮರಳಿ” ಎಂದು ಘೂೀಷಿಸಿದವರು ಯಾರು?
ಉ: ದಯಾನಂದ ಸರಸ್ವತಿ
2. ಶುದ್ಧಿ ಚಳುವಳಿ ಎಂದರೆ ಏನು?
ಉ: ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರÀನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವುದು
 
3. ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆ ಪಡೆದ ತೀವ್ರವಾದಿ ಯಾರು?
ಉ: ಲಾಲಾ ಲಜಪತ್‍ರಾಯ್
4. ಬ್ರಹ್ಮ ಸಮಾಜದ ತಾತ್ವಿಕÀ ಪ್ರಭಾವದಿಂದ ಆರಂಭವಾದ ಚಳುವಳಿ ಯಾವುದು?  
ಉ: ಪ್ರಾರ್ಥನಾ ಚಳುವಳಿ
 
5. ಪ್ರಾರ್ಥನಾ ಸಮಾಜ ಆರಂಭವಾದ ಸ್ಥಳ ಯಾವುದು?
ಉ: ಮುಂಬೈ 1867
6. ಜ್ಯೋತಿಬಾ ಫುಲೆರವರ ಕೃತಿಯನ್ನು ಹೆಸರಿಸಿ.
ಉ: ಗುಲಾಮಗಿರಿ 
 
7. ಅಂಬೇಡ್ಕರ್‍ರವರಿಗೆ ಪ್ರೇರಣೆಯಾದವರು ಯಾರು?
ಉ: ಫುಲೆ ದಂಪತಿಗಳು
8. ಆಂಗ್ಲೋ-ಓರಿಯಂಟಲ್ ಕಾಲೇಜ್ ಸ್ಥಾಪನೆಗೆ ಕಾರಣವೇನು?
ಉ: ಪಾಶ್ಚಿಮಾತ್ಯ ವಿಜ್ಞಾನ ಮತ್ತು ಸಂಸ್ಕøತಿ ಕುರಿತು ಚಿಂತನೆ ಮಾಡುವುದು 
 
9. ಅಲಿಘರ್ ಚಳುವಳಿ ಆರಂಭಿಸಿದವರು ಯಾರು?
ಉ: ಸರ್ ಸೈಯದ್ ಅಹಮದ್ ಖಾನ್
10. ರಾಮಕೃಷ್ಣ ಆಶ್ರಮ (1897) ಸ್ಥಾಸಪಕರು
ಉ: ಸ್ವಾಮಿ ವಿವೇಕಾನಂದರು 
 
11. ರಾಮಕೃಷ್ಣ ಆಶ್ರಮ ಸ್ಥಾಪನೆ ಉದ್ದೇಶವೇನು?
ಉ: ಪರಮಹಂಸರ ಚಿಂತನೆ ಮತ್ತು ಆಶಯ ಜನರಿಗೆ ತಲುಪಿಸುವುದು
12. ಚಿಕಾಗೋ ವಿಶ್ವ ಧಾರ್ಮಿಕ ಸಮ್ಮೇಳನ ಜರುಗಿದ ವರ್ಷ ಯಾವುದು?
ಉ: 1893 
 
13. ಅನಿಬೆಸೆಂಟ್‍ರನ್ನು ಶ್ವೇತ ಸರಸ್ವತಿ ಎಂದು ಕರೆಯಲು ಕಾರಣವೇನು?
ಉ: ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದಿಸಿದರು
14. ನ್ಯೂ ಇಂಡಿಯಾ, ಕಾಮನ್ ವ್ಹೀಲ್ ಪತ್ರಿಕೆ ಆರಂಭಿÀಸಿದವರು ಯಾರು?
ಉ: ಅನಿಬೆಸೆಚಿಟ್ 
 
15. ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಮೊದಲ ಮಹಿಳಾ ಅಧ್ಯಕ್ಷೆ ಯಾರು?
ಉ: ಅನಿಬೆಸೆಂಟ್
16. ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂದು ಪ್ರತಿಪಾದಿಸಿದವರು ಯಾರು?
ಉ: ಶ್ರೀ ನಾರಾಯಣ ಗುರು 
 
17. ಆತ್ಮಗೌರವ ಚಳುವಳಿ ನಾಯಕರು ಯಾರು?
ಉ: ಇ. ವಿ. ರಾಮಸ್ವಾಮಿ ನಾಯರ್ (ಪೆರಿಯಾರ್)
18. ಜಸ್ಟಿಸ್ ಪತ್ರಿಕೆ, ದ್ರಾವಿಡ ಕಳಗಂ ಸಂಘಟನೆ ಸ್ಥಾಪಕರು ಯಾರು?
ಉ: ಪೆರಿಯಾರ್ 
 
19. ಜಸ್ಟಿಸ್ ಪಕ್ಷದ ಅಧ್ಯಕ್ಷರು ಯಾರು?
ಉ: ಪೆರಿಯಾರ್
20. 1857 ರ ದಂಗೆಯನ್ನು ಭಾರತೀಯರು ಏನೆಂದು ಕರೆದಿದ್ದಾರೆ
ಉ: ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 
 
21. ಇಂಗ್ಲಿಷ್ ಇತಿಹಾಸಕಾರರು 1857ರ ದಂಗೆಯನ್ನು ಹೇಗೆ ಕರೆದಿದ್ದಾರೆ?
ಉ: ಸಿಪಾಯಿ ದಂಗೆ
22. ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯ ಪರಿಣಾಮವೇನು?
ಉ: ಭಾರತದ ಕರಕುಶಲತೆ, ಕೈಗಾರಿಕೆಗಳ ನಾಶ 
 
23. ಜಮೀನ್ದಾರಿ ಪದ್ದತಿಯಿಂದ ಶೋಷಣೆಗೊಳಗಾದವರು ಯಾರು?
ಉ: ರೈತರು
24. ಬ್ಯಾರಕ್‍ಪುರ ಸೈನಿಕರ ಬಂಡಾಯದ ಪರಿಣಾಮವೇನು?
ಉ: ಮಂಗಲಪಾಂಡೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು 
 
25. 1857ರ ದಂಗೆಯಲ್ಲಿ ಭಾರತದ ಚಕ್ರವರ್ತಿ ಎಂದು ಇವರನ್ನು ಘೋಷಿಸಲಾಯಿತು
ಉ: ಎರಡನೇ ಬಹದ್ದೂರ್ ಷಾ
26. ಕಾನ್ಪೂರದ ಬಂಡಾಯದ ನಾಯಕತ್ವ ವಹಿಸಿದವರು ಯಾರು?
ಉ: ನಾನಾ ಸಾಹೇಬ 
 
27. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಸಿಡಿದೇಳಲು ಕಾರಣವೇನು?
ಉ: ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
28. ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ವಶಪಡಿಸಿಕೊಂಡ ಪ್ರದೇಶ ಯಾವುದು?
ಉ: ಗ್ವಾಲಿಯರ್ 
 
29. ಮೀರತನಲ್ಲಿ ದಂಗೆ ಉಂಟಾಗಲು ಕಾರಣವೇನು?
ಉ: ಭಾರತೀಯ ಸೈನಿಕರಿಂದ ತುಪಾಕಿ ಬಳಸಲು ನಿರಾಕರಣೆ
30. ವರ್ಣಾಕ್ಯೂಲರ್ ಪ್ರೆಸ್ ಕಾಯ್ದೆ ಜಾರಿಗೊಳಿಸಲು ಕಾರಣವೇನು?
ಉ: ಪತ್ರಿಕಾ ಸ್ವಾತಂತ್ರ ಮೊಟಕುಗೊಳಿಸುವುದು

*****

10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-4| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

 

10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-4

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು 

 ಭಾಗ-4

01. ಮೊದಲನೆ ಆಂಗ್ಲೋ – ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು
ಉ: ಮದ್ರಾಸ್ ಒಪ್ಪಂದ
02. ಎಂಡನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ ಯಾವುದು ?
ಉ: ಬ್ರಿಟಿಷರು ಮಾಹೆ ವಶಪಡಿಸಿಕೊಂಡಿದ್ದು, ತಿರುವಾಂಕೂರು ರಾಜ್ಯಗಳಲ್ಲಿನ ರಾಜಕೀಯ ಸನ್ನಿವೇಶ 

03. ಪೊರ್ಟೋನೋವೆ ಕದನದಲ್ಲಿ (1781) ಸೋತವರು
 ಉ: ಹೈದರಾಲಿ
04. ಪೊರ್ಟೋನೋವೆ ಕದನದ ಪರಿಣಾಮವೇನು ?
 ಉ: ಯುದ್ಧದ ಗತಿ ಬದಲಿಸಿತು ಬ್ರಿಟಿಷರಲ್ಲಿ ಸ್ಥೆರ್ಯ ಹೆಚ್ಚಿಸಿತು 

05. 2 ನೇ ಆಂಗ್ಲೋ-ಮೈಸೂರು ಯುದ್ದದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಮಂಗಳೂರು
06. ಮೂರನೇ ಆಂಗ್ಲೋ-ಮೈಸೂರು ಯುದ್ದಕೆ ಕಾರಣವೇನು ?
ಉ: ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ 

07. ಮೂರನೇ ಆಂಗ್ಲೋ-ಮೈಸೂರು ಯುದ್ದದ ಗತಿ ಬದಲಾಗಲು ಕಾರಣವೇನು ?  
ಉ: ಲಾರ್ಡ್ ಕಾರನ್‍ವಾಲೀಸ್ ಬ್ರಿಟಿಷ ಸೈನ್ಯದ ನಾಯಕತ್ವ ವಹಿಸಿಕೊಂಡಿದ್ದು.
08. ಮೂರನೇ ಆಂಗ್ಲೋ - ಮೈಸೂರು ಯುದ್ದದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಶ್ರೀರಂಗಪಟ್ಟಣ ಒಪ್ಪಂದ

09. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ ಯಾವುದು ?
ಉ: ಅಮಾನವೀಯ ಮತ್ತು ಅಸಮಾನ ಷರತ್ತಿನ ಒಪ್ಪಂದಕ್ಕೆ ಟಿಪ್ಪು ನಿರಾಕರಣೆ
10. ಮರಾಠಿಯಲ್ಲಿ ವಾಘ್ ಎಂದರೆ ಏನು ಅರ್ಥ ?
ಉ: ಹುಲಿ 

11. ದೋಂಡಿಯಾನನ್ನು ವಾಘ್ ಎಂದು ಕರೆಯಲು ಕಾರಣವೇನು ?
ಉ: ಶೌರ್ಯ ಪರಾಕ್ರಮಕ್ಕೆ ಪ್ರಸಿದ್ಧನಾಗಿದ್ದನು
12. ದೋಂಡಿಯಾನಿಗೆ ಸಹಾಯ ಮಾಡಿದವರು ಯಾರು
ಉ; ಫ್ರೆಂಚ್‍ರು 

13. ದೋಂಡಿಯಾನನ್ನು ಹತ್ಯೆ ಮಾಡಿದ ಸ್ಥಳ ಯಾವುದು ?
ಉ: ಕೋನ್‍ಗಲ್
14. ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರು ಸಂಸ್ಥಾನವನ್ನು ನೀಡಲು ಕಾರಣವೇನು ?
ಉ: ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದನು 

15. ಸಂಗೊಳ್ಳಿ ರಾಯಣ್ಣನ ಹೋರಾಟÀದ ಮುಖ್ಯ ಉದ್ದೇಶವೇನು ?
ಉ: ತಾಲ್ಲೂಕು ಕಛೇರಿ ಮತ್ತು ಖಜಾನೆ ಲೂಟಿ
16. ಚೆನ್ನಮ್ಮ ಮರಣ ಹೊಂದಿದ ಸ್ಥಳ ಯಾವುದು
ಉ: ಬೈಲಹೊಂಗಲ 

17. ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ಯಾವುದು ?
ಉ: ನಂದಗಡ (1831)
18. ಅಮರ ಸುಳ್ಯ ಬಂಡಾಯ ಮೂಲತಃ ಈ ಬಂಡಾಯ
ಉ: ರೈತ ಬಂಡಾಯ 

19. 1857 ಕ್ರಾಂತಿಯ ನಾಯಕನೆಂದು ಇತಿಹಾಸಕಾರು ವರ್ಣಿಸಿದ್ದು  
ಉ: ವೆಂಕಟಪ್ಪನಾಯ
20. ಹಲಗಲಿ ಬೇಡರು ಬ್ರಿಟಿಷರ ವಿರುದ್ದ ದಂಗೆ ಏಳಲು ಕಾರಣ
ಉ: ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳಲು 

21. 19 ನೇ ಶತಮಾನದ ಕಾಲಘಟ್ಟದ ಸುಧಾರಣೆಯ ಪ್ರಮುಖ ಲಕ್ಷಣವೇನು ?
ಉ: ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನಿಸುವುದು
22. ಆತ್ಮೀಯ ಸಭಾ(ಕಲ್ಕತ್ತಾ)ದ ಸ್ಥಾಪಕರು ಯಾರು ?
ಉ: ರಾಜಾ ರಾಮ್‍ಮೋಹನರಾಯ 

23. ಆತ್ಮೀಯ ಸಭಾದÀ ಪ್ರಮುಖ ಆಶಯವೇನು
ಉ: ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನು ಬಂಗಾಳದ ಸಮಾಜದಿಂದ ಕೊನೆಗೊಳಿಸುವುದು
24. ಬ್ರಹ್ಮ ಸಮಾಜದ (1828) ಸ್ಥಾಪಕರು ಯಾರು ?
ಉ: ರಾಜಾ ರಾಮ್‍ಮೋಹನರಾಯ

25. ಆಧುನಿಕ ಭಾರತದ ಹರಿಕಾರನೆಂದು ರಾಜಾ ರಾಮ್‍ಮೋಹನರಾಯರನ್ನು ಕರೆದವರು ಯಾರು ?
ಉ: ರವೀಂದ್ರನಾಥ ಠಾಗೂರ
26. ಭಾರತದ ಪುನರುಜ್ಜೀವನದ ಜನಕ, ಭಾರತೀಯ ರಾಷ್ಟ್ರೀಯತತೆಯ ಪ್ರವಾದಿ ಎಂದು ಕರೆಯಲ್ಪಡುವವರು ಯಾರು
ಉ: ರಾಜಾ ರಾಮ್‍ಮೋಹನರಾಯ್ 

27. ಯುವಬಂಗಾಳ ಚಳವಳಿ ಆರಂಭಿಸಿದವರು ಯಾರು
ಉ: ಹೆನ್ರಿ ವಿವಿಯನ್ ಡಿರೇಜಿಯೊ
28. ಅಕಾಡೆಮಿಕ್ ಅಸೋಸಿಯೇಷನ್ ಚರ್ಚಾವೇದಿಕೆ ಸ್ಥಾಪಕರು ಯಾರು ?
ಉ: ಹೆನ್ರಿ ವಿವಿಯನ್ ಡಿರೇಜಿಯೊ 

29. ಆರ್ಯ ಸಮಾಜ ಆರಂಭವಾದ ಸ್ಥಳ ಯಾವುದು ?  
ಉ: ಕಾಥೇವಾಡ
30. ದಯಾನಂದ ಸರಸ್ವತಿಯವರ ಮೂಲ ಹೆಸರು ಏನು
ಉ: ಮೂಲಶಂಕರ
*****

ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದ ಗವರ್ನರ್ ಜನರಲ್| 10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-3| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-3

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು 

 ಭಾಗ-3

01. ಮಹಲ್ವಾರಿ ಪದ್ಧತಿಯನ್ನು ಪ್ರಯೋಗಿಸಿದವರು ಯಾರು ?
ಉ: ಆರ್. ಎಂ ಬರ್ಡ್ ಮತ್ತು ಜೇಮ್ಸ್ ಥಾಮ್ಸನ್
02. ರೈತವಾರಿ ಪದ್ಧತಿ ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಗೊಳಿಸಿದವರು ಯಾರು ?
ಉ: ಅಲೆಕ್ಸಾಂಡರ್ ರೀಡ್ (1782)

03. ರೈತವಾರಿ ಪದ್ಧತಿಯನ್ನು ಮದರಾಸು, ಮೈಸೂರು (1801) ಪ್ರಾಂತ್ಯದಲ್ಲಿ ಜಾರಿಗೊಳಿಸಿದವರು ಯಾರು ?
ಉ: ಥಾಮಸ್ ಮನ್ರೋ
04. ಸರಕಾರ ಮತ್ತು ರೈತನ ನಡುವೆ ನೇರ ಸಂಪರ್ಕ ಕಲ್ಪಿಸಿದ ಭೂಕಂದಾಯ ಪದ್ಧತಿ ಯಾವುದು ?
ಉ: ರೈತವಾರಿ

05. ರೈತರು ಸಾಲದ ಸುಳಿಗೆ ಸಿಲುಕಿದ್ದು ಯಾವ ಭೂ ಕಂದಾಯ ಪದ್ದತಿಯಿಂದ
ಉ: ರೈತವಾರಿ
06. ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ ಅಧಿಕಾರಿ ಯಾರು ?
ಉ: ವಾರನ್ ಹೇಸ್ಟಿಂಗ್ಸ್

07. 1781 ರಲ್ಲಿ ಕಲ್ಕತ್ತಾದಲ್ಲಿ ಮದರಸಾ ಆರಂಭಿಸಿದವನು ಯಾರು ?
ಉ: ವಾರನ್ ಹೆಸ್ಟಿಂಗ್ಸ್
08. 1792 ರಲ್ಲಿ ಬನಾರಸ್ಸಿನಲ್ಲಿ ಸಂಸ್ಕøತ ಕಾಲೇಜ್ ಆರಂಭಿಸಿದವರು ಯಾರು ?
ಉ: ಜೊನಾಥನ್ ಡಂಕನ್ 

09. ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು ಯಾರು ?
ಉ: ಚಾಲ್ರ್ಸ್ ಗ್ರಾಂಟ್
10. ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದ ಗವರ್ನರ್ ಜನರಲ್ ಯಾರು ?
ಉ: ವಿಲಿಯಂ ಬೆಂಟಿಂಕ್ 

11. ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾದ ವರದಿ ನೀಡಿದವರು ಯಾರು ?
ಉ: ಮೆಕಾಲೆ
12. ರಕ್ತ ಮಾಂಸದÀಲ್ಲಿ ಭಾರತೀಯರಾಗಿಯೂ, ಅಭಿರುಚಿ ಅಭಿಪ್ರಾಯ ನೀತಿ ಮತ್ತು ಬುದ್ದಿವಂತಿಕೆಯಲ್ಲಿ ಇಂಗ್ಲೀಷರಾಗುವ ಭಾರತೀಯರನ್ನು ಸೃಷ್ಠಿಸುವ ಉದ್ದೇಶ ಹೊಂದಿದ ವರದಿ ಯಾವುದು ?
ಉ: ಮೆಕಾಲೆ ವರದಿ

13. 1857 ರಲ್ಲಿ ಕಲ್ಕತ್ತಾ, ಬಾಂಬೆ ಮತ್ತು ಮದರಾಸುಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದವರು ಯಾರು ?
ಉ: ಡಾಲ್‍ಹೌಸಿ
14. ಸತ್ಯಾರ್ಥ ಪ್ರಕಾಶ ಕೃತಿಯ ಕರ್ತೃ ಯಾರು ?
ಉ: ದಯಾನಂದ ಸರಸ್ವತಿ 

15. ರೆಗ್ಯುಲೇಟಿಂಗ್ ಕಾಯ್ದೆ ಜಾರಿಯಾದ ವರ್ಷ ಯಾವುದು ?
ಉ: 1773
16. ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅವಕಾಶ ಮಾಡಿದ ಶಾಸನ ಯಾವುದು ?
ಉ: ರೇಗ್ಯುಲೇಟಿಂಗ್ ಆ್ಯಕ್ಟ್ 

17. ಭಾರತೀಯರು ತಮ್ಮ ಸಾರ್ವಭೌಮವನ್ನು ಬ್ರಿಟಿಷ್ ರಾಜಸತ್ತೆಯ ಹೆಸರಿನಲ್ಲಿ ಪಡೆದಿದ್ದಾರೆಯೆ ವಿನಃ ಅವರದೇ ಸ್ವಂತ ಹಕ್ಕಲ್ಲ ಎಂದು ಹೇಳಿದ ಶಾಸನ ಯಾವುದು ?
ಉ: ಪಿಟ್ಸ್ ಇಂಡಿಯಾ ಕಾಯ್ದೆ
18. ನಿಯಂತ್ರಣ ಮಂಡಳಿ ಸ್ಥಾಪನೆಗೆ ಕಾರಣವಾದ ಶಾಸನ ಯಾವುದು ?
ಉ: ಪಿಟ್ಸ್ ಇಂಡಿಯಾ ಕಾಯ್ದೆ 1784 

19. ಮುಕ್ತ ವ್ಯಾಪಾರದ ಹೊಸ ಶಕೆ ಯಾವ ಕಾಯ್ದೆಯನ್ವಯ ಆರಂಭವಾಯಿತು
ಉ: 1813ರ ಚಾರ್ಟರ್ ಆ್ಯಕ್ಟ್
20. ಬಂಗಾಳದ ಗವರ್ನರ _____ ಕಾಯ್ದೆಯನ್ವಯ ಭಾರತದ ಗವರ್ನರ್ ಜನರಲ್‍ನಾದನು
ಉ: 1833ರ ಚಾರ್ಟರ್ ಕಾಯ್ದೆ 

21. ಗವರ್ನರ್ ಜನರಲ್‍ನನ್ನು ವೈಸರಾಯ್‍ನಾಗಿ ಬದಲಾಯಿಸಿದ ಶಾಸನ ಯಾವುದು ?
ಉ: ಭಾರತ ಸರ್ಕಾರದ ಕಾಯ್ದೆ 1858
22. ಬ್ರಿಟಿಷರು ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು. ಏಕೆ
ಉ: ಹೈದರಾಲಿ ಸೈನ್ಯ ಮದರಾಸಿನ ಪ್ರಾಂತ್ಯವನ್ನು ತಲುಪಿದ್ದು, ಬ್ರಿಟಿಷರಲ್ಲಿ ನಡುಕ ಹುಟ್ಟಿಸಿತು. ಇದರಿಂದ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು

23. ಭಾರತದ ಮೊದಲ ವೈಸರಾಯ್ ಯಾರು ?
ಉ: ಲಾರ್ಡ್ ಕ್ಯಾನಿಂಗ್
24. ಭಾರತೀಯರಿಗೆ ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಸ್ಥಾನ ಕಲ್ಪಿಸಿದ ಶಾಸನ ಯಾವುದು ?
ಉ: 1861 ಭಾರತೀಯ ಪರಿಷತ್ ಕಾಯ್ದೆ 

25. ಬ್ರಿಟಿಷರು ಭಾರತೀಯರನ್ನು ಒಡೆದು ಆಳಲು ಜಾರಿಗೆ ತಂದ ಕಾಯ್ದೆ ಯಾವುದು ?
ಉ: 1909 ರ ಭಾರತೀಯ ಪರಿಷತ್ ಕಾಯ್ದೆ
26. ಪ್ರತ್ಯೇಕ ಚುನಾವಣಾ ವ್ಯವಸ್ಥೆ (ಮುಸ್ಲಿಂರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ) ಜಾರಿಗೆ ತಂದ ಶಾಸನ ಯಾವುದು ?
ಉ: ಮಿಂಟೋ-ಮಾರ್ಲೆ ಸುಧಾರಣಾ ಕಾಯ್ದೆ (1909) 

27. ಭಾರತೀಯರನ್ನು ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಭಾಗವಹಿಸಲು ಪ್ರೇರೇಪಿಸಿದ ಶಾಸನ ಯಾವುದು ?
ಉ: 1919ರ ಭಾರತೀಯ ಪರಿಷತ್ ಕಾಯ್ದೆ
28. ಭಾರತದ ಸಂವಿಧಾನ ರಚನೆಗೆ ಭದ್ರ ಬುನಾದಿಯಾದ ಕಾಯ್ದೆ ಯಾವುದು ?
ಉ: 1935ರ ಭಾರತ ಸರಕಾರದ ಕಾಯ್ದೆ

29. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಶಾಸನ ಯಾವುದು ?
ಉ: 1935ರ ಭಾರತ ಸರರ್ಕಾದ ಕಾಯ್ದೆ
30. ಕೇಂದ್ರದಲ್ಲಿ ದ್ವಿಸರಕಾರ ಸ್ಥಾಪನೆಗೆ ಅವಕಾಶ ನೀಡಿದ ಶಾಸನ ಯಾವುದು ?
ಉ: 1935ರ ಭಾರತ ಸರ್ಕಾರ ಕಾಯ್ದೆ  

*****

ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿಗೊಳಿಸಿದವರು ಯಾರು| 10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-2| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

 

10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-2

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು 

 ಭಾಗ-2

01. 1765 ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿಗೊಳಿಸಿದವನು ಯಾರು ?
ಉ: ರಾಬರ್ಟ್ ಕ್ಲೈವ್    
02. ಸಿಖ್ಖರನ್ನು ಸಂಘಟಿಸಿದವರು ಯಾರು ?
ಉ: ರಣಜಿತ್ ಸಿಂಗ್
03. ಒಂದನೇ ಆಂಗ್ಲೋ ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಸಾಲ್ ಬಾಯ್
04. ಸಹಾಯಕ ಸೈನ್ಯ ಪದ್ಧತಿ ಜಾರಿಗೊಳಿಸಿದವರು ಯಾರು ?
ಉ : ಲಾರ್ಡ್ ವೆಲ್ಲೆಸ್ಲಿ (1798) 

05. ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತರಲು ಕಾರಣವೇನು ?
ಉ: ಭಾರತೀಯ ರಾಜ್ಯಗಳನ್ನು ನಿಯಂತ್ರಿಸುವುದು.
06. ಸಹಾಯಕ ಸೈನ್ಯ ಪದ್ದತಿ ಎಂದರೆ
ಉ: ಕಂಪನಿ ಮತ್ತು ಭಾರತೀಯ ರಾಜರ ನಡುವಿನ ಒಂದು ಸೈನಿಕ ಒಪ್ಪಂದವೆ ಸಹಾಯಕ ಸೈನ್ಯ ಪದ್ದತಿ

07. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ಸಂಸ್ಥಾನ ಯಾವುದು ?
ಉ: ಹೈದರಾಬಾದ್
08. 2 ನೇ ಆಂಗ್ಲೋ- ಮರಾಠ ಯುದ್ಧಕ್ಕೆ ಕಾರಣವೇನು
ಉ: ಮರಾಠ ನಾಯಕರ ಆಂತರಿಕ ಸಂಘರ್ಷ.

09. 2 ನೇ ಆಂಗ್ಲೋ - ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಬೆಸ್ಸಿನ್ ಒಪ್ಪಂದ
10. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠ ಪೇಶ್ವೆ ಯಾರು ?
ಉ: 2ನೇ ಬಾಜಿರಾವ್

11. ಲಾರ್ಡ್ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಕಾರಣವೇನು ?
ಉ: ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಳವಾದರಿಂದ.
12. ಲಾಹೋರ್ ಒಪ್ಪಂದದ (1846) ಪರಿಣಾಮವೇನು ?
ಉ: ಬ್ರಿಟಿಷ್ ರೆಸಿಡೆಂಟ್‍ನು ಪಂಜಾಬಿನ ನಿಜವಾದ ಆಡಳಿತಗಾರನಾದನು. 

13. ಪಂಜಾಬನ್ನು ಬ್ರಿಟಿಷ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದವರು ಯಾರು ?
ಉ: ಲಾರ್ಡ್ ಡಾಲ್‍ಹೌಸಿ
14. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಅರ್ಥೈಸಿರಿ
ಉ: ಭಾರತೀಯ ರಾಜನು ದತ್ತು ತೆಗೆದುಕೊಂಡ ಪುತ್ರನಿಗೆ ಉತ್ತರಾಧಿಕಾರದ ಹಕ್ಕಿರಲಿಲ್ಲ.

15. ನಾಗರಿಕ ಸೇವಾ ವ್ಯವಸ್ಥೆ ಜಾರಿಗೆ ತಂದವರು ಯಾರು?
ಉ: ಕಾರ್ನ್‍ವಾಲೀಸ್
16. ರೆಗ್ಯುಲೇಟಿಂಗ್ (1773) ಕಾಯ್ದೆಯ ಉದ್ದೇಶವೇನು ?
ಉ: ನಿಯಂತ್ರಣ ಹೇರುವುದು

17. ಪೋರ್ಟ್ ವಿಲಿಯಂ ಕಾಲೇಜ್ ಸ್ಥಾಪನೆಯಾದ ಸ್ಥಳ ಯಾವುದು ?
ಉ: ಕಲ್ಕತ್ತಾ
18. ಹಿಂದೂಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ಎಂದು ಪ್ರತಿಪಾದಿಸಿದವರು ಯಾರು ?
ಉ: ಕಾರ್ನ್‍ವಾಲೀಸ 

19. ವ್ಯವಸ್ಥಿತವಾದ ಪೋಲಿಸ್ ವಿಭಾಗ ಅಸ್ತಿತ್ವಕ್ಕೆ ತಂದವರು ಯಾರು ?
ಉ: ಕಾರ್ನ್‍ವಾಲೀಸ
20. ಸೂಪರಿಡೆಂಟ್ ಆಫ್ ಪೋಲಿಸ್ ಹೊಸ ಹುದ್ದೆ ಸೃಷ್ಠಿಸಿದವರು ಯಾರು ?
ಉ: ಕಾರ್ನ್‍ವಾಲೀಸ

21. ಬ್ರಿಟಿಷ ಸೈನ್ಯದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಯಾವುದಾಗಿತ್ತು ?
ಉ: ಸುಬೇದಾರ್
22. ದಿವಾನಿ ಅದಾಲತ್, ಫೌಜದಾರಿ ಅದಾಲತ್ ನ್ಯಾಯಾಲಯ ಅಸ್ತಿತ್ವಕ್ಕೆ ತಂದವರು ಯಾರು ?
ಉ: ವಾರನ್ ಹೇಸ್ಟಿಂಗ್ಸ್

23. ಕಾನೂನು ಮತ್ತು ಸುವ್ಯವಸ್ಥೆ ಆಡಳಿತಕ್ಕೆ ಮುಖ್ಯ ಅಡಿಪಾಯವಾದ ಕಾಯ್ದೆ ಯಾವುದು ?
ಉ: ಪೋಲಿಸ್ ಕಾಯ್ಧೆ - 1861
24. ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ ತಂದವÀರು ಯಾರು ?
ಉ: ಕಾರ್ನ್‍ವಾಲೀಸ – 1793 

25. ಖಾಯಂ ಜಮೀನ್ದಾರಿ ಪದ್ಧತಿ ಎಂದರೆ
ಉ: ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಸರ್ಕಾರಕ್ಕೆ ಕೊಡುವ ಕಂದಾಯ ಪದ್ಧತಿ ಯಾಗಿದೆ.
26. ಖಾಯಂ ಜಮೀನ್ಧಾರಿ ಪದ್ಧತಿಯಿಂದ ಹುಟ್ಟಿಕೊಂಡ ಸಾಮಾಜಿಕ ವರ್ಗ ಯಾವುದು ?
ಉ: ಜಮೀನ್ದಾರರು

27. ಖಾಯಂ ಜಮೀನ್ಧಾರಿ ಪದ್ಧತಿಯನ್ವಯ ಭೂಮಾಲೀಕರಾದವÀರು ಯಾರು ?
ಉ: ಜಮೀನ್ದಾರರು
28. ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು ಎಂದು ಹೇಳಿದವರು ಯಾರು ?
ಉ: ಚಾಲ್ರ್ಸ್ ಮೆಟಕಾಫ್ 

29. ಖಾಯಂ ಜಮೀನ್ದಾರಿ ಪದ್ಧತಿ ಯಾವ ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದರು ?
ಉ: ಬಂಗಾಳ ಮತ್ತು ಬಿಹಾರ
30. ಮಹಲ್ ಪದದ ಅರ್ಥವೇನು?
ಉ: ತಾಲೂಕು 
*****

 

10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-1| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-1

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು 

 ಭಾಗ-1

1. ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದಾಗಿತ್ತು ?
ಉ: ಕಾನ್‍ಸ್ಟಾಂಟಿನೋಪಲ್
2. ಯೂರೋಪಿನ ವ್ಯಾಪಾರದ ಹೆಬ್ಬಾಗಿಲು ಯಾವುದು?
ಉ: ಕಾನ್‍ಸ್ಟಾಂಟಿನೋಪಲ್
 
3. ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರ ಯಾವುದು ?
ಉ: ಕಾನ್‍ಸ್ಟಾಂಟಿನೋಪಲ್
4. ಅಟೋಮನ್ ಟರ್ಕರು ಕಾನ್‍ಸ್ಟಾಂಟಿನೋಪಲ್ ವಶÀಪಡಿಸಿಕೊಂಡ ವರ್ಷ ಯಾವುದು ?
ಉ: 1453 
 
5. 1498ರಲ್ಲಿ ವಾಸ್ಕೊಡಗಾಮ ಭಾರತದಲ್ಲಿ ಬಂದಿಳಿದ ಸ್ಥಳ ಯಾವುದು ?
ಉ: ಕಾಪ್ಪಡ್
6. ಭಾರತದೊಂದಿಗೆ ಮರುವ್ಯಾಪಾರ ಸಂಬಂಧ ಸ್ಥಾಪಿಸಿದ ಮೊದಲ ಯೂರೋಪಿಯನ್ನರು ಯಾರು ?
ಉ: ಪೋರ್ಚುಗೀಸರು 
 
7. ಭಾರತವನ್ನು ಮೊದಲು ಪ್ರವೇಶಿಸಿದ ಮತ್ತು ಭಾರತವನ್ನು ತೊರೆದಕೊನೆಯ ಯೂರೋಪಿಯನ್ನರು ಯಾರು ?
ಉ: ಪೊರ್ಚುಗೀಸರು
8. ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ್ ಯಾರು ?
ಉ: ಫ್ರಾನ್ಸಿಸ್ಕೊ-ಡಿ-ಆಲ್ಮೆಡ್
 
9. ನೀಲಿ ನೀರಿನ ನೀತಿ ಜಾರಿಗೆ ತಂದವರು ಯಾರು ?
ಉ: ಆಲ್ಮೆಡ
10. ನೀಲಿ ನೀರಿನ ನೀತಿ ಜಾರಿಗೆ ತರಲು ಕಾರಣವೇನು ?
ಉ: ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ
 
11. ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ ಯಾರು.
ಉ: ಅಲ್ಬುಕರ್ಕ್
12. ಅಲ್ಬುಕರ್ಕ್ ಬಿಜಾಪೂರ ಸುಲ್ತಾನನಿಂದ ಗೋವೆ ಗೆದ್ದುಕೊಂಡ ವರ್ಷ ಯಾವುದು ?
ಉ: 1510
 
13. ಭಾರತದಲ್ಲಿ ಪೋರ್ಚುಗೀಸರ ಆಡಳಿತ ಕೇಂದ್ರ (ರಾಜಧಾನಿ) ಯಾವುದು ?
ಉ: ಗೋವಾ
14. 1602 ರಲ್ಲಿ ಯುನೈಟೆಟ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಲುಕಾರಣವೇನು ?
ಉ: ಪೂರ್ವ ದೇಶಗಳಲ್ಲಿ ವ್ಯಾಪಾರ ಮಾಡುವುದು
 
15. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಯಾವುದು ?
ಉ: 1600 ಡಿಸೆಂಬರ್
16. ಸೂರತ್‍ನಲ್ಲಿ ಇಂಗ್ಲಿರಿಗೆ ಮೊದಲ ಫ್ಯಾಕ್ಟರಿ (ದಾಸ್ತಾನುಮಳಿಗೆ) ತೆರೆಯಲು ಅನುಮತಿ ನೀಡಿದ ಮೊಗಲ್ ಸುಲ್ತಾನ ಯಾರು ?
ಉ: ಜಹಂಗೀರ
 
17. ಭಾರತದಲ್ಲಿ ಇಂಗೀಷರ ರಾಜಧಾನಿ ಯಾವುದು ?
ಉ: ಕಲ್ಕತ್ತ
18. ಫ್ರೆಂಚ್ ಈಸ್ಟ್ ಇಂಡಿಯಾ (1664) ಕಂಪನಿಯ ಪ್ರಥಮ ವ್ಯಾಪಾರಕೋಠಿ ಯಾವುದು ?
ಉ: ಸೂರತ್
 
19. ಭಾರತದಲ್ಲಿ ಫ್ರೆಂಚ್‍ರ ರಾಜಧಾನಿ ಯಾವುದು ?
ಉ: ಪುದುಚೇರಿ (ಪಾಂಡಿಚೇರಿ)
20. ದಕ್ಷಿಣ ಭಾರತದÀಲ್ಲಿ ಫ್ರೆಂಚ್‍ರ ಅಧಿಪತ್ಯ ಸ್ಥಾಪಿಸಲು ಹವಣಿಸಿದ ಫ್ರೆಂಚ್ ಅಧಿಕಾರಿ ಯಾರು ?
ಉ: ಡೂಪ್ಲೆ 
 
21. ಮೊದಲ ಕರ್ನಾಟಕ್ ಯುದ್ಧ ಯಾವ ಒಪ್ಪಂದದೊಂದಿಗೆಕೊನೆಗೊಂಡಿತು  
ಉ: ಏಕ್ಸ್-ಲಾ- ಚಾಪೆಲ್ ಒಪ್ಪಂದ
22. ಕರ್ನಾಟಿಕ್ ದ ರಾಜಧಾನಿ ಯಾವುದು ?
ಉ: ಆರ್ಕಾಟ್ 
 
23. ಎರಡನೆಯ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು
ಉ: ಪಾಂಡಿಚೇರಿ
24. ಫ್ರೆಂಚ್‍ರಿಗೆ ರಾಜಕೀಯ ಹಿನ್ನಡೆ, ಬ್ರಿಟಿಷರಿಗೆ ಪ್ರತಿಷ್ಟೆಯನ್ನು ತಂದುಕೊಟ್ಟ ಯುದ್ಧ ಯಾವುದು ?
ಉ: 2 ಕರ್ನಾಟಿಕ್ ಯುದ್ಧ 
 
25. ಫ್ರೆಂಚ್‍ರನ್ನು ನಿರ್ಣಾಯಕ ವಾಂಡಿವಾಷ (1760) ಕದನದಲ್ಲಿ ಸೋಲಿಸಿದವನು ಯಾರು ?
ಉ: ಸರ್ ಐರ್ ಕೂಟ
26. 1763ರಲ್ಲಿ ಪ್ಯಾರಿಸ್ ಒಪ್ಪಂದದÀ ಪ್ರಕಾರ ಫ್ರೆಂಚ್‍ರಿಗೆ ಹಿಂದಿರುಗಿಸಲಾದ ಸ್ಥಳ ಯಾವುದು ?
ಉ: ಪಾಂಡಿಚೇರಿ
 
27. ಬ್ರಿಟಿಷರಿಗೆ ಬಂಗಾಳದಲ್ಲಿ ಮುಕ್ತ ವ್ಯಾಪಾರ ಮಾಡಲು ಅನುಮತಿ ನೀಡಿದ ಮೊಗಲ್ ದೊರೆ ಯಾರು ?
ಉ: ಫಾರೂಕ್ ಶಿಯಾರ
28. ಪ್ಲಾಸಿ ಕದನ ನಡೆದ ವರ್ಷ ಯಾವುದು ?
ಉ: 1757 ಜೂನ್ 23
 
29. ಬ್ರಿಟಿಷರಿಗೆ ಬಂಗಾಳದ ದಿವಾನಿ ಹಕ್ಕು ನೀಡಿದವರು ಯಾರು ?
ಉ: ಎರಡನೇ ಷಾ ಆಲಂ
30. 1764 ರಲ್ಲಿ ಬಕ್ಸಾರ್ ಕದನದಲ್ಲಿ ಸಂಯುಕ್ತ ಸೈನ್ಯ ಸೋಲಿಸಿದವರು ಯಾರು ?
ಉ: ಹೆಕ್ಟರ್ ಮನ್ರೋ 
*****


10th First Language Kannada Chapter-7 Vruksha Sakshi| 10ನೇ ತರಗತಿ ಪ್ರಥಮ ಭಾಷೆ ಕನ್ನಡ ಗಧ್ಯ-7 ವೃಕ್ಷಸಾಕ್ಷಿ| ದುರ್ಗಸಿಂಹ|

10 ನೇ ತರಗತಿ ಪ್ರಥಮ ಭಾಷೆ ಕನ್ನಡ ಗಧ್ಯ-7

| ವೃಕ್ಷಸಾಕ್ಷಿ | ದುರ್ಗಸಿಂಹ|

 7. ವೃಕ್ಷಸಾಕ್ಷಿ

I ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. “ವೃಕ್ಷಸಾಕ್ಷಿ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ?
ಉ: ವೃಕ್ಷಸಾಕ್ಷಿ ಕತೆಯನ್ನು ದುರ್ಗಸಿಂಹ ಕವಿಯು ರಚಿಸಿದ ಕರ್ನಾಟಕ ಪಂಚತಂತ್ರಂ ಎಂಬ ಕೃತಿಯಿಂದ ಆರಿಸಲಾಗಿದೆ.


2. ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು?
ಉ: ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಸಂಪತ್ತಿನ ಕಳ್ಳತನದ ಆರೋಪವನ್ನು ಹೊರಿಸಿದನು.


3. ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು?
ಉ: ಹೊನ್ನನ್ನು ಹೂತಿಟ್ಟ ಸ್ಥಳದಲ್ಲಿ ಮತ್ತು ಆ ಸಂದರ್ಭದಲ್ಲಿ ಧರ್ಮಬುದ್ಧಿ ಮತ್ತು ತನ್ನನ್ನು ಹೊರತುಪಡಿಸಿ ಮನುಷ್ಯರಾರೂ ಇರಲಿಲ್ಲ. ಆದ್ದರಿಂದ ಕದ್ದವರಾರು ಎಂದು ದುಷ್ಟಬುದ್ಧಿಯು ಹೇಳಿದಾಗ ಧರ್ಮಾಧಿಕರಣರು ವಿಸ್ಮಯ ಹೊಂದಿದರು.


4. ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?

ಉ: ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ದೇವ, ಗುರು, ಬ್ರಾಹ್ಮಣರ ಪೂಜೆಗಳನ್ನು ಮಾಡುತ್ತ ಕಳೆದನು.


5. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?
ಉ: ಹೊನ್ನನ್ನು ಕದ್ದವರಾರು ಎಂದು ಸಾಕ್ಷ್ಯ ಕೇಳಲು ಧರ್ಮಾಧಿಕರಣರು ವಟ ವೃಕ್ಷದ ಸಮೀಪಕ್ಕೆ ಬಂದರು.


ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಧರ್ಮಬುದ್ಧಿಗೆ ದುಷ್ಟಬುದ್ಧಿಯು ಯಾವ ಸಲಹೆಯನ್ನಿತ್ತನು?

ಉ: ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಗಳಿಬ್ಬರೂ ವ್ಯಾಪಾರಕ್ಕೆ ಹೋಗಿ ಸಾಕಷ್ಟು ಹಣ ಸಂಪತ್ತು ಸಂಪಾದಿಸಿಕೊಂಡು ತಮ್ಮ ಜನ್ಮಭೂಮಿಗೆ ಮರಳಿ ಹೊರ ಉದ್ಯಾನವನದಲ್ಲಿದ್ದ ಸಂದರ್ಭದಲ್ಲಿ ಅದನ್ನು ಇಬ್ಬರೂ ಸಮ ಪಾಲು ಮಾಡಿಕೊಳ್ಳೋಣ ಎಂದು ಧರ್ಮಬುದ್ಧಿಯು ಹೇಳಿದಾಗ ಪಾಪಬುದ್ಧಿಯಿಂದ ಕೂಡಿದವನಾದ ದುಷ್ಟಬುದ್ಧಿಯು ನಾವು ಇಷ್ಟು ಹೊನ್ನನ್ನು ಮನೆಯಲ್ಲಿಟ್ಟು ಸ್ವೇಚ್ಛೆಯಿಂದ ಬಾಳಲು ಸಾಧ್ಯವಿಲ್ಲ ಮತ್ತೆ ವ್ಯಾಪಾರಕ್ಕೆ ಬೇರೆ ಊರಿಗೆ ಹೋಗಬೇಕಾದ್ದರಿಂದ ನಮ್ಮಿಬ್ಬರಿಗೂ ವೆಚ್ಚಮಾಡಲು ಎಷ್ಟು ಬೇಕೋ ಅಷ್ಟು ಹೊನ್ನನ್ನು ತೆಗೆದುಕೊಂಡು ಉಳಿದದ್ದನ್ನು ಇಲ್ಲಿಯೇ ಇಡೋಣ ಎಂದು ಸಲಹೆ ನೀಡಿದನು.


2. ದುಷ್ಟಬುದ್ಧಿಯು ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು?

ಉ: ಹೊನ್ನು ಹೇಗೆ ನಾಪತ್ತೆಯಾಯಿತು ಎಂಬುದನ್ನು ಅಲ್ಲಿದ್ದ ವಟವೃಕ್ಷವೊಂದೇ ಹೇಳಲು ಸಾಧ್ಯ ಎಂದು ಧರ್ಮಾಧಿಕರಣರು ವೃಕ್ಷಸಾಕ್ಷಿಯನ್ನು ಕೇಳುವಂತೆ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದ ದುಷ್ಟಬುದ್ಧಿಯು ತನ್ನ ಮನೆಗೆ ಬಂದು ತನ್ನ ತಂದೆಯ ಕೈಯನ್ನು ಹಿಡಿದು ಯಾರೂ ಇಲ್ಲದಂತಹ ಸ್ಥಳಕ್ಕೆ ಕರೆತಂದು ನಡೆದ ವೃತ್ತಾಂತವೆಲ್ಲವನ್ನೂ ವಿವರಿಸಿ ಹೇಳಿ ನಿಮ್ಮ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲ ದೂರವಾಗಿ ಹಲವು ಕಾಲದವರೆಗೆ ಹಸಿಯದೆ ಉಂಡು ಬಾಳುವಷ್ಟು ಹಣವು ಬರುವುದು. ನೀವು ಆ ಮರದ ಪೊಟರೆಯಲ್ಲಿ ಅಡಗಿದ್ದು ಧರ್ಮಬುದ್ಧಿಯೇ ಹೊನ್ನೆಲ್ಲವನ್ನೂ ತೆಗೆದುಕೊಂಡನೆಂದು ನುಡಿಯಿರಿ ಎಂದನು.


3. ಧರ್ಮಾಧಿಕರಣರು ವಟವೃಕ್ಷಕ್ಕೆ ಏನು ಹೇಳಿದರು?
ಉ: ಕಳೆದು ಹೋಗಿರುವ ಸಂಪತ್ತು ಕದ್ದವರಾರು ಎಂದು ತಿಳಿಯಲು ಧರ್ಮಾಧಿಕರಣರು ದುಷ್ಟಬುದ್ಧಿ ಮತ್ತು ಧರ್ಮಬುದ್ಧಿಯರೊಡಗೂಡಿ ಹೊನ್ನನ್ನು ಹೂತಿಟ್ಟ ಆಲದ ಮರದ ಸಮೀಪಕ್ಕೆ ಬಂದು ಅಷ್ಟವಿಧಾರ್ಚನೆಯಿಂದ ಮರವನ್ನು ಅರ್ಚಿಸಿ ಅನಂತರ ಅವರಿಬ್ಬರನ್ನೂ ವಿಚಾರಿಸಿ ಆ ಮರವನ್ನು ಕುರಿತು ನೀನಾದರೋ ಯಕ್ಷಾದಿ ದಿವ್ಯ ದೇವತಾವಾಸವೂ ಆದ ವೃಕ್ಷವಾಗಿರುವೆ. ಆದ್ದರಿಂದ ನಿನ್ನ ಸಾಕ್ಷಿ ಮಾಡಿ ಕೇಳುವೆವು. ನೀನು ನಿಜವನ್ನೇ ನುಡಿಯೆಂದು ಹೇಳಿದರು.


ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1. ವೃಕ್ಷಸಾಕ್ಷಿ ಪಾಠದಲ್ಲಿ ನೀವು ಮೆಚ್ಚುವ ಪಾತ್ರ ಯಾವುದು? ಏಕೆ?
ಉ: ಅತಿ ಕುಟಿಲ ಮನಸ್ಸುಳ್ಳವನಾದ ದುಷ್ಟಬುದ್ಧಿಯು ಧರ್ಮಬುದ್ಧಿ ಮತ್ತು ತಾನು ಇಬ್ಬರೂ ಸೇರಿಯೇ ಸಂಪಾದಿಸಿದ ಸಂಪತ್ತನ್ನು ಮನೆಗೆ ತೆಗೆದುಕೊಂಡು ಹೋಗಲು ಬಿಡದೇ ಅದನ್ನು ಮರದ ಕೆಳಗೆ ಹೂತಿಡಲು ಧರ್ಮಬುದ್ಧಿಯನ್ನು ಒಪ್ಪಿಸುವಲ್ಲಿ ಯಶಸ್ವಿಯಾಗುತ್ತಾನೆ. ಧರ್ಮಬುದ್ಧಿಗೆ ಗೊತ್ತಾಗದ ಹಾಗೆ ಹೂತಿಟ್ಟಿದ್ದ ಹೊನ್ನನ್ನು ತಾನೇ ತೆಗೆದು ಅದರ ಕಳುವಿನ ಆರೋಪವನ್ನು ಧರ್ಮಬುದ್ಧಿಯ ಮೇಲೆ ಹೊರಿಸುತ್ತಾನೆ. ಕೊನೆಗೆ ಇಬ್ಬರೂ ಧರ್ಮಾದಿಕರಣರಲ್ಲಿಗೆ ಬಂದು ವ್ಯಾಜ್ಯ ತೀರ್ಮಾನಿಸುವಂತೆ ಕೇಳಿಕೊಳ್ಳುತ್ತಾರೆ. ನಡೆದುದೆಲ್ಲವನ್ನು ವಿವರಿಸಿ ಧರ್ಮಬುದ್ಧಿಯೆ ಹೊನ್ನನ್ನು ಕದ್ದಿದ್ದಾನೆಂದು ಹೇಳುವ ದುಷ್ಟಬುದ್ಧಿಯು ಅದಕ್ಕೆ ಅಲ್ಲದ್ದ ಮರವೇ ಸಾಕ್ಷಿ ಎನ್ನುವನು. ಮರುದಿನ ಮರದ ಬಳಿ ಸಾಕ್ಷಿ ಕೇಳಲು ಹೋಗುವುದೆಂದು ತೀರ್ಮಾನವಾದಾಗ ಮನೆಗೆ ಬಂದ ದುಷ್ಟಬುದ್ಧಿಯು ತನ್ನ ತಂದೆಯ ಬಳಿ ಮರದ ಪೊಟರೆಯಲ್ಲಿ ಅವಿತು ಸಾಕ್ಷಿ ನುಡಿಯುವಂತೆ ಒತ್ತಾಯಿಸುತ್ತಾನೆ. ಒಲ್ಲದ ಮನಸ್ಸಿನಿಂದ ಅವನ ತಂದೆಯು ಮಗನ ಮೇಲಿನ ವ್ಯಾಮೋಹಕ್ಕೆ ಕಟ್ಟುಬಿದ್ದು ಮರುದಿನ ಎಲ್ಲರೂ ಬರುವುದಕ್ಕೆ ಮುಂಚೆಯೇ ಮರದ ಪೊಟರೆಯಲ್ಲಿ ಅವಿತು ಕುಳಿತುಕೊಳ್ಳುವನು. ಧರ್ಮಾಧಿಕರಣರು ಧರ್ಮಬುದ್ಧಿ ಮತ್ತು ಧರ್ಮಬುದ್ಧಿಯರನ್ನು ನಿಲ್ಲಿಸಿ ವೃಕ್ಷದ ಸಾಕ್ಷಿ ಕೇಳಿದಾಗ ಪೊಟರೆಯಲ್ಲಿ ಅವಿತಿದ್ದ ದುಷ್ಟಬುದ್ಧಿಯ ತಂದೆಯು ಧರ್ಮಬುದ್ಧಿಯೇ ಹೊನ್ನನ್ನು ಕದ್ದಿರುವನೆಂದಾಗ ಮರವು ಸಾಕ್ಷಿ ನುಡಿಯುವುದೇ ಆದಲ್ಲಿ ಅದು ಸತ್ಯವನ್ನು ಹೇಳದೇ  ಏಕೆ ಸುಳ್ಳು ನುಡಿಯುವುದು ಎಂದು ಆಲೋಚಿಸಿದ ಧರ್ಮಬುದ್ಧಿಯು ಮರವನ್ನು ಪ್ರದಕ್ಷಿಣೆ ಹಾಕಿದಾಗ ಅಲ್ಲಿ ಮನುಷ್ಯ ಸಂಚಾರದ ಕುರುಹು ದೊರೆಯುತ್ತದೆ. ಆಗ ಧರ್ಮಬುದ್ಧಿಯು ಉಪಾಯವಾಗಿ ಎಲ್ಲ ವ್ಯಾಪಾರಿಗಳಿಗಿರುವಂತೆ ತನಗೂ  ಕೂಡ ಹಣದ ಮೋಹವಿದ್ದುದಾಗಿ ಹೂತಿಟ್ಟ ಹಣವನ್ನು ತೆಗೆಯಲು ಬಂದು ಅದನ್ನು ಮನೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಬೆಳಗಾಗಿದ್ದರಿಂದ ಪೊಟರೆಯಲ್ಲಿ ಅಡಗಿಸಿಟ್ಟುದಾಗಿಯೂ ಮರುದಿನ ತೆಗೆದುಕೊಂಡು ಹೋಗಲು ಬಂದಾಗ ಅಲ್ಲಿ ದೋಡ್ಡದಾದ ಹಾವು ಇತ್ತೆಂದೂ ಅದನ್ನು ಹಾಗೆ ಅಲ್ಲಿಯೇ ಬಿಟ್ಟು ಹೋಗಿದ್ದುದಾಗಿ ತಿಳಿಸಿ ಕಟ್ಟಿಗೆಯನ್ನು ತರಿಸಿ ಪೊಟರೆಗೆ ಹೊಗೆ ಹಾಕಿಸಿ ಹಾವನ್ನು ಓಡಿಸಿ ಅಡಗಿಸಿಟ್ಟ ಹೊನ್ನನ್ನು ಮರಳಿಸುವಂತೆ ಮಾಡಿದಾಗ ಪೊಟರೆಯಲ್ಲಿ ಅಡಗಿ ಕುಳಿತಿದ್ದ ದುಷ್ಟಬುದ್ಧಿಯು ಬೆಂಕಿಗೆ  ಆಹುತಿಯಾಗುತ್ತಾನೆ. ಹೀಗೆ ಅತಿ ಆಸೆಗೆ ಒಳಗಾದ ದುಷ್ಟಬುದ್ಧಿಯು ತಾನು ಬೀಸಿದ ಬಲೆಯಲ್ಲಿ ತಾನೆ ಸಿಕ್ಕಿ ಹೊನ್ನಿನ ಜೊತೆ ತನ್ನ ತಂದೆಯನ್ನು ಕಳೆದುಕೊಳ್ಳುತ್ತಾನೆ.


ಸಂದರ್ಭಾನುಸಾರ ಸ್ವಾರಸ್ಯ ಬರೆಯಿರಿ.
1. “ಪೊನ್ನನೆಲ್ಲಮಂ ನೀನೆ ಕೊಂಡೆ”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ ‘ವೃಕ್ಷಸಾಕ್ಷಿ’ ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ದುಷ್ಟಬುದ್ಧಿಯು ಧರ್ಮಬುದ್ಧಿಗೆ ಹೇಳಿದನು.
ಸಂದರ್ಭ: ವ್ಯಾಪಾರದಿಂದ ಬಂದ ಸಂಪತ್ತನ್ನು ಹಂಚಿಕೊಳೋಣ ಎಂಬ ಧರ್ಮಬುದ್ಧಿಯ ಸಲಹೆಗೆ ದುಷ್ಟಬುದ್ಧಿಯು ಇಷ್ಟೊಂದು ಹಣವನ್ನು ತೆಗೆದುಕೊಂಡು ಮನೆಯಲ್ಲಿಟ್ಟರೆ ನಮಗೆ ತೊಂದರೆಯಾಗುವುದು. ಆದ್ದರಿಂದ ಖರ್ಚಿಗೆ (ವೆಚ್ಚಕ್ಕೆ) ಬೇಕಾಗುವಷ್ಟು ಮಾತ್ರ ನಮ್ಮ ಬಳಿ ಇಟ್ಟುಕೊಂಡು ಉಳಿದದ್ದನ್ನು ಇಲ್ಲಿಯೇ ಇಡೋಣ ಎಂದನು. ಅದಕ್ಕೆ ಧರ್ಮಬುದ್ಧಿಯೂ ಒಪ್ಪಿಕೊಳ್ಳಲು ಇಬ್ಬರೂ ಸೇರಿ ಅದನ್ನು ಅಲ್ಲಿಯೇ ಇದ್ದ ಆಲದ ಮರದಕೆಳಗೆ ಹೂತಿಟ್ಟರು. ಕೆಲವು ದಿನಗಳು ಕಳೆದ ಮೇಲೆ ದುಷ್ಟಬುದ್ಧಿಯು ಧರ್ಮಬುದ್ಧಿಗೆ ಗೊತ್ತಾಗದ ಹಾಗೆ ಸಂಪತ್ತನ್ನು ಬಚ್ಚಿಟ್ಟ ಸ್ಥಳಕ್ಕೆ ಹೋಗಿ ಸಂಪತ್ತೆಲ್ಲವನ್ನೂ ತೆಗೆದುಕೊಂಡು ಗುಂಡಿಯನ್ನು ಮೊದಲಿನಂತೆಯೇ ಮುಚ್ಚಿಟ್ಟನು. ಮತ್ತೆ ಕೆಲವು ದಿನಗಳು ಕಳೆದ ಮೇಲೆ ತಾನೇ ಧರ್ಮಬುದ್ಧಿಯನ್ನು ಕರೆದು ತನಗೆ ವ್ಯಯಕ್ಕಾಗಿ ಹಣವು ಬೇಕಿತ್ತೆಂದು ಸಂಪತ್ತನ್ನು ಹೂತಿಟ್ಟ ಕಡೆ ಹೋಗಿ ತರೋಣವೆಂದು ಅವನನ್ನು ಕರೆದುಕೊಂಡು ಹೋಗಿ ಅಲ್ಲಿ ಅದು ಇರದಿದ್ದರಿಂದ ನೀನೆ ಎಲ್ಲವನ್ನು ತೆಗೆದುಕೊಂಡೆ ಎಂದು ಮತ್ತೆ ಧರ್ಮಬುದ್ಧಿಯ ಮೇಲೆ ಆರೋಪವನ್ನು ಮಾಡುವಾಗ ಮೇಲಿನ ಮಾತು ಬಂದಿದೆ.
ಸ್ವಾರಸ್ಯ: ಹಣವನ್ನು ತಾನೇ ದೋಚಿ ಅದನ್ನು ಮರೆಮಾಚುವ ಉದ್ದೇಶದಿಂದ ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಆರೋಪ ಹೊರಿಸಲು ಯತ್ನಿಸುತ್ತಿರುವುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.


2. “ಈತನ ಮಾತು ಅಶ್ರುತಪೂರ್ವಮ್”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ ‘ವೃಕ್ಷಸಾಕ್ಷಿ’ ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಧರ್ಮಾಧಿಕರಣರು ಹೇಳಿದರು.
ಸಂದರ್ಭ: ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಗಳಿಬ್ಬರೂ ವ್ಯಾಪಾರದಿಂದ ತಾವು ಸಂಪಾದಿಸಿದ ಹಣವನ್ನು ದುಷ್ಟಬುದ್ಧಿಯ ಸಲಹೆಯಂತೆ ಖರ್ಚಿಗೆ ಬೇಕಾದಷ್ಟು ಹಣವನ್ನು ಮಾತ್ರ ತಮ್ಮ ಬಳಿ ಇರಿಸಿಕೊಂಡು ಉಳಿದದ್ದನ್ನು ಒಂದು ಆಲದ  ವೃಕ್ಷದ ಬಳಿ ಹೂತಿಟ್ಟರು. ಪಾಪಬುದ್ಧಿಯಿಂದ ಕೂಡಿದ ದುಷ್ಟಬುದ್ಧಿಯು ಧರ್ಮಬುದ್ಧಿಗೆ ಗೊತ್ತಾಗದ ಹಾಗೆ ಆ ಸಂಪತ್ತನ್ನು ತೆಗೆದುಕೊಂಡು ಕಳ್ಳತನದ ಆರೋಪವನ್ನು ಧರ್ಮಬುದ್ಧಿಯ ಮೇಲೆ ಹೊರಿಸಿದನು. ಸಂಪತ್ತನ್ನು ತೆಗೆದುಕೊಂಡವರಾರೆಂದು ತಮ್ಮ ವ್ಯಾಜ್ಯವನ್ನು ಬಗೆಹರಿಸಲು ಅವರು ಧರ್ಮಾಧಿಕರಣರು ಇರುವಲ್ಲಿಗೆ ಬಂದರು. ನಡೆದುದೆಲ್ಲವನ್ನು ಧರ್ಮಾಧಿಕರಣರಿಗೆ ವಿವರಿಸಿದ ದುಷ್ಟಬುದ್ಧಿಯು  ಹೊನ್ನೆಲ್ಲವನ್ನು ಧರ್ಮಬುದ್ಧಿಯೇ ತೆಗೆದುಕೊಂಡನೆಂಬುದಕ್ಕೆ ಅಲ್ಲಿದ್ದ ಆಲದ ಮರವೇ ಸಾಕ್ಷಿ ಎಂದಾಗ ಧರ್ಮಾಧಕರಣರು ತಮ್ಮ ಮನಸ್ಸಿನಲ್ಲಿ ಮೇಲಿನಂತೆ ಅಂದುಕೊಂಡರು.
ಸ್ವಾರಸ್ಯ: ವೃಕ್ಷವು ಸಾಕ್ಷಿನುಡಿಯುವ ಬಗ್ಗೆ ಧರ್ಮಾಧಿಕರಣರು ಆಶ್ಚರ್ಯ ವ್ಯಕ್ತಪಡಿಸುವ ಸನ್ನಿವೇಶ ಇಲ್ಲಿ ವ್ಯಕ್ತವಾಗಿದೆ.


2. “ನಿನ್ನ ಪಳುವಗೆ ನಮ್ಮ ಕುಲವನೆಲ್ಲಮನಳಿವ ಬಗೆ”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ ‘ವೃಕ್ಷಸಾಕ್ಷಿ’ ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ದುಷ್ಟಬುದ್ಧಿಯ ತಂದೆ (ಪ್ರೇಮಮತಿ)ಯು ದುಷ್ಟಬುದ್ಧಿಗೆ ಹೇಳಿದನು.
ಸಂದರ್ಭ: ಹೊನ್ನನ್ನು ತಾನು ಕದ್ದ ಧರ್ಮಬುದ್ಧಿಯು ಅದರ ಆರೋಪವನ್ನು ಹೊರಿಸಿ ಅದಕ್ಕೆ ವೃಕ್ಷವೇ ಸಾಕ್ಷಿಯೆಂದು ಧರ್ಮಾಧಿಕರಣರಿಗೆ ಹೇಳಿದನು. ಆ ಹೊತ್ತಿಗೆ ಸಂಜೆಯಾದ್ದರಿಂದ ಮರುದಿನ ವೃಕ್ಷನ್ಯಾಯ ಕೇಳುವುದೆಂದು ತೀರ್ಮಾನವಾಯಿತು. ಮನೆಗೆ ಮರಳಿದ ದುಷ್ಟಬುದ್ಧಿಯು ತನ್ನ ತಂದೆಯನ್ನು ಮರದ ಪೊಟರೆಯಲ್ಲಿ ಅಡಗಿ ಧರ್ಮಾಧಿಕರಣರು ಆರೋಪದ ಕುರಿತು ಕೇಳಿದಾಗ ಧರ್ಮಬುದ್ಧಿಯೇ ಹೊನ್ನನ್ನು ಕದ್ದವನೆಂದು ಹೇಳುವಂತೆ ಒತ್ತಾಯಿಸಿದನು. ಆಗ ಮಗನಿಗೆ ಬುದ್ಧಿ ಹೇಳುತ್ತ ಪ್ರೇಮಮತಿ (ತಂದೆ)ಯು ಪರಧನ, ವಿಶ್ವಾಸಘಾತಕತನ, ಸ್ವಾಮಿದ್ರೋಹ ಇವೆಲ್ಲವೂ ಎಲ್ಲ ಕಾಲದಲ್ಲಿಯೂ ಹಾನಿಯನ್ನುಂಟು ಮಾಡುವಂತವು. ನಿನ್ನ ದುರಾಸೆಯಿಂದಾದ ಕಳ್ಳತನವು ನಮ್ಮ ಕುಲವನ್ನೇ ನಾಶ ಮಾಡುವುದು ಎಂದು ಹೇಳಿದನು.
ಸ್ವಾರಸ್ಯ: ಅನೀತಿ, ಅನ್ಯಾಯ, ಅಕ್ರಮಗಳಿಂದ ಸಂಪಾದಿಸುವುದು ಎಂದಿಗೂ ಒಳ್ಳೆಯದನ್ನು ಮಾಡಲಾರದು ಎಂದು ಮೇಲಿನ ವಾಕ್ಯವು ಸೂಚಿಸುವುದು.


4. “ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗಂ”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ ‘ವೃಕ್ಷಸಾಕ್ಷಿ’ ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ದುಷ್ಟಬುದ್ಧಿಯ ತಂದೆ (ಪ್ರೇಮಮತಿ) ಯು ಮರದ ಪೊಟರೆಯಲ್ಲಿ ಅಡಗಿದ್ದು ಹೇಳಿದನು.
ಸಂದರ್ಭ: ವ್ಯಾಪಾರದಲ್ಲಿ ದೊರೆತು ಹೂತಿಟ್ಟ ಹಣದ ಕಳುವಿನ ಆರೋಪವನ್ನು ದುಷ್ಟಬುದ್ಧಿಯು ಧರ್ಮಬುದ್ಧಯ ಮೇಲೆ ಹೊರಿಸುತ್ತಾನೆ. ನ್ಯಾಯ ತೀರ್ಮಾನಕ್ಕಾಗಿ ಧರ್ಮಾಧಿಕರಣರ ಬಳಿ ಬಂದು ನಡೆದುದೆಲ್ಲವನ್ನು ವಿವರಿಸಿ ಧರ್ಮಬುದ್ಧಿಯೇ ಹೊನ್ನನ್ನು ತೆಗೆದವನು ಎಂಬುದಕ್ಕೆ ಆಲದ ಮರವೇ ಸಾಕ್ಷಿ ಎನ್ನುತ್ತಾನೆ. ಮರುದಿನ ಅವರಲ್ಲರೂ ಹೊನ್ನನ್ನು ಅಡಗಿಸಿಟ್ಟಿದ್ದ ಆಲದ ಮರದ ಬಳಿ ಬರುತ್ತಾರೆ. ಮಗನ ಒತ್ತಾಯಕ್ಕೆ ಕಟ್ಟುಬುದ್ದ ದುಷ್ಟಬುದ್ಧಿಯ ತಂದೆ ಈ ಮೊದಲೇ ಮರದ ಪೊಟರೆಯಲ್ಲಿ ಅಡಗಿ ಕುಳಿತಿರುತ್ತಾನೆ. ಧರ್ಮಾಧಿಕರಣರು ವೃಕ್ಷದ ಬಳಿ ವಿಚಾರಿಸಿದಾಗ ಅಲ್ಲಿ ಅಡಗಿ ಕುಳಿತಿದ್ದ ಪ್ರೇಮಮತಿ (ದುಷ್ಟಬುದ್ಧಿಯ ತಂದೆ) ಯು ಮತಿಗೆಟ್ಟು ಧರ್ಮದ ದಾರಿಯನ್ನು ಬಿಟ್ಟು ‘ಪ್ರಕೃತಿ ವಿಕೃತಿಯಾದರೆ ಮನುಷ್ಯನ ಆಯುಷ್ಯವು ಕುಂದುವುದು ಎಂದು ನುಡಿವಂತೆ ಧರ್ಮಬುದ್ಧಿ ಎಲ್ಲ ಸಂಪತ್ತನ್ನು ತೆಗೆದುಕೊಂಡನೆಂದು ಹೇಳುತ್ತಾನೆ.ಸ್ವಾರಸ್ಯ: ಪ್ರಕೃತಿ ಮುನಿದರೆ ಯಾರಿಗೂ ಉಳಿಗಾಲವಿಲ್ಲ. ವಟವೃಕ್ಷವು ಪ್ರಕೃತಿಯ ಕೊಡುಗೆ. ಅದಕ್ಕೆ ವಿರುದ್ಧವಾಗಿ ನಡೆಯುವುದು ವಿಕೃತಿ ಎಂಬುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.


5. “ಹುಸಿಯದ ಬೇಹಾರಿಯೇ ಇಲ್ಲ”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ ‘ವೃಕ್ಷಸಾಕ್ಷಿ’ ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಧರ್ಮಬುದ್ಧಿಯು ಧರ್ಮಾಧಿಕರಣರಿಗೆ ಹೇಳಿದನು.
ಸಂದರ್ಭ: ನ್ಯಾಯವನ್ನು ತೀರ್ಮಾನಿಸಲು ವೃಕ್ಷದ ಸಾಕ್ಷಿ ಕೇಳಲು ತೀರ್ಮಾನಿಸಿದಾಗ ದುಷ್ಟಬುದ್ಧಿಯು ತನ್ನ ತಂದೆಯನ್ನು ಮರದ ಪೊಟರೆಯಲ್ಲಿ ಅಡಗಿಸಿಟ್ಟು ಧರ್ಮಾಧಿಕರಣರು ಪ್ರಶ್ನಿಸಿದಾಗ ಧರ್ಮಬುದ್ಧಿಯೇ ಕದ್ದನೆಂದು ತಂದೆಯಿಂದ ಹೇಳಿಸುವನು. ವೃಕ್ಷವು ಸಾಕ್ಷ್ಯವನ್ನು ನುಡಿಯುವುದೇ ಆದಲ್ಲಿ ಸತ್ಯವನ್ನೇಕೆ ನುಡಿಯಲಾರದು ಎಂದು ಅನುಮಾನಗೊಂಡ ಧರ್ಮಬುದ್ಧಿಯು ಮರವನ್ನೊಮ್ಮೆ ಸುತ್ತು ಹಾಕಿದಾಗ ಪೊಟರೆಯ ಬಳಿ ಮನುಷ್ಯರ ಕುರುಹನ್ನು ಅರಿತು ಇದರ ಮರ್ಮವನ್ನು ತಿಳಿಯಬೇಕೆಂದು ಮೇಲಿನಂತೆ ಹೇಳುವನು. ವ್ಯಾಪಾರಿಬುದ್ಧಿಯಿಂದ ಹೀಗೆ ಮಾಡಿದ್ದಾಗಿಯೂ, ಪೊಟರೆಯಲ್ಲಿ ಅಡಗಿಸಿಟ್ಟ ಸಂಪತ್ತನ್ನು ಪಡೆಯಲು ಬಂದಾಗ ಅದನ್ನು ಹಾವು ಬಳಸಿ ಮಲಗಿತ್ತೆಂದೂ, ಈಗ ಹೊಗೆ ಹಾಕಿಸಿ ಹಾವನ್ನು ಓಡಿಸುವೆನು ಮತ್ತು ಅಡಗಿಸಿಟ್ಟ ಹೊನ್ನನ್ನು ಮರಳಿ ಪಡೆಯಬಹುದು ಎಂದು ಪೊಟರೆಗೆ ಬೆಂಕಿ ಹಾಕಿಸಿ ಅಡಗಿಕುಳಿತ ದುಷ್ಟಬುದ್ಧಿಯ ತಂದೆ ಹೊರಗೆ ಬರುವಂತೆ ಮಾಡಿ ನಿಜ ಸಂಗತಿಯನ್ನು ಬಯಲು ಮಾಡುವನು.
ಸ್ವಾರಸ್ಯ: ವ್ಯಾಪಾರ ವೃತ್ತಿಯಲ್ಲಿ ಕೆಲವೊಮ್ಮೆ ಲಾಭಕ್ಕಾಗಿ ಸುಳ್ಳನ್ನು ಹೇಳುವುದು ಅನಿವಾರ್ಯ ಎಂದು ಧರ್ಮಬುದ್ಧಿಯು ಹೇಳುವ ಸಂದರ್ಭ ಇಲ್ಲಿ ವ್ಯಕ್ತವಾಗಿದೆ.


ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.
1. ವಡ್ಡಾರಾಧನೆ - ಶಿವಕೋಟ್ಯಾಚಾರ್ಯ : : ಪಂಚತಂತ್ರಂ ----
ಉತ್ತರ: ದುರ್ಗಸಿಂಹ
2. ಕಬ್ಬ – ಕಾವ್ಯ : : ಬೇಹಾರಿ ____
ಉತ್ತರ: ವ್ಯಾಪಾರಿ
3. ಅನೃತ - ಸುಳ್ಳು : : ಕೃತ್ರಿಮ ____
ಉತ್ತರ: ಮೋಸ
4. ಬಂದಲ್ಲದೆ - ಲೋಪ : : ಧೃತಿಗೆಟ್ಟು ____
ಉತ್ತರ: ಆದೇಶ
5. ದೈವ ಭಕ್ತಿ – ತತ್ಪುರುಷ : : ಅಬ್ಜೋದರ ____
ಉತ್ತರ: ಬಹುವ್ರೀಹಿ ಸಮಾಸ


ಪದಗಳನ್ನು ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ.
ಪೋಗಲ್ ವೇಳ್ಕುಂ, ತಕ್ಕನಿತು, ಪೂಳ್ದೆಡೆ.
ಪೋಗಲ್ + ಬೇಳ್ಕುಂ = ಪೋಗಲ್ ವೇಳ್ಕುಂ = ಆದೇಶ ಸಂಧಿ
ತಕ್ಕ + ಅನಿತು = ತಕ್ಕನಿತು = ಲೋಪ ಸಂಧಿ
ಪೂಳ್ದ + ಎಡೆ = ಪೂಳ್ದೆಡೆ = ಲೋಪ ಸಂಧಿ


ನೀಡಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ.
ಅತಿಕುಟಿಲ, ಕೈಕೊಳ್ವುದು, ಕಟ್ಟೇಕಾಂತ, ಸ್ವಾಮಿದ್ರೋಹ, ಪರಧನ, ಸಾಕ್ಷಿಮಾಡಿ, ಬಲವಂದು,
ಅತಿಯಾದ + ಕುಟಿಲ = ಕರ್ಮಧಾರಯ ಸಮಾಸ.
ಕೈಯಂ + ಕೊಳ್ವುದು = ಕ್ರಿಯಾ ಸಮಾಸ.
ಕಡಿದು + ಏಕಾಂತ = ಕರ್ಮಧಾರಯ ಸಮಾಸ.
ಸ್ವಾಮಿಗೆ + ದ್ರೋಹ = ತತ್ಪುರುಷ ಸಮಾಸ.
ಪರರ + ಧನ = ತತ್ಪುರುಷ ಸಮಾಸ.
ಧನದ + ಹರಣ = ತತ್ಪುರುಷ ಸಮಾಸ.
ಸಾಕ್ಷಿಯನ್ನು + ಮಾಡಿ = ಕ್ರಿಯಾ ಸಮಾಸ.
ಬಲದಿಂದ + ಬಂದು = ಕ್ರಿಯಾ ಸಮಾಸ. 

*****

10th First Language Kannada Chapter-6 Vyaghrageete| 10ನೇ ತರಗತಿ ಪ್ರಥಮ ಭಾಷೆ ಕನ್ನಡ ಗಧ್ಯ-6 ವ್ಯಾಘ್ರಗೀತೆ| ಎ.ಎನ್.ಮೂರ್ತಿರಾವ್|

10 ನೇ ತರಗತಿ ಪ್ರಥಮ ಭಾಷೆ ಕನ್ನಡ ಗಧ್ಯ-6

| ವ್ಯಾಘ್ರಗೀತೆ | ಎ.ಎನ್.ಮೂರ್ತಿರಾವ್|

 6. ವ್ಯಾಘ್ರಗೀತೆ

I ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಭಗವದ್ಗೀತೆಯನ್ನು ರಚಿಸಿದವರು ಯಾರು?
ಉ: ಭಗವದ್ಗೀತೆಯನ್ನು ರಚಿಸಿದವರು ಮಹರ್ಷಿ ವೇದವ್ಯಾಸರು.
 
2. ಹುಲಿಗೆ ಪರಮಾನಂದವಾಗಲು ಕಾರಣವೇನು?
ಉ: ಶಾನುಭೋಗರ ದುಂಡು ದುಂಡಾದ ಶರೀರವನ್ನು ಕಂಡು ಹುಲಿಗೆ ಪರಮಾನಂದವಾಯಿತು.
 
3. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?
ಉ: ಹಿಂದಿನಿಂದ ಹುಲಿ ಮೈಮೇಲೆ ಎರಗುವುದಿಲ್ಲ ಎಂದರಿತಿದ್ದ ಶಾನುಭೋಗರು ಅದಕ್ಕೆ ಬೆನ್ನು ತಿರುಗಿಸಿ ನಡೆಯುವುದು ಹುಲಿಯು ಅವರ ಮುಂಬಾಗಕ್ಕೆ ಬಂದು ಮೇಲೆರಗಬೇಕೆಂದು ಮಾಡುವ ಪ್ರಯತ್ನದ ಪುನರಾವರ್ತನೆ ಐದಾರು ಬಾರಿ ನಡೆದು ದಣಿವಾದ ಶಾನುಭೋಗರಿಗೆ ತಲೆಸುತ್ತಲಾರಂಭಿಸಿತು.
 
4. ಶಾನುಭೋಗರ ಬ್ರಹ್ಮಾಸ್ತ್ರ ಯಾವುದು?
ಉ: ಶಾನುಭೋಗರ ಬ್ರಹ್ಮಾಸ್ತ್ರ ಅವರ ಬಳಿಯಲ್ಲಿದ್ದ ಖಿರ್ದಿ ಪುಸ್ತಕ.
 
5. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?
ಉ: ವಿಧಿ ತನ್ನ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಹಸಿದು ಮಲಗಿದ್ದ ಹುಲಿಯು ಯೋಚಿಸಿತು.
 
ಮೂರು - ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು?
ಉ: ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಚಿಕ್ಕನಾಯಕನ ಹಳ್ಳಿಯಲ್ಲಿರುವ ಖಜಾನೆಗೆ ಕಟ್ಟಿ ಅಲ್ಲಿದ್ದ ಸ್ನೇಹಿತರನ್ನು ನೋಡಿಕೊಂಡು ಶಾನುಭೋಗರು ವಾಪಸ್ಸು ಹೊರಡಬೇಕೆನ್ನುವಷ್ಟರಲ್ಲಿ ಸಂಜೆ ಆರು ಗಂಟೆಯಾಗಿತ್ತು.
ಅವರು ಮರಳಿ ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕಿತ್ತು. ಕಾಡು ದಾರಿ, ಆದರೂ ಬೆಳದಿಂಗಳ ದಿನ; ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದು ಶಾನುಭೋಗರು ಯೋಚಿಸಿದರು.
 
2. ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು?
ಉ: ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವೆಂದು ಹುಲಿಯ ಅಭಿಪ್ರಾಯ.
 
3. ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದ ಘಟನೆಗಳನ್ನು ವಿವರಿಸಿ?
ಉ: ಚಿಕ್ಕನಾಯಕನಹಳ್ಳಿಗೆ ತೆಂಗಿನ ಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆದುಕೊಂಡು ತಮ್ಮ ಹಳ್ಳಿಗೆ ಹಿಂದಿರುಗುತ್ತಿದ್ದರು. ಶಾನುಭೋಗರು ಬಿದ್ದ ಸ್ಥಳಕ್ಕೆ ಸ್ವಲ್ಪ ದೂರ ಇದ್ದಾಗ ಎತ್ತುಗಳು ಮುಂದೆ ಹೋಗದೆ ಅಲ್ಲೆ ನಿಂತುಬಿಟ್ಟವು. ಅಷ್ಟರಲ್ಲಿ ಹುಲಿಯ ಘರ್ಜನೆ ಕೇಳಿಸಿತು. ಎತ್ತುಗಳ ಘಂಟೆಯ ಧ್ವನಿ ಕೇಳಿ ಹುಲಿ ಕೆಲವು ನಿಮಿಷ ತಡೆಯಿತು. ಆದರೆ ರೈತರ ಮಾತು ಕೇಳಿ ಬಂದ ಮೇಲೆ ನಿರಾಶೆಯಿಂದಲೂ, ಕೋಪದಿಂದಲೂ ಘರ್ಜಿಸಿ ಪಲಾಯನ ಮಾಡಿತು. ಘರ್ಜನೆ ನಿಂತು ಸ್ವಲ್ಪ ಹೊತ್ತು ಕಳೆದ ಮೇಲೆ ರೈತರು ತಮ್ಮ ಬಳಿಯಿದ್ದ ಕೋವಿಯಿಂದ ಗುಂಡು ಹಾರಿಸಿ ಕೈಲಾದಷ್ಟು ಗಲಭೆ ಮಾಡುತ್ತ ತೆಂಗಿನ ಗರಿಯ ಪಂಜು ಹೊತ್ತಿಸಿಕೊಂಡು ಮುಂದೆ ಬಂದು ನೋಡಿದಾಗ ಶಾನುಭೋಗರು ಮೂರ್ಛೆಯಲ್ಲಿ ಬಿದ್ದಿದ್ದರು. ರೈತರು ಅವರ ಮುಖದ ಮೇಲೆ ನೀರೆರೆಚಿ ಎಚ್ಚರಿಸಿದರು.
 
ಎಂಟು - ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ?
ಉ: ಹುಲಿ ಪ್ರಾಣಿಗಳನ್ನು ಕೊಂದು ತಿನ್ನುವುದೇನೋ ಉಂಟು. ಆದರೆ ನಿಷ್ಪಕ್ಷಪಾತವಾದ ದೃಷ್ಟಿಯಲ್ಲಿ ನೋಡಿದರೆ ಅದರಲ್ಲಿ ತಪ್ಪೇನಿದೆ? ಶಾಕಾಹಾರವನ್ನು ತಿಂದು ಬದುಕಬೇಕಾದ ಮಾನವನೇ ಮಾಂಸವನ್ನು ತಿನ್ನಬಹುದಾದರೆ ಹುಲಿಯಲ್ಲಿ ಅದು ದೊಡ್ಡ ಅಪರಾದವಲ್ಲ. ಆದರೆ ಕೊಲ್ಲುವಾಗ ಧರ್ಮಾಧರ್ಮಗಳನ್ನು ಅನುಸರಿಸುತ್ತವೆಯೋ ಇಲ್ಲವೋ? ಶ್ರೀರಾಮನಂತ ದೊರೆಗಳು ಆಳಿದ, ಭಗವದ್ಗೀತೆಯಂತ ಗ್ರಂಥ ಉದ್ಭವಿಸಿದ ಭರತ ಭೂಮಿಯಲ್ಲಿ ಹುಲಿಗಳು ಅಧರ್ಮಕ್ಕೆಡೆ ಮಾಡಿಕೊಡಲಾರವು. ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ ಎಂದಿರಬಹುದು. ನಿಶ್ಯಬ್ದವಾಗಿ ಪ್ರಾಣಿಯ ಹಿಂದಕ್ಕೆ ನಡೆದು, ಅನಂತರ ಅವರ ಮುಂಭಾಗಕ್ಕೆ ನೆಗೆದು ಕೂಡಲೇ ತಿರುಗಿ ಪ್ರಾಣಿಯ ಮೇಲೆ ಬೀಳುತ್ತವೆ. ಖಂಡವಿದಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದಕೋ ಎಂದು ಹಸುವು ಹೇಳಿದರೂ ಬಾಯಿ ಚಪ್ಪರಿಸಿಕೊಂಡು ಹಸುವನ್ನು ತಿನ್ನದೆ ಸತ್ಯವ್ರತೆಯಾದ ಪುಣ್ಯಕೋಟಿಯನ್ನು ತಿನ್ನಲೊಲ್ಲದ ಹುಲಿರಾಯನ ಆ ಪವಿತ್ರ ಕಥೆ ಇಂದಿನ ಹುಲಿಗಳಿಗೆ ಆದರ್ಶ. ಆದ್ದರಿಂದ ಅವು ಅಧರ್ಮಕ್ಕೆ ಎಂದೂ ಕೈ ಹಾಕುವುದಿಲ್ಲ ಎಂದು ಮೂರ್ತಿರಾಯರು ಹುಲಿಯ ಬೇಟೆಯಾಡುವ ಬಗೆಯನ್ನು ವಿವರಿಸಿದ್ದಾರೆ.
 
2. ಶಾನುಭೋಗರನ್ನು ರಕ್ಷಿಸಿದುದು ಖಿರ್ದಿಪುಸ್ತಕವೇ? ಹುಲಿಯ ಧರ್ಮವೇ? ಸಮರ್ಥನೆಯೊಂದಿಗೆ ವಿವರಿಸಿ?
ಉ: ಶಾನುಭೋಗರಿಗೆ ಖಿರ್ದಿ ಪುಸ್ತಕ ಕೇವಲ ಜೀವನಾಧಾರವಲ್ಲ. ಅದು ಅವರ ರಾಜಭಕ್ತಿಯ ಲಾಂಛನ. ಖಜಾನೆಗೆ ರೈತರ ಕಂದಾಯದ ಹಣವನ್ನು ಕಟ್ಟಿ ಶಾನುಭೋಗರು ತಮ್ಮ ಹಳ್ಳಿಗೆ ಮರಳುತ್ತಿದ್ದ ಸಮಯದಲ್ಲಿ ಕಾಡಿನಲ್ಲಿ ಅವರು ಬರುತ್ತಿದ್ದಾಗ ಹುಲಿಯೊಂದು ಅವರನ್ನು ಬೇಟೆಯಾಡಲು ಹೊಂಚು ಹಾಕಿತು.
ಹುಲಿಗಳು ಹಿಂದಿನಿಂದ ಮೇಲೆ ಬೀಳುವುದಿಲ್ಲವೆಂದು ಅರಿತ್ತಿದ್ದ ಶಾನುಭೋಗರು ಉಪಾಯವಾಗಿ ಹುಲಿಗೆ ಬೆನ್ನು ತಿರುಗಿಸಿ ನಡೆದು ದಣಿದರು. ಆ ವಿಪತ್ತಿನ ಸನ್ನಿವೇಶದಲ್ಲಿ ಅವರಿಗೆ ನೆನಪಾಗಿದ್ದು ಅವರ ಬಳಿಯಿದ್ದ ಖಿರ್ದಿ ಪುಸ್ತಕ. ಅದು ಸಧ್ಯಕ್ಕೆ ಅವರ ಬಳಿಯಿದ್ದ ಬ್ರಹ್ಮಾಸ್ತ್ರ. ಅದರಿಂದ ಹುಲಿಯ ಮುಖಕ್ಕೆ ಬಡಿದಾಗ ಏನಾಯಿತೆಂದು ಅರಿಯಲು ಅದಕ್ಕೆ ಅರೆ ನಿಮಿಷ ಹಿಡಿಯಿತು. ಅದನ್ನೇ ಉಪಯೋಗಿಸಿಕೊಂಡು ಓಡಿದ ಅವರು ಕಲ್ಲು ಎಡವಿ ಬಿದ್ದು ಮೂರ್ಛೆ ಹೋದಾಗ ಅಷ್ಟರಲ್ಲಿ ಅಲ್ಲಿಗೆ ಬರುತ್ತಿದ್ದ ರೈತರಿಂದಾಗಿ ಹುಲಿಯಿಂದ ಬಚಾವಾದರು. ಅವರಿಗೆ ಆ ಅರೆ ನಿಮಿಷದ ಅವಕಾಶವನ್ನು ಒದಗಿಸಿ ಕೊಟ್ಟು ಪ್ರಾಣವನ್ನು ಕಾಪಾಡಿದ ಪುಸ್ತಕದ ಮೇಲೆ ಅವರಿಗೆ ಕೃತಜ್ಞತಾ ಭಾವ. ಖಿರ್ದಿಪುಸ್ತಕವೇ ತಮ್ಮ ಜೀವ ಉಳಿಸಿತು ಎಂಬುದು ಅವರ ನಂಬಿಕೆ. ಆದರೆ ನಿಜವಾಗಿ ನೋಡಿದರೆ ಶಾನುಭೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ. ಹುಲಿಯ ಧರ್ಮಶ್ರದ್ಧೆಯಿಂದ. ಭರತ ಖಂಡದ ಹುಲಿಗಳ ಧರ್ಮಶ್ರದ್ಧೆ, ಹಿಂದಿನಿಂದ ದಾಳಿ ಮಾಡಿ ಕೊಲ್ಲದಿರುವ ಅವರ ಉದಾರ ಗುಣವೇ ಶಾನುಭೋಗರು ಹುಲಿಯಿಂದ ಪಾರಾಗಲು ಕಾರಣವಾಗಿದೆ.
 
ಸಂದರ್ಭದೊಂದಿಗೆ ಸ್ವಾರಸ್ಯವನ್ನು ಬರೆಯಿರಿ.
1. “ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ.”
ಉ: ಈ ಮೇಲಿನ ವಾಕ್ಯವನ್ನು ಎ.ಎನ್.ಮೂರ್ತಿರಾಯರು ಬರೆದ ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಸಂಕಲನದಿಂದ ಆರಿಸಲಾದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಶಾನುಭೋಗರನ್ನು ಬೇಟೆಯಾಡಬೇಕೆಂದು ಹುಲಿ ಅವರನ್ನು ಹಿಂಬಾಲಿಸಿತು. ಆದರೆ ಹುಲಿಯ ಧರ್ಮಶ್ರದ್ಧೆಯ ಪ್ರಕಾರ ಅದು ಹಿಂದಿನಿಂದ ದಾಳಿ ಮಾಡುವ ಹಾಗಿರಲಿಲ್ಲ. ಇದನ್ನು ಅರಿತ್ತಿದ್ದ ಶಾನುಭೋಗರು ಆದಷ್ಟು ಅದಕ್ಕೆ ಬೆನ್ನು ಹಾಕಿ ನಡೆಯುತ್ತ ಅದರ ದಾಳಿಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಮೇಲೆ ಬಿದ್ದು ಬಿಡಲೆ ಎಂದು ಯೋಚಿಸಿದ ಹುಲಿಗೆ ತಾನು ಸದ್ವಂಶದಲ್ಲಿ ಜನಿಸಿದವನು ಎಂಬುದು ನೆನಪಾಯಿತು. “ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ.” ಎಂದು ಎದುರಿಗೇ ಬಂದು ಹಸು ಆಹ್ವಾನಿಸಿದರೂ ಸತ್ಯವ್ರತೆಯಾದ ಪುಣ್ಯಕೋಟಿಯನ್ನು ತಿನ್ನದೆ ತನ್ನ ಪ್ರಾಣವನ್ನೆ ತೊರೆದ ತನ್ನ ಅಜ್ಜನನ್ನು ಹುಲಿಯು ನೆನಪಿಸಿಕೊಂಡಿತು ಎಂದು ಲೇಖಕರು ವಿವರಿಸುವ ಸಂದರ್ಭದಲ್ಲಿ ಮೇಲಿನ ಮಾತು ಬಂದಿದೆ
ಸ್ವಾರಸ್ಯ: ಹುಲಿಯು ತನ್ನನ್ನು ತಿನ್ನುವುದೆಂಬ ಅರಿವಿದ್ದರೂ ಕೊಟ್ಟ ಮಾತಿನಂತೆ ಹುಲಿಗೆ ಆಹಾರವಾಗಲು ಬಂದ ಪುಣ್ಯಕೋಟಿ ಹಸುವಿನ ಪ್ರಾಮಾಣಿಕತೆ ಸತ್ಯ ಇಲ್ಲಿ  ವ್ಯಕ್ತವಾಗಿದೆ.
 
2. “ಸ್ವಧರ್ಮೇ ನಿಧನಂ ಶ್ರೇಯ:”
ಉ:  ಈ ಮೇಲಿನ ವಾಕ್ಯವನ್ನು ಎ.ಎನ್.ಮೂರ್ತಿರಾಯರು ಬರೆದ ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಸಂಕಲನದಿಂದ ಆರಿಸಲಾದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಶಾನುಭೋಗರ ಮೇಲೆ ಹಿಂದಿನಿಂದ ಮೇಲೆ ಬಿದ್ದಾದರೂ ಅವರನ್ನು ಕೊಲ್ಲಬೇಕೆಂದು ಹುಲಿಯು ಒಂದು ಕ್ಷಣ ಆಲೋಚಿಸಿತು. ಆ ಸಂದರ್ಭದಲ್ಲಿ ಅದಕ್ಕೆ ಪುಣ್ಯಕೋಟಿಯ ಸತ್ಯತೆಯನ್ನು ಮೆಚ್ಚಿ ತನ್ನ ಪ್ರಾಣವನ್ನು ಬಿಟ್ಟ ತನ್ನ ವಂಶದ ಹಿರಿಯ ಹುಲಿಯು ನೆನಪಾಯಿತು. ಅಂತಹ ಹುಲಿಯ ಮೊಮ್ಮಗನಾಗಿ ಹುಟ್ಟಿ ತಾನು ಅಧರ್ಮಕ್ಕೆ ಕೈ ಹಾಕುವುದೆ, ಎಂದು ಆಲೋಚಿಸಿದ ಹುಲಿಗೆ ಭಗವದ್ಗೀತೆಯಲ್ಲಿ ಬಂದಿರುವ ಮೇಲಿನ ವಾಕ್ಯ ನೆನಪಾಯಿತು ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ಪಾಲಿಸಿದರೆ ಯಶಸ್ಸು ಸಿಗುವುದು. ಕುಲಧರ್ಮಕ್ಕೆ ಅಪಚಾರವೆಸಗಬಾರದು ಎಂಬ ತತ್ವ ಇಲ್ಲಿ ವ್ಯಕ್ತವಾಗಿದೆ.
 
3. “ದೇವರೆ, ಮರ ಹತ್ತುವಷ್ಟು ಅವಕಾಶ ಕರುಣಿಸು.”
ಉ: ಈ ಮೇಲಿನ ವಾಕ್ಯವನ್ನು ಎ.ಎನ್.ಮೂರ್ತಿರಾಯರು ಬರೆದ ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಸಂಕಲನದಿಂದ ಆರಿಸಲಾದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಶಾನುಭೋಗರು ಹುಲಿಗೆ ಬೆನ್ನು ಹಾಕಿ ಅದರ ಆಕ್ರಮಣವನ್ನು ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿ ನಡೆದು ನಡೆದು ಸುಸ್ತಾದರು. ಕೊನೆಗೆ ಅವರಿಗೆ ನೆನಪಾಗಿದ್ದು ಅವರ ಬಳಿಯಲ್ಲಿದ್ದ ಖಿರ್ದಿ ಪುಸ್ತಕ. ಅದನ್ನು ಪ್ರಯೋಗಿಸಿ ಅದರಿಂದ ಹುಲಿಯ ಗಮನ ಸ್ವಲ್ಪವಾದರೂ ಚಲಿಸಿದರೆ, ಅಷ್ಟರಲ್ಲಿ ಸಮೀಪದ ಮರಕ್ಕೆ ಹಾರಿ ಮೇಲಕ್ಕೇರಬಹುದೆಂದು ಯೋಚಿಸಿ ಪುಸ್ತಕವನ್ನು ಹುಲಿಯ ಮುಖಕ್ಕೆ ಬೀಸಿದರು. ಬಳಲಿಕೆಯಿಂದ ಜಡವಾಗಿದ್ದ ಮನಸ್ಥಿತಿಯಲ್ಲಿದ್ದ ಹುಲಿಗೆ ಏನಾಯಿತೆಂದು ಅರಿಯಲು ಅರೆನಿಮಿಷ ಬೇಕಾಯಿತು. ಆಗ ಶಾನುಭೋಗರು ಮೇಲಿನಂತೆ ಯೋಚಿಸುತ್ತಾ ಒಂದೇ ಉಸಿರಿನಲ್ಲಿ ಮರದ ಕಡೆ ಧಾವಿಸಿದರು.
ಸ್ವಾರಸ್ಯ: ಜೀವ ಉಳಿಸಿಕೊಳ್ಳಲು ಒಂದು ಅವಕಾಶ ಸಿಕ್ಕರೆ ಸಾಕು ಬದುಕಿದೆನಾದರೆ ಮುಂದೇನಾದರೂ ಸಾಧಿಸಬಹುದು ಎಂಬುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.
 
4. “ನಾನು ಮುಖ ಮೇಲಾಗಿ ಬಿದ್ದಿದ್ದೇನೆ.”
ಉ: ಈ ಮೇಲಿನ ವಾಕ್ಯವನ್ನು ಎ.ಎನ್.ಮೂರ್ತಿರಾಯರು ಬರೆದ ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಸಂಕಲನದಿಂದ ಆರಿಸಲಾದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಹುಲಿಯಿಂದ ತಪ್ಪಿಸಿಕೊಳ್ಳಬೇಕೆಂದು ಶಾನುಭೋಗರು ತಮ್ಮ ಬಳಿಯಿದ್ದ ಖಿರ್ದಿ ಪುಸ್ತಕವನ್ನು ಅದರ ಮುಖಕ್ಕೆ ಬೀಸಿದರು. ಅದು ಗಾಬರಿಯಾಗಿದ್ದ ಸಂದರ್ಭ ಬಳಸಿ ಓಡಿ ಹೋಗುತ್ತಿದ್ದಾಗ ಕಲ್ಲು ಎಡವಿ ಬಿದ್ದು ಮೂರ್ಛೆಹೋದರು. ಅಷ್ಟರಲ್ಲಿ ಅಲ್ಲಿಗೆ ರೈತರು ಬಂದಿದ್ದರಿಂದ ಹುಲಿ ಅಲ್ಲಿಂದ ಪಲಾಯನ ಮಾಡಿತು. ಆದರೂ ಶಾನುಭೋಗರ ಮನಸ್ಸಿನಲ್ಲಿ ಸಂಶಯವೊಂದು ಕಾಡುತ್ತಿತ್ತು. ನಿಸ್ಸಹಾಯಕರಾಗಿ ಪ್ರಜ್ಞೆಯಿಲ್ಲದೆ ಬಿದ್ದಾಗಲೂ ಹುಲಿ ಇವರನ್ನು ಏಕೆ ಎಳದೊಯ್ಯಲಿಲ್ಲ ಎಂದು ಯೋಚಿಸಿದ ಅವರು ಗಾಡಿಯವರನ್ನು ಮೇಲಿನಂತೆ ಕೇಳಿದರು. ಆದರೆ ಶಾನುಭೋಗರು ಬೆನ್ನು ಮೇಲಾಗಿ ಬಿದ್ದುದರಿಂದ ಹುಲಿಯು ತನ್ನ ಕುಲಧರ್ಮ ಪಾಲಿಸಿದ್ದರಿಂದ ಶಾನುಭೋಗರು ಹುಲಿಯಿಂದ ಪಾರಾಗಿದ್ದರು.
 
5. “ಹುಲಿ ಈಗ ಎಷ್ಟು ಹಸಿದಿರಬೇಕು”
ಉ: ಈ ಮೇಲಿನ ವಾಕ್ಯವನ್ನು ಎ.ಎನ್.ಮೂರ್ತಿರಾಯರು ಬರೆದ ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಸಂಕಲನದಿಂದ ಆರಿಸಲಾದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಬೇಟೆಯಾಡುವ ಉದ್ದೇಶದಿಂದ ತಮ್ಮನ್ನು ಹಿಂಬಾಲಿಸಿದ ಹುಲಿಯಿಂದ ತಪ್ಪಿಸಿಕೊಂಡ ಶಾನುಭೋಗರು “ಕುಡಿದ ನೀರು ಅಲುಗದ ಹಾಗೆ” ಅಲ್ಲದಿದ್ದರೂ ಜೀವ ಸಹಿತ ಮನೆ ಸೇರಿಕೊಂಡರು. ರಸದೂಟವನ್ನು ಮಾಡಿದರು. ಆ ಸಂದರ್ಭದಲ್ಲಿ ಅವರು ಹುಲಿಯನ್ನು ಮೇಲಿನಂತೆ ನೆನಪಿಸಿಕೊಂಡರು. ಸ್ವಾರಸ್ಯ: ಶಾನುಭೋಗರನ್ನು ತಿನ್ನಲು ಹುಲಿ ನಡೆಸಿದ ಹರಸಾಹಸ ವ್ಯರ್ಥವಾಗಿ ಕೊನೆಗೂ ಶಾನುಭೋಗರು ಮನೆ ಸೇರಿಕೊಂಡರು. ಅವರು ಊಟ ಮಾಡುವಾಗ ಸಹಜವಾಗಿ ತನ್ನಂತೆಯೇ ಹಸಿದ ಇನ್ನೊಂದು ಜೀವ ನೆನಪಾದುದು ಅವರೊಳಗೆ ಇದ್ದ ಮಾನವೀಯತೆಯ ಜೊತೆ ತಾನು ಹುಲಿಯಿಂದ ಬಚಾವಾಗಿ ಬಂದುದರ ಬಗ್ಗೆ ಅವರಿಗಿದ್ದ ಅಭಿಮಾನವನ್ನು ಸೂಚಿಸುವುದು
 
ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.
1. ಮಂತ್ರಿತ್ವ ಹೋಗಿ ಕೇವಲ ____ಮಾತ್ರ ಉಳಿದಿತ್ತು.
ಉತ್ತರ: ಶಾನುಭೋಗಿಕೆ
 
2. ಖಿರ್ದಿ ಪುಸ್ತಕ ____ಬ್ರಹ್ಮಾಸ್ತ್ರ.
ಉತ್ತರ: ಶಾನುಭೋಗರ
 
3. ನೆಲದಿಂದ ಮೇಲೆದ್ದುಕೊಂಡಿದ್ದ ____ಎಡವಿ ಶಾನುಭೋಗರು ಬಿದ್ದರು.
ಉತ್ತರ: ಕಲ್ಲನ್ನು
 
4. ರೈತರು ತಿಂಗಳ ಬೆಳಕಿನಲ್ಲಿ ____ಹೊಡೆಯುತ್ತಿದ್ದರು.
ಉತ್ತರ: ಗಾಡಿ
 
5. ಶಾನುಭೋಗರು ಉಳಿದಿದ್ದು ____ ಪುಸ್ತಕದಿಂದಲ್ಲ.
ಉತ್ತರ: ಖಿರ್ದಿ
 
ಭಾಷಾ ಚಟುವಟಿಕೆ
1. ತದ್ಧಿತಾಂತಗಳೆಂದರೇನು?
ಉ: ನಾಮಪದಗಳ ಮೇಲೆ ಬೇರೆ ಬೇರೆ ಅರ್ಥಗಳಲ್ಲಿ ಗಾರ, ಕಾರ, ಇಗ, ಅಡಿಗ, ವಂತ, ಇಕ ಮುಂತಾದ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತಗಳಾಗುತ್ತವೆ.
 
2. ತದ್ಧಿತಾಂತ ಭಾವನಾಮಗಳೆಂದರೇನು? ಉದಾ. ಕೊಡಿ.
ಉ: ಷಷ್ಠೀ ವಿಭಕ್ತ್ಯಂತ ನಾಮಪದಗಳ ಮುಂದೆ ಭಾವಾರ್ಥದಲ್ಲಿ –ತನ, ಇಕೆ, ಪು, ಮೆ ಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತ ಭಾವನಾಮಗಳೆನಿಸುವುವು.
ಉದಾ:
ಜಾಣನ ಭಾವ – ಜಾಣತನ
ಚೆಲುವಿನ ಭಾವ – ಚೆಲುವಿಕೆ
ಕರಿದರ ಭಾವ – ಕಪ್ಪು









10th First Language Kannada Chapter-5 Edege Bidda Akshara| 10ನೇ ತರಗತಿ ಪ್ರಥಮ ಭಾಷೆ ಕನ್ನಡ ಗಧ್ಯ-5 ಎದೆಗೆ ಬಿದ್ದ ಅಕ್ಷರ| ದೇವನೂರು ಮಹಾದೇವ|

10 ನೇ ತರಗತಿ ಪ್ರಥಮ ಭಾಷೆ ಕನ್ನಡ ಗಧ್ಯ-5

| ಎದೆಗೆ ಬಿದ್ದ ಅಕ್ಷರ | ದೇವನೂರು ಮಹಾದೇವ

 5. ಎದೆಗೆ ಬಿದ್ದ ಅಕ್ಷರ

I ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಇಂದಲ್ಲ ನಾಳೆ ಫಲ ಕೊಡುವ ಅಂಶಗಳು ಯಾವುವು?
ಉ: ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ಇವು ಇಂದಲ್ಲ ನಾಳೆ ಫಲ ಕೊಡುವ ಅಂಶಗಳು.

2. ಮನೆ ಮಂಚಮ್ಮ ಯಾರು?
ಉ: ಮನೆ ಮಂಚಮ್ಮ ಊರಿನ ಗ್ರಾಮ ದೇವತೆ.

3. ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು?
ಉ: ಮನೆ ಮಂಚಮ್ಮನ ಕತೆ ಹೇಳಿದ ಕವಿ ಸಿದ್ದಲಿಂಗಯ್ಯ.

4. ‘ಶಿವಾನುಭವ ಶಬ್ದಕೋಶ’ ಪುಸ್ತಕ ಬರೆದವರು ಯಾರು?
ಉ: ‘ಶಿವಾನುಭವ ಶಬ್ದಕೋಶ’ ಪುಸ್ತಕ ಬರೆದವರು ಫ.ಗು.ಹಳಕಟ್ಟಿಯವರು

5. ವಚನಕಾರರಿಗೆ ಯಾವುದು ದೇವರಾಗಿತ್ತು?
ಉ: ವಚನಕಾರರಿಗೆ ಅವರವರ ಇಷ್ಟದೈವ ಅಂದರೆ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.

6. ಅಶೋಕ ಪೈ ಅವರ ವೃತ್ತಿ ಯಾವುದು?
ಉ: ಅಶೋಕ ಪೈ ಅವರು ವೃತ್ತಿಯಿಂದ ಒಬ್ಬ ಮನೋವೈದ್ಯರು.

7. ದೇವನೂರರ ‘ನನ್ನ ದೇವರು’ ಯಾರೆಂಬುದನ್ನು ಸ್ಪಷ್ಟೀಕರಿಸಿ?

ಉ: ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ದೇವನೂರರಿಗೆ ಅವನೇ ಅವರ ದೇವರು.

ಮೂರುನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು?
ಉ: ಅಶೋಕ ಪೈಯವರು ಹೇಳಿದ ಮನಸ್ಸಿನ ಬಗ್ಗೆ ನಡೆದಿರುವ ಸಂಶೋಧನಾ ಸತ್ಯವೆಂದರೆ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿರುವವರು ಅನುಭವಿಸುತ್ತಿರುವ ದುಃಖ ಅಥವಾ ಸಂತೋಷದ ಭಾವವು ಪಕ್ಕದ ಕೊಠಡಿಯಲ್ಲಿ ಟೆಲಿವಿಷನ್ ನೋಡದೆ ಕುಳಿತರುವವರ ಮೇಲೂ ಸ್ವಲ್ಪ ಮಟ್ಟಿಗೆ ಅದೇ ರೀತಿಯಾದ ಪ್ರಭಾವವನ್ನು ಬೀರುತ್ತದೆ. ಅಂದರೆ ಈ ಉದಾಹರಣೆ ವಿವರಿಸುವ ನಿಜವೆಂದರೆ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ. ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟುಮಾಡುತ್ತಿರುತ್ತದೇನೋ. ಈ ಅನುಕಂಪನ ಇಡೀ ಜೀವಸಂಕುಲವನ್ನೇ ಒಂದು ಎಂದು ಹೇಳುತ್ತದೆ.

2. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು ವಿವರಿಸಿ.
ಉ: ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳುವಳಿಕೆ, ಜ್ಞಾನ ಮಾತ್ರ ಅಲ್ಲ; ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು. ಅದು ಕೇಳಿ ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳುವಳಿಕೆ, ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು.

ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1. ಕವಿ ಸಿದ್ದಲಿಂಗಯ್ಯ ಹೇಳಿದ ಕತೆಯನ್ನು ಬರೆಯಿರಿ?
ಉ: ಕವಿ ಸಿದ್ದಲಿಂಗಯ್ಯ ಹೇಳಿದ ಕತೆಯಲ್ಲಿ ಒಂದು ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿ ಕಟ್ಟಲು ಆರಂಭಿಸುತ್ತಾರೆ. ಚಾವಣಿ ಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ದೇವತೆ ಮಂಚಮ್ಮ ಆವಾಹಿಸಿಕೊಂಡು “ನಿಲ್ಸಿ ನನ್ನ ಮಕ್ಕಳಾ” ಎಂದು ಅಬ್ಬರಿಸಿದಾಗ ಕೆಲಸ ನಿಲ್ಲಿಸಿದ ಜನ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಮತ್ತು ಜನರ ನಡುವೆ ಮಾತುಕತೆ ನಡೆಯುತ್ತದೆ. ಏನು ಮಾಡುತ್ತಿದ್ದೀರಿ ಎಂಬ ದೇವತೆಯ ಪ್ರಶ್ನೆಗೆ ಜನರೆಲ್ಲ ನಿನಗೊಂದು ಗುಡಿ ಕಟ್ಟುತ್ತಿದ್ದೀವಿ ಎಂದು ಉತ್ತರಿಸುತ್ತಾರೆ. ಆಗ ದೇವತೆಯು ನನಗೆ ನೀವು ಮನೆಕಟ್ಟುತ್ತಿರುವಿರಾದರೆ ನನ್ನ ಮಕ್ಕಳಾದ ನಿಮಗೆಲ್ಲ ಮನೆ ಇದೆಯೋ ಎಂದು ಪ್ರಶ್ನಿಸುತ್ತಾಳೆ. ಆ ಜನರಲ್ಲಿ ಒಬ್ಬ ನನಗಿಲ್ಲ ಎಂದು ಉತ್ತರಿಸಿದಾಗ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ ಎಂದು ಆದೇಶಿಸಿದ ಮಂಚಮ್ಮ ಮನೆ ಮಂಚಮ್ಮನಾಗುತ್ತಾಳೆ. ಹೀಗೆ ಚಾವಣಿಯಿಲ್ಲದ ಗುಡಿಯಲ್ಲಿ ತಾಯಿ ಮಂಚಮ್ಮ ಇಂದಿಗೂ ಪೂಜಿತಳಾಗುತ್ತಿದ್ದಾಳೆ.

ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.
1. “ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೆ ಮನೆ ಬೇಡ.”
ಉ: ಈ ಮೇಲಿನ ವಾಕ್ಯವನ್ನು ದೇವನೂರು ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ’ ಎನ್ನುವ ವೈಚಾರಿಕ ಲೇಖನದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಮಂಚಮ್ಮ ದೇವತೆ ಜನರಿಗೆ ಹೇಳಿದ್ದಾಳೆ.
ಸಂದರ್ಭ: ಕವಿ ಸಿದ್ದಲಿಂಗಯ್ಯನವರು ಲೇಖಕರಿಗೆ ಒಮ್ಮೆ ಹೇಳಿದ ಕತೆಯಲ್ಲಿ ಬರುವ ಪ್ರಸಂಗ ಇದಾಗಿದ್ದು ಅದರಲ್ಲಿ ಬರುವ ಹಾಗೆ ಒಂದು ಗ್ರಾಮದ ಜನರು ತಮ್ಮ ಗ್ರಾಮ ದೇವತೆಗೋಸ್ಕರ ಗುಡಿ ಕಟ್ಟಲು ಪ್ರಾರಂಭಿಸುತ್ತಾರೆ. ಗುಡಿ ಚಾವಣಿಯ ಮಟ್ಟವನ್ನು  ತಲುಪಿದಾಗ ಇದ್ದಕ್ಕಿದ್ದಂತೆ ಜನರಿಗೆ ಪ್ರತ್ಯಕ್ಷಳಾದ ಮಂಚಮ್ಮ ದೇವತೆ ಅವರು ಮಾಡುತ್ತಿರುವ ಕಾರ್ಯದ ಕುರಿತು ವಿಚಾರಿಸುತ್ತಾಳೆ. ಜನರು ಅವಳಿಗಾಗಿಯೇ ಗುಡಿ ಕಟ್ಟುತ್ತಿರುವುದಾಗಿ ಹೇಳಿದಾಗ ಅವಳು ನಿಮಗೆಲ್ಲರಿಗೂ ಮನೆ ಇದೆಯೋ ಎಂದು ಪ್ರಶ್ನಿಸುತ್ತಾಳೆ. ಅವರಲ್ಲೊಬ್ಬ ತನಗಿಲ್ಲವೆಂದು ಹೇಳಿದಾಗ ಮಂಚಮ್ಮ ದೇವತೆ ಎಲ್ಲರಿಗೂ ಮನೆ ಆಗುವವರೆಗೆ ತನಗೆ ಮನೆ ಬೇಡವೆಂದು ಹೇಳುತ್ತಾಳೆ. ಸ್ವಾರಸ್ಯ: ಬದುಕಲು ನೆಲೆ ಇಲ್ಲದೇ ಎಷ್ಟೋ ಜನರು ಕಣ್ಣೆದುರಿಗೆ ಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಕಣ್ಣಿಗೆ ಕಾಣದ ದೇವತೆಗೆ ಮನೆ ಕಟ್ಟುವ ಪ್ರಯತ್ನ, ಅದನ್ನು ನೋಡಿದ ದೇವತೆಯೇ ಪ್ರತ್ಯಕ್ಷಳಾಗಿ ಸಮಾಜದಲ್ಲಿ ನಿಜವಾಗಿ ಯಾರಿಗೆ ಮನೆಯ ಅಥವಾ ಆಶ್ರಯದ ಅವಶ್ಯಕತೆ ಇದೆಯೋ ಅಂತವರಿಗೆ ನೆಲೆ ಒದಗಿಸಬೇಕಾದ ಅವಶ್ಯಕತೆಯನ್ನು ನೆರೆದ ಜನರಿಗೆ ಹೇಳುವ ಮೂಲಕ ಬದುಕಿಗೆ ಅಗತ್ಯವಾದ ಮಾನವೀಯ ಮೌಲ್ಯವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವನ್ನು ಪ್ರಸ್ತುತ ವಾಕ್ಯವು ಸೂಚಿಸುವುದು.

2. “ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.”
ಉ: ಈ ಮೇಲಿನ ವಾಕ್ಯವನ್ನು ದೇವನೂರು ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ’ ಎನ್ನುವ ವೈಚಾರಿಕ ಲೇಖನದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸಂದರ್ಭ: ಮನೋವೈದ್ಯರಾದ ಅಶೋಕ ಪೈ ಯವರು ಮನಸ್ಸಿನ ಬಗ್ಗೆ ನಡೆದ ಒಂದು ಸಂಶೋಧನಾ ಸತ್ಯದ ಕುರಿತು ಹೇಳುತ್ತಾ ಒಂದು ಕೊಠಡಿಯಲ್ಲಿ ಒಂದಷ್ಟು ಜನರು ಟೆಲಿವಿಷನ್ ವೀಕ್ಷಿಸುತ್ತಿರುವಾಗ ಅವರು ನೋಡುವ ಸನ್ನಿವೇಷಗಳಿಗೆ ತಕ್ಕಂತೆ ದುಃಖ ಅಥವಾ ಸಂತೋಷದ ಭಾವವನ್ನು ಅನುಭವಿಸುತ್ತಿರುವಾಗ ಅವರ ಭಾವವು ಅವರ ಪಕ್ಕದ ಕೊಠಡಿಯಲ್ಲಿ ಟೆಲಿವಿಷನ್ ನೋಡದೆ ಇರುವವರನ್ನು ಸ್ವಲ್ಪ ಮಟ್ಟಿಗಾದರೂ ತಲುಪಿ ಅವರು ಕೂಡ ದುಃಖ ಅಥವಾ ಸಂತೋಷದ ಭಾವವನ್ನು ಅಲ್ಪ ಮಟ್ಟಿಗೆ ತಾಳುತ್ತಾರೆ ಎಂದು ವಿವರಿಸಿದ್ದಾರೆ. ಇದನ್ನು ಗಮನಿಸಿದರೆ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು ಅರ್ಥವಾಗುತ್ತದೆ ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ಎಲ್ಲ ರೀತಿಯ ಭಾವನೆಗಳು ಪ್ರತಿಯೊಬ್ಬರಿಗೂ ಉಂಟಾಗುವಂತವೇ. ಇನ್ನೊಬ್ಬರಿಗೆ ಉಂಟಾದ ಭಾವನೆಗಳು ನಮ್ಮನ್ನು ತಟ್ಟಬಹುದು. ಯಾವುದೇ ಜೀವಿಗೆ ಉಂಟಾಗುವ ಅನುಭವಗಳು ಅಥವಾ ಸಂತೋಷ ದುಗುಡದ ಮನೋಭಾವನೆಗಳು ಪರಿಸರದಲ್ಲಿ ಉಸಿರಾಡುವ ಎಲ್ಲ ಜೀವಿಗಳನ್ನು ತಲುಪುತ್ತವೆ ಎಂಬುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.
 
3. “ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು”
ಉ: ಈ ಮೇಲಿನ ವಾಕ್ಯವನ್ನು ದೇವನೂರು ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ’ ಎನ್ನುವ ವೈಚಾರಿಕ ಲೇಖನದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸಂದರ್ಭ: ವಚನಕಾರರ ದೃಷ್ಟಿಯಲ್ಲಿ ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು. ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರವರದೇ ಇಷ್ಟ ದೈವ. ಅಂದರೆ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು ಎಂದು ಲೇಖಕರು ಹೇಳಿದ್ದಾರೆ. ಸ್ವಾರಸ್ಯ: ತಮ್ಮ ಪ್ರಜ್ಞೆಯನ್ನೇ ದೇವರು ಅಂದುಕೊಂಡಾಗ ಸುಳ್ಳು ಹೇಳಲು ಸಾಧ್ಯವಾಗುವುದಿಲ್ಲ. ಬೇರೆ ಯಾವುದೇ ದೇವರ ಮುಂದೆ ಸುಳ್ಳು ಹೇಳಿ ತಪ್ಪಿಸಿಕೊಳ್ಳಬಹುದು. ಆದರೆ ತಮ್ಮ ಪ್ರಜ್ಞೆಯ ಮುಂದೆ ಸುಳ್ಳು ಹೇಳಲು ಸಾಧ್ಯವಾಗದು ಎಂಬುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

4. “ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ”
ಉ: ಈ ಮೇಲಿನ ವಾಕ್ಯವನ್ನು ದೇವನೂರು ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ’ ಎನ್ನುವ ವೈಚಾರಿಕ ಲೇಖನದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸಂದರ್ಭ: ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೋ. ಈ ಅನುಕಂಪನ ಇಡೀ ಜೀವ ಸಂಕುಲವನ್ನೇ ಒಂದು ಎಂದು ಹೇಳುತ್ತದೆ. ಬುದ್ಧನ ಕಾರುಣ್ಯ ಇಲ್ಲಿಂದಲೇ ಮೂಡಿರಬಹುದು. ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತು – ಅದು ಘಾಸಿಗೊಳಿಸುವುದು – ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನೇ. ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ಮನುಷ್ಯನು ತನ್ನಲ್ಲಿರುವ ಕ್ರೌರ್ಯದ ಮನೋಭಾವನೆಗಳನ್ನು ಕಿತ್ತೊಗೆದು ಸರ್ವರನ್ನು ಮಾನವೀಯತೆಯಿಂದ ನೋಡಬೇಕಾದುದು ಅತೀ ಅಗತ್ಯವೆಂಬ ಲೇಖಕರ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ.
 
ಭಾಷಾ ಚಟುವಟಿಕೆ
ಕೊಟ್ಟಿರುವ ಪದಗಳ ವಿರುದ್ಧರ್ಥಕ ಪದ ಬರೆಯಿರಿ.
ಒಳಿತು x ಕೆಡುಕು,
ಸಮಷ್ಟಿ x ವ್ಯಷ್ಟಿ,  
ಪುಣ್ಯ x ಪಾಪ,
ಬೆಳಕು x ಕತ್ತಲು,  
ಧರ್ಮ x ಅಧರ್ಮ

ಅತಿ ಕಡಿಮೆ ಕಾಲ ಮತ್ತು ಅತಿ ಹೆಚ್ಚು ಕಾಲ ಅಮೇರಿಕಾದ ಅಧ್ಯಕ್ಷರಾಗಿದ್ದವರು ಯಾರು? | President of America|

 ಅತಿ ಕಡಿಮೆ ಕಾಲ ಮತ್ತು ಅತಿ ಹೆಚ್ಚು ಕಾಲ ಅಮೇರಿಕಾದ ಅಧ್ಯಕ್ಷರಾಗಿದ್ದವರು ಯಾರು?

ಪ್ರಶ್ನೆ: ಅಮೇರಿಕಾದ 9ನೇ ಅಧ್ಯಕ್ಷ ಯಾರು?
ಉತ್ತರ: ವಿಲಿಯಮ್ಸ್  ಹೆನ್ರಿ ಹೆರಿಸನ್
 
ಪ್ರಶ್ನೆ: ಅಧಿಕಾರದಲ್ಲಿರುವಾಗಲೆ ಸಾವಿಗಿಡಾದ ಮೊದಲ ಅಮೇರಿಕಾದ ಅಧ್ಯಕ್ಷ ಯಾರು?
ಉತ್ತರ: ವಿಲಿಯಮ್ಸ್  ಹೆನ್ರಿ ಹೆರಿಸನ್
 
ಪ್ರಶ್ನೆ: ಅಮೇರಿಕಾದ ಅಧ್ಯಕರಾಗಿ ಅತಿ ಕಡಿಮೆ ಅವಧಿಗೆ ಅಧಿಕಾರದಲ್ಲಿದ್ದ ಅಧ್ಯಕ್ಷ ಯಾರು?
 ಉತ್ತರ: ವಿಲಿಯಮ್ಸ್  ಹೆನ್ರಿ ಹೆರಿಸನ್
 
ಪ್ರಶ್ನೆ: ಹೆನ್ರಿ ವಿಲಿಯಮ್ಸ್ ಎಷ್ಟು ದಿನಗಳ ಕಾಲ ಅಧಿಕಾರದಲ್ಲಿದ್ದರು?
ಉತ್ತರ: 31 ದಿನಗಳು
 
ಪ್ರಶ್ನೆ: ಅಮೇರಿಕಾದಲ್ಲಿ ಅತಿ ಹೆಚ್ಚು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು?
ಉತ್ತರ: ಫ್ರಾಂಕ್ಲಿನ್ ಡಿ. ರೂಸ್ ವೆಲ್ಟ್ (ನಾಲ್ಕು ಬಾರಿ)
 
ಪ್ರಶ್ನೆ: ಅಮೇರಿಕಾ ಇದುವರೆಗೆ ಎಷ್ಟು ಅಧ್ಯಕ್ಷರನ್ನು ಕಂಡಿದೆ?
ಉತ್ತರ: 45 (ಡೋನಾಲ್ಡ್ ಟ್ರಂಪ್ 45 ನೇ ಅಧ್ಯಕ್ಷರು)
 
ಪ್ರಶ್ನೇ: ಅಮೇರಿಕಾದಲ್ಲಿ ಪ್ರತಿ ಎಷ್ಟು ವರ್ಷಗಳಿಗೊಮ್ಮೆ ಅಧ್ಯಕ್ಷರ ಚುನಾವಣೆ ನಡೆಯುತ್ತದೆ?
ಉತ್ತರ: 4 ವರ್ಷಗಳು
 
ಪ್ರಶ್ನೆ: ಅಮೇರಿಕಾದಲ್ಲಿ ಗರಿಷ್ಟ ಎಷ್ಟು ಬಾರಿ ಅಧ್ಯಕ್ಷರಾಗಿ ಆಯ್ಕೆ ಯಾಗಲು ಅವಕಾಶವಿದೆ?
ಉತ್ತರ: ಎರಡು ಬಾರಿ ಮಾತ್ರ. 
ಅಮೇರಿಕಾದಲ್ಲಿ ಎರಡು ಸಾರಿ ಮಾತ್ರ ಅಧ್ಯಕ್ಷರಾಗುವುದಕ್ಕೆ ಅವಕಾಶ ನೀಡಿರುವುದು ಮೂರನೇ ಬಾರಿ ಅಮೇರಿಕಾದ ಅಧ್ಯಕ್ಷರಾಗುವುದಕ್ಕೆ ಅವಕಾಶವಿಲ್ಲ.
 

 

10th First Language Kannada Chapter-4 Bhagyashilpigalu| 10ನೇ ತರಗತಿ ಪ್ರಥಮ ಭಾಷೆ ಕನ್ನಡ ಗಧ್ಯ-4 ಭಾಗ್ಯಶಿಲ್ಪಿಗಳು (ನಾಲ್ವಡಿ ಕೃಷ್ಣರಾಜ ಒಡೆಯರು, ಸರ್, ಎಂ, ವಿಶ್ವೇಶ್ವರಯ್ಯ| ಸಮಿತಿ ರಚನೆ/ ಡಿ.ಎಸ್.ಜಯಪ್ಪಗೌಡ

 10 ನೇ ತರಗತಿ ಪ್ರಥಮ ಭಾಷೆ ಕನ್ನಡ ಗಧ್ಯ-4 ಭಾಗ್ಯಶಿಲ್ಪಿಗಳು (ನಾಲ್ವಡಿ ಕೃಷ್ಣರಾಜ ಒಡೆಯರು, ಸರ್, ಎಂ, ವಿಶ್ವೇಶ್ವರಯ್ಯ| ಸಮಿತಿ ರಚನೆ/ ಡಿ.ಎಸ್.ಜಯಪ್ಪಗೌಡ

4. ಭಾಗ್ಯಶಿಲ್ಪಿಗಳು

I ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
ಉ: ನಾಲ್ವಡಿ ಕೃಷ್ಣರಾಜ ಒಡೆಯರು ಕ್ರಿ.ಶ.1895ರಲ್ಲಿ ತಮ್ಮ 10ನೆಯ ವಯಸ್ಸಿನಲ್ಲಿ ಪಟ್ಟಾಭಿಷಿಕ್ತರಾದರು.

2. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?
ಉ: ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಂಕಣಬದ್ಧರಾದರು.

3. ಏಷ್ಯಾಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ಯಾವುದು?
ಉ: 1900ರಲ್ಲಿ ಶಿವನಸಮುದ್ರದ ಕಾವೇರಿ ನದಿಯ ಬಳಿ ಸ್ಥಾಪಿಸಿದ ಜಲವಿದ್ಯುತ್ ಉತ್ಪಾದನಾ ಕೇಂದ್ರ ಏಷ್ಯಾಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ.

4. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು?
ಉ: ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ‘ಸರ್’ ಪದವಿಯನ್ನು ನೀಡಿ ಗೌರವಿಸಿತು.

5. ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು?

ಉ: ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು.

6. ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?

ಉ: ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ‘ಎಂಜಿನಿಯರ್ಸ್ ದಿನಾಚರಣೆ’ ಯನ್ನು ಆಚರಿಸಲಾಗುತ್ತದೆ.

II ಮೂರು - ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?
ಉ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟರು. ನಗರಪಾಲಿಕೆಗಳು ಹಾಗೂ ಗ್ರಾಮ ಪಂಚಾಯತಿಗಳು ಕಾರ್ಯನಿರ್ವಹಿಸಲು ಆರಂಭ ಮಾಡಿದವು. ಇವರ ಕಾಲದಲ್ಲಿ 1. ಗ್ರಾಮ ನಿರ್ಮಲೀಕರಣ 2. ವೈದ್ಯಸಹಾಯ 3. ವಿದ್ಯಾಪ್ರಚಾರ 4. ನೀರಿನ ಸೌಕರ್ಯ 5. ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು.

2. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?
ಉ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾ ಕೇಂದ್ರ ಪ್ರಾರಂಭವಾಯಿತು. ಇದು ಭಾರತ ಮಾತ್ರವಲ್ಲ, ಏಷ್ಯಾ ಖಂಡದಲ್ಲಿಯೇ ಮೊದಲ ಜಲವಿದ್ಯುತ್ ಉತ್ಪಾದನಾ ಯೋಜನೆ. 1907ರಲ್ಲಿ ವಾಣಿವಿಲಾಸ ಸಾಗರ (ಮಾರಿಕಣಿವೆ) ಕಟ್ಟಲ್ಪಟ್ಟಿತು. 1911ರಲ್ಲಿ ಕೃಷ್ಣರಾಜ ಸಾಗರ ಇವರ ಬೃಹತ್ ಮುಂಗಾಣ್ಕೆಯ ಕೊಡುಗೆ.

3. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ?
ಉ: ವಿಶ್ವೇಶ್ವರಯ್ಯನವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದರು. ಶಿಕ್ಷಣವು ಸಂಜೀವಿನಿ ಎಂದರಿತಿದ್ದ ಅವರು ಶಿಕ್ಷಣದ ಹಲವು ಯೋಜನೆಗಳನ್ನು ರೂಪಿಸಿದರು. “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸ್ವತ್ತಾಗದೇ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು” ಎಂಬುದನ್ನು ಮನಗಂಡಿದ್ದರು.

4. ನೆಹರೂ ಅವರು ಸರ್ ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಏನೆಂದು ಹೇಳಿದ್ದಾರೆ?
ಉ: “ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾತಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ”. ಎಂದು ಪಚಿಡಿತ್ ಜವಾಹರಲಾಲ್ ಅವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಅವರ ಶತಮಾನೋತ್ಸವ ಸಂದರ್ಭದಲ್ಲಿ ವಿಶ್ವೇಶ್ವರಯ್ಯನವರ ಕುರಿತು ಹೇಳಿದರು.

5. ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯನವರು ಮಾಡಿದ ಮಾರ್ಪಾಡುಗಳಾವುವು?
ಉ: ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರಬುನಾದಿ ಹಾಕುವ ಉದ್ದೇಶದಿಂದ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿದ ವಿಶ್ವೇಶ್ವರಯ್ಯನವರು 1913ರಲ್ಲಿ ಮೈಸೂರು ಬ್ಯಾಂಕ್ ಸ್ಥಾಪಿಸಿದರು. ಉಳಿತಾಯ ಬ್ಯಾಂಕುಗಳು, ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಕೈಗಾರಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳ ರಚನೆ ಮಾಡಿದರು. ಸಾರ್ವಜನಿಕ ಜೀವ ವಿಮಾ ಯೋಜನೆ ಜಾರಿಗೆ ತಂದರು. ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲದ ಸೌಲಭ್ಯ ನೀಡಲು ಸಹಕಾರಿ ಕ್ಷೇತ್ರವನ್ನು ಬಲವರ್ಧನೆಗೊಳಿಸಿದರು. ಪ್ರಾಂತೀಯ ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿದರು. ರಾಜ್ಯದ ಆಸ್ತಿಯನ್ನು ಹೆಚ್ಚಿಸಿ, ಆದಾಯ ತರುವುದರ ಮೂಲಕ ಅಭಿವೃದ್ಧಿ ಕಾರ್ಯಗಳ ಪ್ರಭಾವಗಳನ್ನು ಅಳೆಯಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಹೊಸ ದೃಷ್ಟಿಕೋನವನ್ನು ಕಂಡುಕೊಂಡರು.

III ಎಂಟು - ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ‘ಮಾದರಿ ಮೈಸೂರು ರಾಜ್ಯ’ ಹೇಗಾಯಿತು?
ಉ: ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದರು. ಇವರ ಕಾಲದಲ್ಲಿ ಪ್ರಜಾಪ್ರತಿನಿಧಿ ಸಭೆಯು ನೂತನ ರೂಪವನ್ನು ಪಡೆದು ನಿಜವಾದ ಜನಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು. 1923ರಲ್ಲಿ ಇವರು ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ಧ ಸಂಸ್ಥೆಯಾಗಿ ಮಾರ್ಪಡಿಸಿ ಪ್ರಜಾತಂತ್ರದ ದೃಷ್ಟಿಯಿಂದ ಭಾರತದಲ್ಲಿಯೇ ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುವಂತೆ ಮಾಡಿದರು. 1907ರಲ್ಲಿ ಇವರು ನ್ಯಾಯ ವಿಧಾಯಕ ಸಭೆಯನ್ನು ಸ್ಥಾಪಿಸಿದರು. ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟರು. ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಗೆ ಒತ್ತು ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಇವರ ಆಡಳಿತಾವಧಿಯಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆ ಶಿವನಸಮುದ್ರದ ಕಾವೇರಿ ನದಿಯ ಬಳಿ ಪ್ರಾರಂಭವಾಯಿತು. ನಾಡಿನ ಮೊದಲ ವಿಶ್ವವಿದ್ಯಾಲಯ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಹಲವಾರು ಸಾಮಾಜಿಕ ಕಾನೂನುಗಳನ್ನು ಜಾರಿಗೆ ತಂದಿದ್ದರು.
ಹಲವಾರು ಸಾಮಾಜಿಕ ಸುಧಾರಣೆಗಳ ಮೂಲಕ ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಹೆಸರಾಗಿದ್ದ ಇವರು ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವನ್ನಾಗಿ ರೂಪಿಸಿದರು.

2. ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ?
ಉ: ನಾಲ್ವಡಿ ಕೃಷ್ಣರಾಜ ಒಡೆಯರಿಂದ ದಿವಾನರಾಗಿ ನೇಮಕವಾದ ವಿಶ್ವೇಶ್ವರಯ್ಯನವರು ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿ ಕಛೇರಿಯ ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು. ಸಂಸ್ಥಾನದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧಿಕಾರವನ್ನು ಪ್ರತ್ಯೇಕಗೊಳಿಸಿದರು. ರಾಜ್ಯಪ್ರವಾಸ ಮಾಡಿ ಅನೇಕ ಕಾರ್ಯ ನಡೆಸಿದರು. ಸಮರ್ಥ ಕಾರ್ಯ ನಿರ್ವಹಣೆಗಾಗಿ ಸಮಿತಿ ರಚನೆಗೆ ಪ್ರಾಶಸ್ತ್ಯ ನೀಡಿದರು. ನೇಮಕಾತಿಯಲ್ಲಿ ಸ್ಥಳಿಯರಿಗೆ ಆದ್ಯತೆ ನೀಡಿದರು. ಮೈಸೂರು ಮಾದರಿ ಎಂಬ ಹೊಸ ಆಡಳಿತ ಜನ್ಮ ತಾಳಲು ಕಾರಣರಾದರು. ಇವರ ಆಡಳಿತಾವಧಿಯಲ್ಲಿ ಮೈಸೂರು ರಾಜಧಾನಿಯಾಗಿ ಮತ್ತು ರಾಜ್ಯದ ಎರಡನೆಯ ದೊಡ್ಡ ನಗರವಾಗಿ ಪ್ರಸಿದ್ಧಿ ಪಡೆಯಿತು. ಮೈಸೂರಿನ ಹೊಸ ಅರಮನೆ, ಸಿ.ರಂಗಾಚಾರ್ಲು ಪುರಭವನ, ಅರಮನೆ ವಿಸ್ತರಣೆ, ಕೃಷ್ಣರಾಜೇಂದ್ರ ಆಸ್ಪತ್ರೆ, ಲಲಿತಮಹಲ್ ಅರಮನೆಯ ತಳಹದಿ, ಮತ್ತು ಪ್ರಧಾನ ಅರಮನೆಯ ಕಛೇರಿ ಸಮುಚ್ಚಯಗಳು ಇವರ ಕಾಲದಲ್ಲಿಯೇ ನಿರ್ಮಾಣಗೊಂಡವು. ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದರು. ಆನಾರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಹಲವಾರು ಆಸ್ಪತ್ರೆಗಳನ್ನು ಪ್ರರಂಭಿಸಿದರು. ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಹೀಗೆ ವಿಶ್ವೇಶ್ವರಯ್ಯ ಅವರು ಹೊಸಯುಗದ ಹರಿಕಾರರಾಗಿ ಮೈಸೂರು ಸಂಸ್ಥಾನಕ್ಕೆ ನವಚೈತನ್ಯವನ್ನು ತುಂಬಿದರು.

3. ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಗಳನ್ನು ತಿಳಿಸಿ?
ಉ: ವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದರು. ಶಿಕ್ಷಣವು ಸಂಜೀವಿನಿ ಎಂಬುದನ್ನರಿತಿದ್ದ ಅವರು ಶಿಕ್ಷಣದ ಯೋಜನೆಗಳನ್ನು ರೂಪಿಸಿದರು. 1913ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು. ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದ ಪ್ರೌಢ ಶಿಕ್ಷಣ ಸಂಸ್ಥೆಗಳನ್ನು ಬೇರ್ಪಡಿಸಿ ಸಂಸ್ಥಾನವೇ ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಇವರ ದೂರದೃಷ್ಟಿಯ ಫಲಶೃತಿ. ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಬೆಂಗಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು. ಮಹಿಳೆಯರಿಗಾಗಿ ಗೃಹ ಶಿಕ್ಷಣ ಶಾಲೆಗಳನ್ನು ಸ್ಥಾಪಿಸಿದರು. ವಿದ್ಯಾರ್ಥಿ ವೇತನವನ್ನು ಕೊಡುವುದರ ಮೂಲಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟರು. ಗ್ರಂಥಾಲಯಗಳ ವ್ಯವಸ್ಥೆಗೆ ಅಸ್ಥಿಭಾರ ಹಾಕಿದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.

IV ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. “ಸಾಮಾಜಿಕ ಕಾನೂನುಗಳ ಹರಿಕಾರ.”
ಉ: ಈ ಮೇಲಿನ ವಾಕ್ಯವನ್ನು ಭಾಗ್ಯಶಿಲ್ಪಿಗಳು ಗದ್ಯಭಾಗದ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಎಂಬ ಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲದಲ್ಲಿ ಮೈಸೂರು ಸಂಸ್ಥಾನವು ಮಾದರಿ ಮೈಸೂರು ಎಂದು ಹೆಸರಾಗಿತ್ತು. ಇವರು ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದರು. ಇವರು ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಹೆಸರಾಗಿದ್ದರು ಎಂದು ಹೇಳುವಾಗ ಮೇಲಿನ ಮಾತು ಬಂದಿದೆ.
ಸ್ವಾರಸ್ಯ: ಮೈಸೂರು ಸಂಸ್ಥಾನದ ಅಭಿವೃದ್ಧಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ಹಲವಾರು ಕ್ರಮಗಳನ್ನು ಕೈಗೊಂಡಿದ್ದರಿಂದ ಅವರು ಮೇಲಿನಂತೆ ಹೆಸರಾಗಿದ್ದರು.

2. “ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು.”
ಉ: ಈ ಮೇಲಿನ ವಾಕ್ಯವನ್ನು ಡಿ.ಎಸ್.ಜಯಪ್ಪಗೌಡರು ಬರೆದ ದಿವಾನ್ ಸರ್ ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ಕೃತಿಯಿಂದ ಆರಿಸಲಾದ ಸರ್ ಎಂ.ವಿಶ್ವೇಶ್ವರಯ್ಯ ಎನ್ನುವ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಚಿಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಖಾನ್ ದೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಗಾಲುವೆಯನ್ನು ನಿರ್ಮಿಸುವ ಕಾರ್ಯದಲ್ಲಿ ಯಶಸ್ವಿಯಾದರು. ಸಿಂಧ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದರು. ಪೂನಾದ ಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದರು ಎನ್ನುವಾಗ ಲೇಖಕರು ಮೇಲಿನಂತೆ ಹೇಳಿದ್ದಾರೆ.
ಸ್ವಾರಸ್ಯ: ವಿಶ್ವೇಶ್ವರಯ್ಯನವರು ವೈಜ್ಞಾನಿಕ ವಿಮರ್ಶಾ ಶಕ್ತಿಯನ್ನು ಹೊಂದಿದ್ದರು. ದೂರದರ್ಶಿತ್ವ ಶಕ್ತಿ ಅವರಲ್ಲಿತ್ತು. ಸದಾ ಹೊಸತನ್ನು ಅನ್ವೇಷಿಸುವ ಮೂಲಕ ಸಮಾಜಕ್ಕೆ ಒಳಿತು ಮಾಡುವ ಮನೋಭಾವ ಅವರದಾಗಿತ್ತು. ಅವರ ಸಾಧನೆಗಳು ಅವರ ವ್ಯಕ್ತಿತ್ವಕ್ಕೆ ಒಂದು ಕಿರೀಟದ ಹಾಗೆ ಎನ್ನುವುದನ್ನು ಮೇಲಿನ ವಾಕ್ಯ ಸ್ಪಷ್ಟಪಡಿಸುವುದು.

3. “ಆದರ್ಶ ಪುರುಷರೊಬ್ಬರು ದಿವಾನರಾದದ್ದು ಮೈಸೂರು ಸಂಸ್ಥಾನದ ಪುಣ್ಯ ವಿಶೇಷವೇ ಸರಿ.”

ಉ: ಈ ಮೇಲಿನ ವಾಕ್ಯವನ್ನು ಡಿ.ಎಸ್.ಜಯಪ್ಪಗೌಡರು ಬರೆದ ದಿವಾನ್ ಸರ್ ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ಕೃತಿಯಿಂದ ಆರಿಸಲಾದ ಸರ್ ಎಂ.ವಿಶ್ವೇಶ್ವರಯ್ಯ ಎನ್ನುವ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ನಾಲ್ವಡಿ ಕೃಷ್ಣರಾಜ ಒಡೆಯರಿಂದ ದಿವಾನರಾಗಿ ನೇಮಕವಾದ ಸರ್ ಎಂ.ವಿಶ್ವೇಶ್ವರಯ್ಯ ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿ ಕಛೇರಿಯ ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು.
ಸಮರ್ಥಕಾರ್ಯ ನಿರ್ವಹಣೆಗಾಗಿ ಸಮಿತಿ ರಚನೆಗೆ ಪ್ರಾಶಸ್ತ್ಯ ನೀಡಿದರು. ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿದರು. ಶ್ವೇಶ್ವರಯ್ಯನವರ ಕುರಿತು ಅಭಿಮಾನ ಹೊಂದಿದ ಜನರು ಮೇಲಿನಂತೆ ಅವರ ಕುರಿತು ಹೇಳಿದರು ಎಂದು ಲೇಖಕರು ವಿವರಿಸಿದ್ದಾರೆ.
ಸ್ವಾರಸ್ಯ: ಸ್ಥಳೀಯರಿಗೆ ಆದ್ಯತೆ ನೀಡುವ ಮೂಲಕ ಅಲ್ಲಿನ ನಿವಾಸಿಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿದ್ದರು. ಆದ್ದರಿಂದ ಅಲ್ಲಿನ ನಿವಾಸಿಗಳಲ್ಲಿ ಇಂತಹ ದಿವಾನರು ಸಿಕ್ಕಿದ್ದು ನಮ್ಮ ಭಾಗ್ಯ ಎಂಬ ಭಾವನೆ ಮನೆಮಾಡಿತ್ತು ಎಂದು ಮೇಲಿನ ವಾಕ್ಯವು ಸೂಚಿಸುವುದು.

4. “ಮೊಟ್ಟಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕು.”

ಉ: ಈ ಮೇಲಿನ ವಾಕ್ಯವನ್ನು ಭಾಗ್ಯಶಿಲ್ಪಿಗಳು ಗದ್ಯಭಾಗದ  ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಎಂಬ ಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದರು. ಅವರ ಆಡಳಿತಾವಧಿಯಲ್ಲಿ ಹಲವಾರು ಸಾಮಾಜಿಕ ಕಾನೂನುಗಳನ್ನು ಜಾರಿಗೆ ತಂದಿದ್ದರು. ಅದರಲ್ಲಿ ಅವರು ಕ್ರಿ.ಶ.1927ರಲ್ಲಿ ಜಾರಿಗೆ ತಂದ ಸ್ತ್ರೀಯರಿಗೆ ಮತದಾನದ ಹಕ್ಕೂ ಕೂಡ ಒಂದಾಗಿತ್ತು.
ಸ್ವಾರಸ್ಯ: ನಾಲ್ವಡಿ ಕೃಷ್ಣರಾಜ ಒಡೆಯರು ಜನತೆಯ ಬಗ್ಗೆ ಅದರಲ್ಲೂ ವಿಶೇಷವಾಗಿ ಸ್ತ್ರೀಯರ ಪರವಾಗಿ ಹೊಂದಿದ್ದ ಸಾಮಾಜಿಕ ಕಳಕಳಿಯನ್ನು ಮೇಲಿನ ವಾಕ್ಯವು ಸೂಚಿಸುವುದು.

V ಬಿಟ್ಟ ಸ್ಥಳವನ್ನು ಸರಿಯಾದ ಪದಗಳಿಂದ ತುಂಬಿರಿ.
1. ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ ಏಜೆಂಟರಾಗಿ ಕಾರ್ಯ ನಿರ್ವಹಿಸಿದವರು _____
ಉ: ಅವರ ತಾಯಿ ಮಹಾರಾಣಿ ವಾಣಿವಿಲಾಸರವರು.
2. 1914ರಲ್ಲಿ ಶಾಲಾ ಪ್ರವೇಶಕ್ಕೆ _____ನಿಷೇಧವಾಯಿತು.
ಉ: ಜಾತಿಪರಿಗಣನೆಯ ನಿಷೇಧ
3. ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದಲ್ಲಿ ____ಆಗಿ ಸೇವೆ ಪ್ರಾರಂಭಿಸಿದರು.
ಉ: ಸಹಾಯಕ ಎಂಜಿನಿಯರ್
4. ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ____ಅವರು ವಿಶ್ವೇಶ್ವರಯ್ಯ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಉ: ಲಾರ್ಡ್ ಸಚಿಡ್ ಹಸ್ರ್ಟ್
5. ಭಾರತ ಸರ್ಕಾರವು ವಿಶ್ವೇಶ್ವರಯ್ಯನವರಿಗೆ ____ ಎಂಬ ಪ್ರಶಸ್ತಿ ನೀಡಿ ಗೌರವಿಸಿತು.
ಉ: ಭಾರತ ರತ್ನ

VI ಭಾಷಾ ಚಟುವಟಿಕೆ

1. ತತ್ಸಮ ತದ್ಭವ ಬರೆಯಿರಿ
ವಂಶ - ಬಂಚ   
ಸ್ಥಾನ – ತಾಣ   
ಯಶ – ಜಸ   
ಪಟ್ಟಣ - ಪತ್ತನ
ಕಾರ್ಯ - ಕಜ್ಜ




 

X STANDARD SECOND LANGUAGE ENGLISH-2020-21

 X STANDARD SECOND LANGUAGE ENGLISH-2020-21 STUDY MATERIAL FOR THE YEAR 2020-21 For Class 10 Karnataka Secondary Education Examination Board...